Get Updates
Get notified of breaking news, exclusive insights, and must-see stories!

ಚಿತ್ರದುರ್ಗದ ರೈತರ ಕಷ್ಟ ನೀಗಿಸಲು‘ನಿಜಲಿಂಗಪ್ಪ ನೀರಾವರಿ ಯೋಜನೆ’: ಕೃಷ್ಣ

ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ರೈತರಿಗೆ ನೀರಾವರಿ ಸೌಕರ್ಯ ಕಲ್ಪಿಸಬೇಕೆಂಬ ಮಹದಾಸೆ ಹೊತ್ತಿದ್ದ ದಿವಂಗತ ನಿಜಲಿಂಗಪ್ಪನವರ ಕನಸನ್ನು ನನಸಾಗಿಸಲು ಬೃಹತ್‌ ನೀರಾವರಿ ಯೋಜನೆಯನ್ನು ಅವರ ಹೆಸರಲ್ಲೇ ಸರ್ಕಾರ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಕೃಷ್ಣ ತಿಳಿಸಿದ್ದಾರೆ.

ತಮ್ಮೂರು ಹಾಗೂ ಸುತ್ತಮುತ್ತಲ ರೈತರು ವ್ಯವಸಾಯಕ್ಕೆ ಮಳೆಯನ್ನೇ ನೆಚ್ಚಿಕೊಂಡಿದ್ದಾರೆ. ಮಳೆ ಕೈಕೊಟ್ಟರೆ ಅವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ. ಹೀಗಾಗಿ ಈ ಪ್ರದೇಶಗಳಲ್ಲಿ ನೀರಾವರಿ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ನಿಜಲಿಂಗಪ್ಪ ಪದೇ ಪದೇ ಹೇಳುತ್ತಿದ್ದರು. ಅವರ ಜೀವಿತದ ಕಾಲದಲ್ಲಂತೂ ಅದು ಈಡೇರಲಿಲ್ಲ. ಅವರ ಈ ಕನಸನ್ನು ಈಗಲಾದರೂ ಈಡೇರಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಶೀಘ್ರದಲ್ಲೇ ಮಂತ್ರಿಮಂಡಲವು ಬೃಹತ್‌ ನೀರಾವರಿ ಯೋಜನೆಯಾಂದನ್ನು ಸಿದ್ಧಪಡಿಸಲಿದ್ದು, ಯೋಜನೆಗೆ ನಿಜಲಿಂಗಪ್ಪನವರ ಹೆಸರನ್ನೇ ಇಡಲಾಗುವುದು ಎಂದು ಕೃಷ್ಣ -ಹೇ-ಳಿದರು.

ಉಪರಾಷ್ಟ್ರಪತಿ ಆಗಮನದ ನಿರೀಕ್ಷೆ : ಹಿರಿಯ ರಾಜಕೀಯ ಮುತ್ಸದ್ಧಿ ನಿಜಲಿಂಗಪ್ಪ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಬುಧವಾರ ನಡೆಯಲಿದ್ದು, ಉಪರಾಷ್ಟ್ರಪತಿ ಕೃಷ್ಣಕಾಂತ್‌ ಆಗಮಿಸುವ ನಿರೀಕ್ಷೆ ಇದೆ. ಬೆಂಗಳೂರಿಗೆ ಮಧ್ಯಾಹ್ನ 2 ಗಂಟೆಗೆ ಆಗಮಿಸಲಿರುವ ಉಪರಾಷ್ಟ್ರಪತಿಯವರು, ದುರ್ಗಕ್ಕೆ ತೆರಳಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+