ಗೆಲುವಿನಿಂದಲೇ ಗೆಲುವು ಮೂಡಿಬರುತ್ತದೆ

* ಸಂಧ್ಯಾ ದರ್ಶಿನಿ, ಬೆಂಗಳೂರು
ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದ. ಅವನು ತನ್ನ ಹೊಲದಲ್ಲಿ ತುಂಬಾ ಒಳ್ಳೆಯ ಗುಣಮಟ್ಟದ ಜೋಳವನ್ನ ಬೆಳೆಯುತ್ತಿದ್ದ. ಆತ ಬೆಳೆಯುತ್ತಿದ್ದ ಜೋಳ ಪ್ರತೀ ವರ್ಷ ರಾಜ್ಯಮಟ್ಟದಲ್ಲಿ ನಡೆಯುತ್ತಿದ್ದ "ಜೋಳ-ಮೇಳ"ದಲ್ಲಿ ಬಹುಮಾನ ಗೆಲ್ಲುತ್ತಿತ್ತು.
ಒಮ್ಮೆ ಸುದ್ದಿಗಾರನೊಬ್ಬ ಈ ರೈತನ ಸಂದರ್ಶನ ಮಾಡಿ ಅಚ್ಚರಿಯ ಸಂಗತಿಯೊಂದನ್ನ ತಿಳಿದುಕೊಂಡ. ರೈತ ತಾನು ಬೆಳೆಯುತ್ತಿದ್ದ ಉತ್ತಮ ಗುಣಮಟ್ಟದ ಜೋಳದ ಕಾಳುಗಳನ್ನು ತನ್ನ ಅಕ್ಕ-ಪಕ್ಕದ ರೈತರಿಗೂ ಹಂಚುತ್ತಿದ್ದ.
"ನಿಮ್ಮ ಅಕ್ಕ-ಪಕ್ಕದ ರೈತರು ಕೂಡ 'ಜೋಳ-ಮೇಳ'ದಲ್ಲಿ ಭಾಗವಹಿಸುವಾಗ ಅದ್ಹೇಗೆ ನೀವು ನಿಮ್ಮ ಉತ್ತಮವಾದ ಕಾಳುಗಳನ್ನ ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯ?"ಎಂದು ವರದಿಗಾರ ಕೇಳಿದ.
ಅದಕ್ಕಾರೈತ "ಯಾಕಣ್ಣ? ನಿನಗೀ ವಿಷಯ ಗೊತ್ತಿಲ್ವಾ? ಹಣ್ಣಾಗಿ ಮಾಗುತ್ತಿರುವ ಜೋಳದ ಹೊಬಂಡನ್ನು ಗಾಳಿ ಎತ್ತಿ ಒಯ್ದು ಹೊಲದಿಂದ ಹೊಲಕ್ಕೆ ಹರಡುತ್ತದೆ. ನನ್ನ ಸುತ್ತ-ಮುತ್ತಲಿನ ಹೊಲಗಳಲ್ಲಿ ಒಳ್ಳೆಯ ಗುಣಮಟ್ಟದ ಜೋಳ ಬೆಳೆಯದಿದ್ದರೆ, ಒಂದು ತಳಿಯೊಂದಿಗೆ ಇನ್ನೊಂದು ತಳಿ ಕೂಡಿಕೊಂಡು, ಜೋಳದ ಗುಣಮಟ್ಟ ಕುಸಿಯಬಹುದು. ನಾನು ಒಳ್ಳೆಯ ಬೆಳೆ ತೆಗೆಯಬೇಕಾದರೆ ನನ್ನ ನೆರೆಯವರೂ ಒಳ್ಳೆಯದನ್ನೇ ಬೆಳೆಯಬೇಕು".
ಈ ರೈತ ಜೀವನದ ಸರಿಯಾದ ಒಳಾರ್ಥವನ್ನ ತಿಳಿಸಿಕೊಟ್ಟಿದ್ದ. ಈತನ ನೆರೆಹೊರೆಯವರು ಒಳ್ಳೆಯ ಜೋಳ ಬೆಳೆಯದೇ ಈತ ಒಳ್ಳೆಯ ಜೋಳವನ್ನು ಬೆಳೆಯಲು ಸಾಧ್ಯವಿಲ್ಲ. ಇದು ಜೀವನದ ಮತ್ತೊಂದು ಆಯಾಮ, ಮತ್ತೊಂದು ಹರವು.
ಯಾರು ನೆಮ್ಮದಿಯಾಗಿರಲು ಬಯಸುತ್ತಾರೋ, ಅವರು ತಮ್ಮ ನೆರೆ-ಹೊರೆಯವರೂ ನೆಮ್ಮದಿಯಾಗಿರಲು ನೆರವಾಗಬೇಕು. ಯಾರು ಒಳ್ಳೆಯ ರೀತಿ ಬದುಕಬೇಕೆಂದಿರುವರೋ , ಅವರು ಇತರರೂ ಒಳ್ಳೆಯ ರೀತಿಯಲ್ಲಿ ಬದುಕಲು ಅನುವು ಮಾಡಿಕೊಡಬೇಕು. ಜೀವನದ ಮೌಲ್ಯವಿರುವುದು ಎಷ್ಟು ಕಾಲ ಜೀವಿಸಿದರು ಎನ್ನುವುದರಲ್ಲಲ್ಲ, ತಮ್ಮ ಜೀವಿತದಲ್ಲಿ ಎಷ್ಟು ಜನರ ಮೇಲೆ ಪರಿಣಾಮ ಬೀರಿದರು ಎನ್ನುವುದರಲ್ಲಿ.
ಈ ಕಥೆಯಿಂದ ಕಲಿಯಬೇಕಾದ ಪಾಠ: ಒಬ್ಬಂಟಿಯಾಗಿ ಗೆಲ್ಲುವುದು ಕಷ್ಟದ ಮಾತು. ಹಲವಾರು ಬಾರಿ ಗೆಲುವು ಒಗ್ಗಟ್ಟಿನ ಕೆಲಸದಲ್ಲಿ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯಲ್ಲಿ ಅಡಗಿರುತ್ತದೆ. ಆದ್ಧರಿಂದ, ನಿಮ್ಮಲ್ಲಿರುವ ಒಳ್ಳೆಯ ಆಚಾರಗಳನ್ನು, ಆಲೋಚನೆಗಳನ್ನು ಮತ್ತು ನಿಮ್ಮಲ್ಲಿರುವ ತಿಳಿವಳಿಕೆಯನ್ನು ನಿಮ್ಮೊಡನೆ ಕೆಲಸ ಮಾಡುವವರೊಂದಿಗೆ ಹಂಚಿಕೊಳ್ಳಿ.
ಯಾರೋ ಹೇಳಿರುವಂತೆ: "ಗೆಲುವಿನಿಂದಲೇ ಗೆಲುವು ಮೂಡುತ್ತದೆ."
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications