ಮಿಶ್ರ ಬೆಳೆ ಬೆಳೆದು ನೆಮ್ಮದಿ ಕಂಡ ಮೈಸೂರು ಜಿಲ್ಲೆಯ ರೈತ
ಮೈಸೂರು, ಸೆಪ್ಟೆಂಬರ್ 18: ಕೃಷಿಗೆ ಹೆಚ್ಚು ರಾಸಾಯನಿಕ ಔಷಧಿಗಳನ್ನು ಸಿಂಪಡಿಸುವ ಈ ಕಾಲದಲ್ಲಿ ಮೈಸೂರು ಜಿಲ್ಲೆಯ ರೈತರೊಬ್ಬರು
ಯಾವುದೇ ಕ್ರಿಮಿನಾಶಕದ ಸಿಂಪಡಣೆ ಮಾಡದೇ, ರಾಸಾಯನಿಕ ಗೊಬ್ಬರವನ್ನು ಬಳಕೆ ಮಾಡದೆ ಸಾವಯವ ಗೊಬ್ಬರದ ಮೂಲಕ ಬೆಳೆ ಬೆಳೆದು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಬನ್ನೂರಿನ ರಂಗಸಮುದ್ರ ಗ್ರಾಮದ ಚೇರ್ಮನ್ ರೇವಣ್ಣರ ಎಂಬುವರ ಪುತ್ರ ಚಿಕ್ಕ ರೇವಣ್ಣ ಎಂಬುವರೇ ಹಲವು ರೀತಿಯ ಬೆಳೆ ಬೆಳೆದು ಪ್ರಗತಿಪರ ರೈತರಾಗಿ ಗಮನಸೆಳೆದಿದ್ದಾರೆ. ಚಿಕ್ಕ ರೇವಣ್ಣ ಅವರು, ತಮಗಿರುವ 15 ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಹಲವು ರೀತಿಯ ಬೆಳೆಯನ್ನು ಬೆಳೆಯುತ್ತಾ ಕೃಷಿಯನ್ನೇ ಉಸಿರಾಗಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಬೆಲೆಯಲ್ಲಿನ ಏರುಪೇರು, ಹವಾಮಾನ ವೈಪರೀತ್ಯ ಹೀಗೆ ಹತ್ತು ಹಲವು ಕಾರಣಗಳಿಂದ ಬಾಳೆ ಬೆಳೆಯಲು ಹಿಂದೇಟು ಹಾಕುತ್ತಿರುವ ಈ ದಿನಗಳಲ್ಲಿ ರೇವಣ್ಣ ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆದು ಮಾದರಿಯಾಗಿದ್ದಾರೆ.

ಬಾಳೆಯ ಜತೆ ಮೆಣಸಿನಕಾಯ,ಕಲ್ಲಂಗಡಿ
ಬಾಳೆಯ ನಡುವೆ 12 ಅಡಿಯ ಅಂತರ ಕಾಯ್ದುಕೊಂಡು ಮೆಣಸಿನಕಾಯಿ, ಹಾಗೂ ಕಲ್ಲಂಗಡಿಯನ್ನು ಬೆಳೆದಿದ್ದಾರೆ. ಇನ್ನು ಎರಡೂವರೆ ಎಕರೆ ಭೂಮಿಯಲ್ಲಿ ಪರಂಗಿಯನ್ನು ಬೆಳೆದಿದ್ದು, ಪ್ರತಿ ಗಿಡದಲ್ಲೂ 25 ರಿಂದ 30 ಕಾಯಿಗಳು ಬಿಟ್ಟಿವೆ.

ಚಿಕ್ಕ ರೇವಣ್ಣ ಸಿಂಪಡಿಸುವ ಔಷಧಿಗಳಾವುವು?
ಬೇವಿನಔಷಧಿ, ಜೀವಾಮೃತ, ಕೊಟ್ಟಿಗೆ ಗೊಬ್ಬರ, ಎರಹುಳು ಗೊಬ್ಬರದ ಬಳಕೆಯ ಮೂಲಕ ಪರಂಗಿಯನ್ನು ಸುಮಾರು 1.50 ಲಕ್ಷದ ವೆಚ್ಚದಲ್ಲಿ ಬೆಳೆದಿದ್ದು, ಪ್ರತಿ ಎಂಟು ದಿನಗಳಿಗೊಮ್ಮೆ 1,500 ಕೆಜಿ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಇವರು ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಗೆ ಪರಂಗಿಯನ್ನು ಸಾಗಿಸುತ್ತಿದ್ದಾರೆ. ಇದು ಇವರಿಗೆ ಲಾಭ ತಂದುಕೊಟ್ಟಿದೆ.

ಚಿಕ್ಕ ರೇವಣ್ಣ ಬೆಳೆದ ನಾನಾ ಬೆಳೆಗಳು
ತಮ್ಮ ಹದಿನೈದು ಎಕರೆ ಜಮೀನಿನಲ್ಲಿ ಕೃಷಿ ವಿವಿಧ ವಾಣಿಜ್ಯ ಬೆಳೆಯಾದ ಸಪೋಟ, ಸೀಬೆಹಣ್ಣು, ಕಬ್ಬು ಅಲ್ಲದೆ ಆಹಾರ ಬೆಳೆಗಳಾದ ಭತ್ತದ ತಳಿಗಳನ್ನು ಅಲ್ಲದೆ, ಟಮೋಟೋ, ಬೀನ್ಸ್, ಹಿರೇಕಾಯಿ, ಮೆಣಸಿನಕಾಯಿ, ಚೆಂಡು ಹೂ ಹಾಗೂ ಸೂರ್ಯಕಾಂತಿಯನ್ನು ಬೆಳೆದಿದ್ದಾರೆ.

ಕೃಷಿ ಜೊತೆಗೆ ಹೈನುಗಾರಿಕೆಗೂ ಸೈ
ಹೈನುಗಾರಿಕೆಯನ್ನು ಮಾಡುತ್ತಿದ್ದು, 4 ಹಸುಗಳನ್ನು ಸಾಕಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಚಿಕ್ಕ ರೇವಣ್ಣ ಅವರ ಅನುಭವಗಳನ್ನು ಸಲಹೆ ರೂಪದಲ್ಲಿ ಪಡೆಯಲು ದೂರವಾಣಿ ಸಂಖ್ಯೆ 9880755754 ನಂಬರ್ ಗೆ ಕರೆ ಮಾಡಬಹುದು.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications