ಜಮಖಂಡಿ: ಕಬ್ಬು ಸಾಗಿಸಲು ಬೋಟ್ ಉಪಯೋಗಿಸುವ ಕಂಕನವಾಡಿ ರೈತರು
ಬಾಗಲಕೋಟೆ, ಅಕ್ಟೋಬರ್, 27: ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ರೈತರು ಬೋಟ್ ಮೂಲಕ ಕಬ್ಬಿನ ಟ್ರ್ಯಾಕ್ಟರ್ ಸಾಗಿಸುವ ಮೂಲಕ ಗಮನ ಸೆಳೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಬಳಿ ಗುಹೇಶ್ವರ ನಡುಗಡ್ಡೆ ಇದ್ದು, ಈ ದಡದಿಂದ ಆ ಕಡೆಗೆ ಬೋಟ್ನಲ್ಲಿಯೇ ಕಬ್ಬಿನ ಟ್ರ್ಯಾಕ್ಟರ್ ಸಾಗಿಸಲಾಗಿದೆ.
ಬೋಟ್ಗಳ ಮೂಲಕ ಕಬ್ಬು ಸಾಗಾಟ
ಪ್ರತಿ ವರ್ಷ ಕೃಷ್ಣಾ ನದಿಯಲ್ಲಿ 6 ತಿಂಗಳುಗಳ ಕಾಲ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುತ್ತದೆ. ಆದ್ದರಿಂದ ಈ ಪ್ರದೇಶ ನಡುಗಡ್ಡೆಯಾಗಿ ಪರಿವರ್ತಿತವಾಗುತ್ತದೆ. ಅದಕ್ಕಾಗಿ ಕಾರ್ಖಾನೆಗೆ ಕಬ್ಬು ಸಾಗಿಸಲು ರೈತರು ಪ್ರತಿ ವರ್ಷವೂ ಕೂಡ ಹರಸಾಹಸ ಪಡುತ್ತಲೇ ಇದ್ದಾರೆ. ಎರಡು ಬೋಟ್ಗಳ ಮೂಲಕ ಕಬ್ಬಿನ ಟ್ರ್ಯಾಕ್ಟರ್ ಸಾಗಿಸಿರುವ ರೈತರ ಸಾಹಸಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸುಮಾರು 5 ಟನ್ ಭಾರದ ಟ್ರ್ಯಾಕ್ಟರ್ನಲ್ಲಿ ಕಬ್ಬನ್ನು ತುಂಬಿದ್ದಾರೆ. ನಂತರ ಎರಡು ಬೋಟ್ ಬಳಸಿ ಕಬ್ಬಿಣದ ಎಂಗಲ್ ಹಾಕಿ ಅದರ ಮೇಲೆ ಟ್ರ್ಯಾಕ್ಟರ್ ಅನ್ನು ನಿಲ್ಲಿಸಿದ್ದಾರೆ. ನಡುಗಡ್ಡೆಯಲ್ಲಿ ಸುಮಾರು 300 ಕುಟುಂಬಗಳದ್ದು 700 ಹೆಕ್ಟೇರ್ ಜಮೀನು ಇದೆ. ಪ್ರತಿ ವರ್ಷ ಬೋಟ್ನಲ್ಲಿಯೇ ಲೋಡ್ ಮಾಡಿಕೊಂಡು ಕಬ್ಬು ಸಾಗಿಸುವುದು ಅನಿವಾರ್ಯ ಆಗಿದೆ.

ಕಡಿಮೆ ಖರ್ಚಿನಲ್ಲಿ ಕಬ್ಬು ಸಾಗಾಟಕ್ಕೆ ಪ್ಲಾನ್
ಕಡಿಮೆ ಹಣದಲ್ಲಿ ಹೆಚ್ಚು ಕಬ್ಬು ಸಾಗಿಸುವುದಕ್ಕೆ ರೈತರು ಯೋಚನೆ ಮಾಡಿ ಇಂತಹ ಹರಸಾಹಸಕ್ಕೆ ಕೈ ಹಾಕಿದ್ದಾರೆ. ನಡುಗಡ್ಡೆ ಪ್ರದೇಶದಲ್ಲಿ 700 ಹೆಕ್ಟೇರ್ ಕಬ್ಬು ಬೆಳೆದಿರುವ ರೈತರು, ನದಿ ದಡದ ಆಚೆ ಇರುವ ಹಿನ್ನೆಲೆ ಯಾವುದೇ ವಾಹನ ಹೋಗಲು ಅವಕಾಶವಿರಲಿಲ್ಲ. ಮೊದಲು ಒಂದೊಂದು ಬೋಟ್ ಮೂಲಕ ಕಬ್ಬು ತುಂಬಿಕೊಂಡು ನಡುಗಡ್ಡೆಯಿಂದ ತರುತ್ತಿದ್ದರು. ಇದರಿಂದ ರೈತರಿಗೆ ಹೆಚ್ಚು ಖರ್ಚಿನ ಹೊರೆ ಆಗುತ್ತಿತ್ತು. ಒಂದು ಟನ್ಗೆ 900 ಖರ್ಚು ಬರುತ್ತಿತ್ತು. ಇದೀಗ ಒಂದು ಟನ್ಗೆ 200 ರೂಪಾಯಿ ಖರ್ಚು ಬರುತ್ತಿದ್ದು, ಇನ್ನು ನಿರಂತರವಾಗಿ ಟ್ರ್ಯಾಕ್ಟರ್ಗಳನ್ನು ಬೋಟ್ ಮೂಲಕ ಸಾಗಿಸಲು ರೈತರು ಮುಂದಾಗಿದ್ದಾರೆ. ಒಂದು ಟ್ರ್ಯಾಕ್ಟರ್ನಲ್ಲಿ 11 ಟನ್ ಕಬ್ಬು ಸಾಗಿಸಿ ಗಮನ ಸೆಳೆದಿದ್ದಾರೆ.

ಯುಟ್ಯೂಬ್ ವೀಕ್ಷಣೆಯಿಂದ ಪ್ರೇರಣೆ
ರೈತರಿಗೆ ಇಂತಹ ಯೋಚನೆ ಹೊಳೆದಿದ್ದೇ ಯುಟ್ಯೂಬ್ ನೋಡಿ. ಕಂಕನವಾಡಿ ರೈತರು ಮೊಬೈಲ್ನಲ್ಲಿ ಯುಟ್ಯೂಬ್ ವೀಕ್ಷಣೆ ಮೂಲಕ ಇಂತಹ ಉಪಾಯ ಕಂಡುಕೊಂಡಿದ್ದಾರೆ. ಕಜಕಿಸ್ತಾನದಲ್ಲಿನ ಇಂತಹ ಪ್ರಯೋಗವನ್ನು ರೈತರು ಯುಟ್ಯೂಬ್ ಮೂಲಕ ವೀಕ್ಷಿಸಿದ್ದರು. ಇದೇ ರೀತಿ ನಾವು ಯಾಕೆ ಮಾಡಬಾರದು ಎಂದು ಯೋಚಿಸಿದ ರೈತರು ಎಲ್ಲರೂ ಸೇರಿ ಹಣ ಕೂಡಿಸಿ ಇಂತಹ ಕಬ್ಬಿಣದ ಪೈರಿ ಮಾಡಿಸಿ ಬೋಟ್ ಮೂಲಕ ಕಬ್ಬು ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications