ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀದರ್: ಸಮಗ್ರ ಶೀತಲ ಘಟಕ ನಿರ್ಮಾಣ
ಅವರು ಇಂದು ಬೀದರ್ ಜಿಲ್ಲೆಯಲ್ಲಿ ಸಮಗ್ರ ಶೀಥಲ ಘಟಕವನ್ನು ನಿರ್ಮಿಸುವ ಸಂಬಂಧದಲ್ಲಿ ಅಪೇಡಾ ನವದೆಹಲಿ ಮತ್ತು ಕೆಪೆಕ್ ಬೆಂಗಳೂರು ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಬಾಗಲಕೋಟೆ ಮತ್ತು ಹುಬ್ಬಳ್ಳಿಯಲ್ಲಿ ಈಗಾಗಲೆ ಹಣ್ಣು ತರಕಾರಿ ಸಂಗ್ರಹಣಾ ವ್ಯವಸ್ಥೆ ಮಾಡಲಾಗಿದೆ. ಅಪೇಡಾ ನೆರವಿನಿಂದ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ 5.64 ಕೋಟಿ ರೂ. ನೆರವಿನಿಂದ ಸಮಗ್ರ ಶೀಥಲಗೃಹವನ್ನು ನಿರ್ಮಾಣ ಮಾಡಲಾಗಿದೆ. ಇದನ್ನು ಬಳಸಿಕೊಂಡು ರಾಜ್ಯದಿಂದ ಕೆಪೆಕ್ ನಿಗಮವು ನೆದರ್ಲ್ಯಾಂಡ್ಗೆ 32 ಟನ್ ದಾಳಿಂಬೆಯನ್ನು ರಫ್ತು ಮಾಡಿದೆ. ಈ ಪ್ರದೇಶದ ರೈತರು ಇನ್ನೂ ಹೆಚ್ಚು ಹೆಚ್ಚು ದಾಳಿಂಬೆ ಹಾಗೂ ದ್ರಾಕ್ಷಿ ರಫ್ತು ಮಾಡಲು ಆಸಕ್ತಿ ತೋರುತ್ತಿದ್ದು ಶೀಥಲಗೃಹದ ಬಳಕೆಗೆ ಮುಂದೆ ಬಂದಿದ್ದಾರೆಂದು ಅವರು ತಿಳಿಸಿದರು.
Comments
Story first published: Saturday, September 18, 2010, 11:34 [IST]