ಗೆಲುವಿನಿಂದಲೇ ಗೆಲುವು ಮೂಡಿಬರುತ್ತದೆ

* ಸಂಧ್ಯಾ ದರ್ಶಿನಿ, ಬೆಂಗಳೂರು
ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನು ತನ್ನ ಹೊಲದಲ್ಲಿ ತುಂಬಾ ಒಳ್ಳೆಯ ಗುಣಮಟ್ಟದ ಜೋಳವನ್ನ ಬೆಳೆಯುತ್ತಿದ್ದ. ಆತ ಬೆಳೆಯುತ್ತಿದ್ದ ಜೋಳ ಪ್ರತೀ ವರ್ಷ ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದ "ಜೋಳ-ಮೇಳ"ದಲ್ಲಿ ಬಹುಮಾನ ಗೆಲ್ಲುತ್ತಿತ್ತು.
ಒಮ್ಮೆ ಸುದ್ದಿಗಾರನೊಬ್ಬ ಈ ರೈತನ ಸಂದರ್ಶನ ಮಾಡಿ ಅಚ್ಚರಿಯ ಸಂಗತಿಯೊಂದನ್ನ ತಿಳಿದುಕೊಂಡ. ರೈತ ತಾನು ಬೆಳೆಯುತ್ತಿದ್ದ ಉತ್ತಮ ಗುಣಮಟ್ಟದ ಜೋಳದ ಕಾಳುಗಳನ್ನು ತನ್ನ ಅಕ್ಕ-ಪಕ್ಕದ ರೈತರಿಗೂ ಹಂಚುತ್ತಿದ್ದ.
"ನಿಮ್ಮ ಅಕ್ಕ-ಪಕ್ಕದ ರೈತರು ಕೂಡ 'ಜೋಳ-ಮೇಳ'ದಲ್ಲಿ ಭಾಗವಹಿಸುವಾಗ ಅದ್ಹೇಗೆ ನೀವು ನಿಮ್ಮ ಉತ್ತಮವಾದ ಕಾಳುಗಳನ್ನ ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯ?"ಎಂದು ವರದಿಗಾರ ಕೇಳಿದ.
ಅದಕ್ಕಾರೈತ "ಯಾಕಣ್ಣ? ನಿನಗೀ ವಿಷಯ ಗೊತ್ತಿಲ್ವಾ? ಹಣ್ಣಾಗಿ ಮಾಗುತ್ತಿರುವ ಜೋಳದ ಹೊಬಂಡನ್ನು ಗಾಳಿ ಎತ್ತಿ ಒಯ್ದು ಹೊಲದಿಂದ ಹೊಲಕ್ಕೆ ಹರಡುತ್ತದೆ. ನನ್ನ ಸುತ್ತ-ಮುತ್ತಲಿನ ಹೊಲಗಳಲ್ಲಿ ಒಳ್ಳೆಯ ಗುಣಮಟ್ಟದ ಜೋಳ ಬೆಳೆಯದಿದ್ದರೆ, ಒಂದು ತಳಿಯೊಂದಿಗೆ ಇನ್ನೊಂದು ತಳಿ ಕೂಡಿಕೊಂಡು, ಜೋಳದ ಗುಣಮಟ್ಟ ಕುಸಿಯಬಹುದು. ನಾನು ಒಳ್ಳೆಯ ಬೆಳೆ ತೆಗೆಯಬೇಕಾದರೆ ನನ್ನ ನೆರೆಯವರೂ ಒಳ್ಳೆಯದನ್ನೇ ಬೆಳೆಯಬೇಕು".
ಈ ರೈತ ಜೀವನದ ಸರಿಯಾದ ಒಳಾರ್ಥವನ್ನ ತಿಳಿಸಿಕೊಟ್ಟಿದ್ದ. ಈತನ ನೆರೆಹೊರೆಯವರು ಒಳ್ಳೆಯ ಜೋಳ ಬೆಳೆಯದೇ ಈತ ಒಳ್ಳೆಯ ಜೋಳವನ್ನು ಬೆಳೆಯಲು ಸಾಧ್ಯವಿಲ್ಲ. ಇದು ಜೀವನದ ಮತ್ತೊಂದು ಆಯಾಮ, ಮತ್ತೊಂದು ಹರವು.
ಯಾರು ನೆಮ್ಮದಿಯಾಗಿರಲು ಬಯಸುತ್ತಾರೋ, ಅವರು ತಮ್ಮ ನೆರೆ-ಹೊರೆಯವರೂ ನೆಮ್ಮದಿಯಾಗಿರಲು ನೆರವಾಗಬೇಕು. ಯಾರು ಒಳ್ಳೆಯ ರೀತಿ ಬದುಕಬೇಕೆಂದಿರುವರೋ , ಅವರು ಇತರರೂ ಒಳ್ಳೆಯ ರೀತಿಯಲ್ಲಿ ಬದುಕಲು ಅನುವು ಮಾಡಿಕೊಡಬೇಕು. ಜೀವನದ ಮೌಲ್ಯವಿರುವುದು ಎಷ್ಟು ಕಾಲ ಜೀವಿಸಿದರು ಎನ್ನುವುದರಲ್ಲಲ್ಲ, ತಮ್ಮ ಜೀವಿತದಲ್ಲಿ ಎಷ್ಟು ಜನರ ಮೇಲೆ ಪರಿಣಾಮ ಬೀರಿದರು ಎನ್ನುವುದರಲ್ಲಿ.
ಈ ಕಥೆಯಿಂದ ಕಲಿಯಬೇಕಾದ ಪಾಠ: ಒಬ್ಬಂಟಿಯಾಗಿ ಗೆಲ್ಲುವುದು ಕಷ್ಟದ ಮಾತು. ಹಲವಾರು ಬಾರಿ ಗೆಲುವು ಒಗ್ಗಟ್ಟಿನ ಕೆಲಸದಲ್ಲಿ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯಲ್ಲಿ ಅಡಗಿರುತ್ತದೆ. ಆದ್ಧರಿಂದ, ನಿಮ್ಮಲ್ಲಿರುವ ಒಳ್ಳೆಯ ಆಚಾರಗಳನ್ನು, ಆಲೋಚನೆಗಳನ್ನು ಮತ್ತು ನಿಮ್ಮಲ್ಲಿರುವ ತಿಳಿವಳಿಕೆಯನ್ನು ನಿಮ್ಮೊಡನೆ ಕೆಲಸ ಮಾಡುವವರೊಂದಿಗೆ ಹಂಚಿಕೊಳ್ಳಿ.
ಯಾರೋ ಹೇಳಿರುವಂತೆ: "ಗೆಲುವಿನಿಂದಲೇ ಗೆಲುವು ಮೂಡುತ್ತದೆ."
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications