ಮೂರು ಕೃಷಿ ಕಾಯ್ದೆ ವಾಪಸ್; ರಾಜ್ಯ ರಾಜಕೀಯ ನಾಯಕರು, ರೈತರ ಪ್ರತಿಕ್ರಿಯೆ
ನವದೆಹಲಿ, ನವೆಂಬರ್ 19: ದೇಶದಲ್ಲಿ ವಿವಾದ ಸೃಷ್ಟಿಸಿದ್ದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಘೋಷಿಸಿದ್ದಾರೆ. ಗುರುನಾನಕ್ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ದೇಶವನ್ನುದ್ದೇಶಿಸಿ ಮಾತನಾಡಿದರು.
ಉತ್ತರ ಪ್ರದೇಶ ಪ್ರವಾಸಕ್ಕೂ ಮುನ್ನ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ನೂತನವಾಗಿ ಜಾರಿಗೆ ತರಲಾಗಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ.
Breaking: 3 ಕೃಷಿ ಕಾನೂನು ಹಿಂಪಡೆದ ಕೇಂದ್ರ ಸರ್ಕಾರ
ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ, ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ದೇಶದ ಕೃಷಿ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದರು.
ಮೂರು ಕೃಷಿ ಕಾಯ್ದೆ ವಾಪಸ್ ಪಡೆದಿದ್ದಕ್ಕೆ ಕರ್ನಾಟಕ ರಾಜಕೀಯ ನಾಯಕರು ಮತ್ತು ರೈತರು ಏನೇನು ಪ್ರತಿಕ್ರಿಯೆ ನೀಡಿದ್ದಾರೆ ಎಂಬುದನ್ನು ಮುಂದೆ ಓದಿ.
ಕೃಷಿ ಕಾನೂನು: ರೈತರ ಸತ್ಯಾಗ್ರಹ ದುರಹಂಕಾರವನ್ನು ಸೋಲಿಸಿದೆ ಎಂದ ರಾಹುಲ್ ಗಾಂಧಿ
ರೈತ
ಹೋರಾಟಗಾರರಿಗೆ
ಅಭಿನಂದಿಸಿದ
ಮಾಜಿ
ಸಿಎಂ
ಸಿದ್ದರಾಮಯ್ಯ
"ಕರಾಳ
ಮೂರು
ಕೃಷಿ
ಕಾಯ್ದೆಗಳನ್ನು
ರದ್ದುಗೊಳಿಸಿದ
ಕೇಂದ್ರ
ಬಿಜೆಪಿ
ಸರ್ಕಾರದ
ನಿರ್ಧಾರ
ದೇಶದ
ಮಣ್ಣಿನ
ಮಕ್ಕಳ
ಅಭೂತಪೂರ್ವ
ಹೋರಾಟಕ್ಕೆ
ಸಿಕ್ಕ
ಗೆಲುವಾಗಿದೆ.
ರೈತ
ಹೋರಾಟಗಾರರಿಗೆ
ಅಭಿನಂದನೆಗಳು."
"ಸರ್ವಾಧಿಕಾರಿ ಎಷ್ಟೇ ಶಕ್ತಿಶಾಲಿಯಾಗಿರಲಿ, ಎದೆಯಗಲ ಎಷ್ಟೇ ಇಂಚಿನದ್ದಾಗಿರಲಿ, ಜನಶಕ್ತಿಯ ಎದುರು ಆತ ಮಣಿಯಲೇಬೇಕು. ಇದುವೇ ಪ್ರಜಾಪ್ರಭುತ್ವದ ಸೊಗಸು. ಇದುವೇ ರೈತರ ಸ್ವಾತಂತ್ರ್ಯೋತ್ಸವ."
ಕೃಷಿ ಕಾನೂನು ವಾಪಸ್ ಸೇರಿ ಮೋದಿ ಭಾಷಣದ ಪ್ರಮುಖಾಂಶಗಳು
"ಕೃಷಿ ಕಾಯ್ದೆಯನ್ನು ರದ್ದುಗೊಳಿಸಿದರಷ್ಟೇ ಸಾಲದು ಈ ಕರಾಳ ಕಾಯ್ದೆ ರದ್ದತಿಗಾಗಿ ನಡೆದ ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಒತ್ತಾಯಿಸುತ್ತೇನೆ," ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕೆಪಿಸಿಸಿ
ಅಧ್ಯಕ್ಷ
ಡಿ.ಕೆ.
ಶಿವಕುಮಾರ್
ಪ್ರತಿಕ್ರಿಯೆ
"ಒಂದೂವರೆ
ವರ್ಷದ
ಸುದೀರ್ಘ
ಹೋರಾಟದ
ನಂತರ
ರೈತರ
ಪ್ರತಿಭಟನೆಗೆ
ಜಯ
ಸಂದಿರುವುದು
ಸಮಾಧಾನಕರ
ಸಂಗತಿ.
ಇದು
ಕಾಂಗ್ರೆಸ್
ಪಕ್ಷಕ್ಕೆ
ಆಸ್ತಿಯಂತಿರುವ
ಗಾಂಧೀಜಿ
ಅವರ
ಆದರ್ಶಗಳಿಗೆ
ಸಿಕ್ಕಿದ
ಗೆಲುವು
ಕೂಡ
ಹೌದು."
"ಈ ಸುದೀರ್ಘ ಹೋರಾಟದಲ್ಲಿ ಮಡಿದ 700ಕ್ಕೂ ಹೆಚ್ಚು ರೈತರನ್ನು ಹುತಾತ್ಮರು ಎಂದು ಕೇಂದ್ರ ಸರ್ಕಾರ ಒಪ್ಪಿಕೊಳ್ಳಬೇಕು. ಜೊತೆಗೆ ಅವರ ಕುಟುಂಬಕ್ಕೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಬೇಕು," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಮಾಜಿ
ಸಿಎಂ
ಎಚ್.ಡಿ.
ಕುಮಾರಸ್ವಾಮಿ
ಪ್ರತಿಕ್ರಿಯೆ
ರೈತರ
ಆಕ್ರೋಶಕ್ಕೆ
ಗುರಿಯಾಗಿದ್ದ
3
ಕೃಷಿ
ಕಾಯ್ದೆಗಳನ್ನು
ವಾಪಸ್
ಪಡೆಯುವುದಾಗಿ
ಪ್ರಧಾನಿ
ನರೇಂದ್ರ
ಮೋದಿ
ಘೋಷಣೆ
ಮಾಡಿರುವುದು
ಸ್ವಾಗತಾರ್ಹ.
ಕೊನೆಗೂ
ಕೇಂದ್ರಕ್ಕೆ
ಜ್ಞಾನೋದಯ
ಆಗಿರುವುದು
ಉತ್ತಮ
ಬೆಳವಣಿಗೆ.
ರೈತರ
ಜತೆ
ಚರ್ಚೆ
ನಡೆಸದೇ
ಈ
ಕಾಯ್ದೆಗಳ
ಏಕಪಕ್ಷೀಯ
ಜಾರಿ
ಮತ್ತು
ಈಗ
ಏಕಾಏಕಿ
ರದ್ದತಿ
ಅನೇಕ
ಪ್ರಶ್ನೆ
ಹುಟ್ಟುಹಾಕಿದೆ.
ನಿಜಕ್ಕೂ ಕರಾಳ ಕಾಯ್ದೆಗಳ ವಾಪಸಾತಿ ರೈತರ ವಿಜಯ ಮತ್ತು ಐತಿಹಾಸಿಕ. ಒಂದು ವರ್ಷಕ್ಕೂ ಹೆಚ್ಚು ಕಾಲ ದೆಹಲಿಯ ಗಡಿಯಲ್ಲಿ ಅನ್ನದಾತರು ಪ್ರತಿಭಟನೆ ನಡೆಸಿದರು. ಕೇಂದ್ರವು ಅವರ ಮೇಲೆ ಅಮಾನವೀಯ ಕ್ರೌರ್ಯ ನಡೆಸಿತು. ಅನೇಕ ಅಮೂಲ್ಯ ಜೀವಗಳ ನೆತ್ತರು ಹರಿಯಿತು. ಚಳಿ, ಮಳೆ, ಬಿಸಿಲೆನ್ನದೇ ರೈತರು ಹೋರಾಡಿದರು.
ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇದೆ. ಕೇಂದ್ರದ ನಿರ್ಧಾರ ಪ್ರಾಮಾಣಿಕವಾಗಿರಲಿ. ಕೇವಲ ಮತ ಫಸಲಿಗೆ ಮಾಡಿದ ಹೈಡ್ರಾಮಾ ಆಗದಿರಲಿ. ಚುನಾವಣೆ ಮುಗಿದ ಮೇಲೆ ಆ ಕರಾಳ ಕಾಯ್ದೆಗಳನ್ನು ಬೇರೆ ರೂಪದಲ್ಲಿ ಪುನಃ ಜಾರಿ ಮಾಡುವುದಿಲ್ಲ ಎಂದು ಪ್ರಧಾನಿಗಳು ತಮ್ಮ ಭಾಷಣದಲ್ಲಿ ರೈತರಿಗೆ ಮಾತು ಕೊಡಬೇಕಿತ್ತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
Recommended Video
ಜೆಡಿಎಸ್
ಮುಖಂಡ
ಟಿ.ಎ.
ಶರವಣ
ಪ್ರತಿಕ್ರಿಯೆ
ರೈತರ
ಬದುಕಿಗೆ
ಮತ್ತು
ದೇಶದ
ಕೃಷಿ
ವ್ಯವಸ್ಥೆಗೆ
ದಮನಕಾರಿ
ಆಗಿದ್ದ
ಮತ್ತು
ಮಣ್ಣಿನ
ಮಕ್ಕಳ
ಚಾರಿತ್ರಿಕ
ಪ್ರತಿಭಟನೆಗೆ
ಕಾರಣವಾಗಿದ್ದ,
ಮೂರು
ದಮನಕಾರಿ
ಕೃಷಿ
ಕಾಯಿದೆಗಳನ್ನು
ದಿಢೀರ್
ಹಿಂದಕ್ಕೆ
ಪಡೆಯುವ
ಮೂಲಕ
ಪ್ರಧಾನಿ
ನರೇಂದ್ರ
ಮೋದಿ
ಒತ್ತಡಕ್ಕೆ
ಮಣಿದು,
ರೈತ
ಶಕ್ತಿಗೆ
ತಲೆ
ಬಾಗಿದ್ದಾರೆ
ಎಂದು
ಜೆಡಿಎಸ್
ಹಿರಿಯ
ನಾಯಕ,
ವಿಧಾನ
ಪರಿಷತ್
ಮಾಜಿ
ಸದಸ್ಯ
ಟಿ.ಎ.
ಶರವಣ
ಹೇಳಿದ್ದಾರೆ.
ಪ್ರಧಾನಿ
ಮೋದಿಯನ್ನು
ಅಭಿನಂದಿಸಿದ
ಮಾಜಿ
ಸಿಎಂ
ಯಡಿಯೂರಪ್ಪ
ಕೃಷಿ
ಕಾಯ್ದೆ
ವಿರುದ್ಧ
ದೇಶದ
ಹಲವು
ಭಾಗದ
ರೈತರ
ವಿರೋಧಕ್ಕೆ
ಸ್ಪಂದಿಸಿ
ಕಾಯ್ದೆಗಳನ್ನು
ಹಿಂಪಡೆದ
ಪ್ರಧಾನಿ
ನರೇಂದ್ರ
ಮೋದಿಯವರಿಗೆ
ರೈತರ
ಪರವಾಗಿ
ಅಭಿನಂದನೆಗಳನ್ನು
ಸಲ್ಲಿಸುತ್ತೇನೆ.
ಸದಾ
ರೈತರ
ಹಿತ,
ರೈತ
ಪರವಾದ
ಬದ್ಧತೆ
ಹೊಂದಿರುವ
ಕೇಂದ್ರ
ಸರ್ಕಾರ,
ಪ್ರತಿಷ್ಠೆ,
ರಾಜಕೀಯಗಳನ್ನೆಲ್ಲಾ
ಪರಿಗಣಿಸದೆ
ಸಂವೇದನಾಶೀಲತೆಯನ್ನು
ಪ್ರದರ್ಶಿಸಿದೆ
ಎಂದು
ಮಾಜಿ
ಸಿಎಂ
ಬಿ.ಎಸ್.
ಯಡಿಯೂರಪ್ಪ
ಟ್ವೀಟ್
ಮಾಡಿದ್ದಾರೆ.
ಕರ್ನಾಟಕ
ಸಿಎಂ
ಬೊಮ್ಮಾಯಿ
ಹೇಳಿದ್ದೇನು?
ಕೃಷಿ
ಕಾಯ್ದೆ
ವಾಪಸ್
ಪಡೆದಿರುವುದು
ಸ್ಪಂದನಾಶೀಲ
ಸರ್ಕಾರ
ಎಂಬುದಕ್ಕೆ
ನಿದರ್ಶನ
ಎಂದು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಹೇಳಿದರು.
ರೈತರ
ಹೋರಾಟಕ್ಕೆ
ಮಣಿದಿದೆ
ಎಂಬ
ಪ್ರಶ್ನೆ
ಇಲ್ಲ.
ಕಾಯ್ದೆಯ
ಪ್ರಯೋಜನಗಳ
ಕುರಿತು
ರೈತರೊಂದಿಗೆ
ಸಭೆಗಳನ್ನು
ನಡೆಸಿ
ಅವರಿಗೆ
ಮನವರಿಕೆ
ಮಾಡುವ
ಪ್ರಯತ್ನ
ಮಾಡಲಾಯಿತು.
ಆದರೆ,
ಅವರು
ಅದಕ್ಕೆ
ಒಪ್ಪದಿರುವುದರಿಂದ
ಕಾಯ್ದೆಗಳನ್ನು
ವಾಪಸ್
ಪಡೆಯುತ್ತಿದ್ದೇವೆ
ಎಂದು
ಹೇಳಿದ್ದಾರೆ.
ಹೀಗಾಗಿ
ಮಣಿಯುವ
ಪ್ರಶ್ನೆ
ಇಲ್ಲ
ಎಂದು
ಹೇಳಿದರು.
ಕರವೇ
ಅಧ್ಯಕ್ಷ
ಟಿ.ಎ.
ನಾರಾಯಣಗೌಡ
ಪ್ರತಿಕ್ರಿಯೆ
ಒಕ್ಕೂಟ
ಸರ್ಕಾರ
ಮೂರು
ಕರಾಳ
ಕೃಷಿ
ಕಾಯ್ದೆಗಳನ್ನು
ಹಿಂದಕ್ಕೆ
ಪಡೆದಿದೆ.
ಇದು
ಒಂದು
ವರ್ಷಕ್ಕೂ
ಹೆಚ್ಚು
ಕಾಲದಿಂದ
ದೇಶದ
ಅನ್ನದಾತ
ನಡೆಸುತ್ತಿದ್ದ
ಪ್ರತಿಭಟನೆಗಳಿಗೆ
ಸಂದ
ಜಯ.
ರೈತರ
ಅಸ್ತಿತ್ವವನ್ನೇ
ನಾಶಪಡಿಸುವಂಥ
ಕಾಯ್ದೆಗಳನ್ನು
ಹಿಂದಕ್ಕೆ
ಪಡೆಯದೆ
ಒಕ್ಕೂಟ
ಸರ್ಕಾರಕ್ಕೆ
ಬೇರೆ
ಆಯ್ಕೆಗಳಿರಲಿಲ್ಲ.
ಕೊನೆಗೂ
ರೈತರಿಗೆ
ನ್ಯಾಯ
ದೊರಕಿದೆ
ಎಂದು
ಕರವೇ
ಅಧ್ಯಕ್ಷ
ಟಿ.ಎ.
ನಾರಾಯಣಗೌಡ
ಪ್ರತಿಕ್ರಿಯಿಸಿದ್ದಾರೆ.
ಮಾಜಿ
ಸಚಿವ
ಎನ್.
ಚೆಲುವನಾರಾಣಸ್ವಾಮಿ
ಹೇಳಿಕೆ
ಧರಣಿ
ನಿರತರಾಗಿದ್ದವರು
ರೈತರೇ
ಅಲ್ಲ,
ಅವರು
ಖಲೀಸ್ತಾನ
ಭಯೋತ್ಪಾದಕರು,
ದೇಶದ್ರೋಹಿಗಳು
ಎನ್ನುತ್ತಿದ್ದರು.
ಈಗ
ಕೃಷಿ
ಮಸೂದೆ
ವಾಪಸ್!
ಯುಪಿ
ಚುನಾವಣೆ
ಫಲಿತಾಂಶದ
ಮೇಲಿನ
ವ್ಯತಿರಿಕ್ತ
ಪರಿಣಾಮದ
ಭಯವೇ!?
ರೈತರ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಚುನಾವಣೆಯಲ್ಲಿ ಸೋಲು ಮತ್ತು ರೈತರ ಉಗ್ರ ಹೋರಾಟ ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿ ಆಗಿದೆ. ಇಂದಿರಾ ಎನ್ನುವುದು ಬರಿ ಹೆಸರಲ್ಲ, ಅದೊಂದು ದೇಶದ ಶಕ್ತಿ ಎಂದು ಮಾಜಿ ಸಚಿವ ಎನ್. ಚೆಲುವನಾರಾಣಸ್ವಾಮಿ ಕೂ ಮೂಲಕ ಹೇಳಿದ್ದಾರೆ.
ಕರ್ನಾಟಕ
ಆಮ್
ಆದ್ಮಿ
ಪಾರ್ಟಿ
ಪ್ರತಿಕ್ರಿಯೆ
ಒಂದು
ವರ್ಷಕ್ಕೂ
ಹೆಚ್ಚು
ಕಾಲ
ನಡೆದ
ನಿರಂತರ
ಹೋರಾಟದಲ್ಲಿ
700ಕ್ಕೂ
ಹೆಚ್ಚು
ರೈತರು
ಹುತಾತ್ಮರಾಗಿದ್ದು,
ಪ್ರಧಾನಿ
ನರೇಂದ್ರ
ಮೋದಿಯವರು
ಅವರ
ಕುಟುಂಬದ
ಕ್ಷಮೆಯಾಚಿಸಬೇಕು
ಎಂದು
ಆಮ್
ಆದ್ಮಿ
ಪಾರ್ಟಿಯ
ರಾಜ್ಯ
ಸಂಚಾಲಕ
ಪೃಥ್ವಿ
ರೆಡ್ಡಿ
ಹೇಳಿದ್ದಾರೆ.
ಕೃಷಿಗೆ
ಸಂಬಂಧಿಸಿದ
ವಿವಾದಿತ
ಕಾಯಿದೆಗಳನ್ನು
ವಾಪಸ್
ಪಡೆಯುವುದಾಗಿ
ಪ್ರಧಾನಿ
ನರೇಂದ್ರ
ಮೋದಿ
ಘೋಷಿಸಿದ
ಬಗ್ಗೆ
ಪೃಥ್ವಿ
ರೆಡ್ಡಿ
ಪ್ರತಿಕ್ರಿಯಿಸಿದರು.