ಅಧಿಕ ಗೋಧಿ ಬಿತ್ತನೆಯಿಂದ ರಾಬಿ ಬೆಳೆ ಬಿತ್ತನೆಯಲ್ಲಿ ಶೇ.4.4 ಏರಿಕೆ
ಬೆಂಗಳೂರು, ಡಿಸೆಂಬರ್ 25: ಭಾರತದಲ್ಲಿ ಈ ವರ್ಷದ ಹಿಂಗಾರಿನ (ರಾಬಿ) ಋತುವಿನ ರೈತರು ಶೇ.4.4 ರಷ್ಟು ಹೆಚ್ಚು ಬಿತ್ತನೆ ಮಾಡಿದ್ದಾರೆ. ಅದರಲ್ಲಿ ಪ್ರಮುಖ ಬೆಳೆ ಗೋಧಿ ಅಗ್ರಸ್ಥಾನದಲ್ಲಿದೆ.
ಇದೇ ಡಿಸೆಂಬರ್ 23 ಶುಕ್ರವಾರದವರೆಗೆ ಗೋಧಿ, ಬಾರ್ಲಿ, ಬೇಳೆ, ಸಾಸಿವೆ ಸೂರ್ಯಕಾಂತಿ ಸೇರಿದಂತೆ ದೇಶದಲ್ಲಿ ಒಟ್ಟು 620.62 ಲಕ್ಷ ಹೆಕ್ಟೇರ್ಗಳಲ್ಲಿ ರಾಬಿ ಬೆಳೆಗಳನ್ನು ಬಿತ್ತನೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 594.62 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಅಂಕಿ ಅಂಶಗಳಿಂದ ಪ್ರಸಕ್ತ ವರ್ಷದಲ್ಲಿ ಶೇ.4.4 ರಷ್ಟು ಹೆಚ್ಚು ಬಿತ್ತನೆ ಆಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
ಒಟ್ಟು ಹಿಂಗಾರು ಹಂಗಾಮಿ ಬೆಳೆ ಪೈಕಿ ಅತ್ಯಧಿಕ ಪ್ರದೇಶದಲ್ಲಿ ಗೋಧಿ ಬೆಳೆಯಾಗಿದೆ. ಎಲ್ಲಾ ರಾಬಿ ಬೆಳೆಗಳ ಪೈಕಿ ಗೋಧಿಯ ಬಿತ್ತನೆ ಶೇ.9.65 ಲಕ್ಷ ಹೆಕ್ಟೇರ್ನಷ್ಟು ಹೆಚ್ಚಾಗಿದೆ. ಈ ಬಾರಿ ಗೋಧಿ 302.61ಲಕ್ಷ ಹೆಕ್ಟೇರ್ನಿಂದ 312.26 ಲಕ್ಷ ಹೆಕ್ಟೇರ್ ನಷ್ಟಕ್ಕೆ ಬಿತ್ತನೆ ಏರಿಕೆ ಕಂಡಿದೆ.

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಗೋಧಿ ಲಭ್ಯತೆ ಮೇಲೆ ಆತಂಕ ಮೂಡಿತ್ತು. ಇತ್ತ ಭಾರತವು ಸ್ವಂತ ಆಹಾರ ಭದ್ರತೆಗಾಗಿ ಗೋಧಿ ರಫ್ತು ನಿಷೇಧ ಜಾರಿ ಮಾಡಿತು. ಇದರಿಂದ ಜಗತ್ತು ಆಹಾರ ಅದರಲ್ಲೂ ಗೋಧಿ ಬಿಕ್ಕಟ್ಟು ಎದುರಾಗಲಿದೆ ಎಂದು ಹೇಳಲಾಗಿತ್ತಿ. ಎಲ್ಲ ಆತಂಕಗಳಿಗೆ ಗೋಧಿ ಬಿತ್ತನೆಯಲ್ಲಿನ ಏರಿಕೆ ಸಾಕಷ್ಟು ಭರವಸೆ ನೀಡಿದೆ. ದಾಖಲೆಯ ಮಟ್ಟದಲ್ಲಿ ಗೋಧಿ ಇಳುವರಿ ನಿರೀಕ್ಷಿಸಲಾಗುತ್ತಿದೆ ಎಂದು ಕೃಷಿ ಸಚಿವಾಲಯ ಹೇಳಿದೆ.
ರೇಪ್ಸೀಡ್-ಸಾಸಿವೆ ಅತ್ಯಧಿಕ ಬಿತ್ತನೆ
ಎಣ್ಣೆ ಬೀಜಗಳ ಬಿತ್ತಿನೆ ಪ್ರಮಾಣದಲ್ಲಿ ಪ್ರಸಕ್ತ ರಾಬಿ ಹಂಗಾಮಿನಲ್ಲಿ ರೇಪ್ಸೀಡ್ ಮತ್ತು ಸಾಸಿವೆಗಳು ಬೀಜಗಳನ್ನ ಗರಿಷ್ಠ ಪ್ರದೇಶಗಳಲ್ಲಿ ಬಿತ್ತಲಾಗಿದೆ. ಸಾಸಿವೆ ಪ್ರದೇಶವು 2021-22 ರಲ್ಲಿ 85.35 ಲಕ್ಷ ಹೆಕ್ಟೇರ್ ಇತ್ತು, ಅದು ಈ ಬಾರಿ 2022-23 ರಲ್ಲಿ 92.67 ಲಕ್ಷ ಹೆಕ್ಟೇರ್ಗಳಿಗೆ ಅಂದರೆ 7.32 ಲಕ್ಷ ಹೆಕ್ಟೇರ್ಗಳಷ್ಟು ಹೆಚ್ಚಾಗಿದೆ. ಇನ್ನು ಎಣ್ಣೆಕಾಳು ಬೆಳೆಯುವ 8.20 ಲಕ್ಷ ಹೆಕ್ಟೇರ್ಗಳಲ್ಲಿ ರೇಪ್ಸೀಡ್ ಮತ್ತು ಸಾಸಿವೆ ಮಾತ್ರ 7.32 ಲಕ್ಷ ಹೆಕ್ಟೇರ್ ಪ್ರದೇಶ ಆವರಿಸಿವೆ.
ಕಳೆದ 2 ವರ್ಷಗಳಿಂದ ವಿಶೇಷವಾಗಿ ಸಾಸಿವೆ ಕೃಷಿಯಲ್ಲಿ ರೈತರ ಹೆಚ್ಚೆಚ್ಚು ಆಸಕ್ತಿ ತೋರುತ್ತಿದ್ದಾರೆ. ಇದರಿಂದಲೇ ಈ ಬಾರಿ ಸಾಸಿವೆಯನ್ನು ಹೇರಳವಾಗಿ ಬಿತ್ತಲಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

ಗುಣಮಟ್ಟದ ಬೀಜಗಳನ್ನು ಸಮಯೋಚಿತವಾಗಿ ಸರಬರಾಜು ಮಾಡುವುದು, ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ತೆಗೆದುಕೊಳ್ಳಲಾದ ಕೆಲವು ಮಧ್ಯಸ್ಥಿಕೆಗಳ ಕಾರಣದಿಂದ ಈ ವರ್ಷ ದೇಶದಲ್ಲಿ ದೊಡ್ಡಮಟ್ಟದಲ್ಲಿ ಬಿತ್ತನೆ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications