Get Updates
Get notified of breaking news, exclusive insights, and must-see stories!

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಆರ್ಭಟ; ಗಗನಕ್ಕೇರಿದ ತರಕಾರಿ ಬೆಲೆ

ಬಾಗಲಕೋಟೆ, ಸೆಪ್ಟೆಂಬರ್‌, 15: ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬೆಳೆಗಳು ಜಲಾವೃತವಾಗಿವೆ. ಪರಿಣಾಮ ಇದೀಗ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ.

ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿದಿದ್ದು, ತರಕಾರಿ ಸರಬರಾಜು ಕಡಿಮೆ ಆಗಿದೆ. ಬೆಳೆದಿದ್ದ ತರಕಾರಿಗಳು ಜಮೀನುಗಳಲ್ಲಿ ಕೊಳೆತು ಹೋಗಿವೆ. ಇದು ಬಾಗಲಕೋಟೆ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ಬೇರೆ ಜಿಲ್ಲೆಗಳಲ್ಲಿಯೂ ಮಳೆರಾಯ ಅಬ್ಬರಿಸಿದ್ದು, ರೈತರ ಜೀವನವನ್ನೇ ಕಿತ್ತುಕೊಂಡಿದ್ದಾನೆ. ಹೀಗಾಗಿ ಬೇರೆ ಜಿಲ್ಲೆಗಳಿಂದ ಸಹ ತರಕಾರಿ ಸರಿಯಾಗಿ ಸರಬರಾಜು ಆಗದ ಕಾರಣ ಬೆಲೆ ಏರಿಕೆ ಆಗಿದೆ.

ಗಗನಕ್ಕೇರಿದ ತರಕಾರಿಗಳ ಬೆಲೆ

ಜಿಲ್ಲೆಯಲ್ಲಿ ಸತತ ಮಳೆಯಿಂದ ಪ್ರವಾಹದಂತಹ ವಾತಾವರಣ ನಿರ್ಮಾಣವಾಗಿದೆ. ಮೋಡ ಮುಸುಕಿದ ವಾತಾವರಣ ಇದ್ದು, ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ ಉಂಟು ಮಾಡಿದೆ. ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದ್ದರಿಂದ ಮತ್ತು ಸರಿಯಾಗಿ ಸೂರ್ಯನ ಕಿರಣಗಳು ಬೀಳದೇ ಇರುವ ಕಾರಣಕ್ಕೆ ಈರುಳ್ಳಿ ಬೆಳೆ ಸರಿಯಾಗಿ ಫಸಲು ಬಾರದೇ ಕೊಳೆತು ಹೋಗಿದೆ. ಮುಂಬರುವ ದಿನಗಳಲ್ಲಿ ಈರುಳ್ಳಿ ಬೆಲೆ ಏರಿಕೆ ಆಗುವ ಭರವಸೆಯಲ್ಲಿ ರೈತರಿದ್ದಾರೆ. ಟೊಮ್ಯಾಟೋ ಕೆ.ಜಿಗೆ 40 ರೂಪಾಯಿ, ಬೀನ್ಸ್ ಕೆಜಿಗೆ 100, ಬ್ಯಾಡಗಿ ಮೆಣಸಿನಕಾಯಿ ಕೆ.ಜಿಗೆ 500 ರೂಪಾಯಿ, ಗುಂಟೂರು ಮೆಣಸಿನಕಾಯಿ ಕೆ.ಜಿ.ಗೆ 300 ರೂಪಾಯಿ ಆಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಇತ್ತ ತೊಗರಿ ಬೇಳೆಯೂ ಕೆ.ಜಿಗೆ 120 ರೂಪಾಯಿಗೆ ಬಂದು ತಲುಪಿದೆ. ಅಲ್ಲದೇ ಉದ್ದಿನ ಬೇಳೆ ಕೆ.ಜಿ.ಗೆ 145 ರೂಪಾಯಿ, ಅಲಸಂದಿ ಕೆ.ಜಿ.ಗೆ 200 ರೂಪಾಯಿ, ಜೀರಿಗೆ ಕೆ.ಜಿ.ಗೆ 290 ರೂಪಾಯಿ, ಸಾಸಿವೆ ಕೆ.ಜಿ 100 ರೂಪಾಯಿ ಗಡಿ ತಲುಪಿದೆ.

Heavy rain in Bagalkot; Increase in price of vegetables

ಬೆಲೆ ಏರಿಕೆ; ಅನ್ನದಾತನಿಗಿಲ್ಲ ಲಾಭ

ಅತೀವೃಷ್ಠಿಯಿಂದ ಇದ್ದಷ್ಟು ಬೆಳೆಗಳನ್ನು ಮಾರುಕಟ್ಟೆಗೆ ತಂದರೂ ಕೂಡ ರೈತನಿಗೆ ಸೂಕ್ತ ಲಾಭ ಸಿಗುತ್ತಿಲ್ಲ.‌ ನಮಗೆ ಹಾಕಿದ ಬಂಡವಾಳ ಸಿಕ್ಕರೆ ಸಾಕು ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ರೈತರಿಂದ ಖರೀದಿ ಮಾಡುವವರಿಗೆ ಬೆಲೆಯ ಬಿಸಿ ತಟ್ಟುತ್ತಿಲ್ಲ. ಆದರೆ ದಲ್ಲಾಳಿಗಳ ಮೂಲಕ ಮಾರುಕಟ್ಟೆಗೆ ಬರುವ ದಿನಸಿ-ತರಕಾರಿಗಳನ್ನು ಖರೀದಿಸುತ್ತಿರುವ ಗ್ರಾಹಕರಿಗೆ ಬೆಲೆಯೂ ಬಿಸಿ ತುಪ್ಪದಂತೆ ಪರಿಣಮಿಸಿದೆ.

ಗುಣ ಮಟ್ಟದ ತರಕಾರಿಗೆ ಹೆಚ್ಚಾದ ಬೇಡಿಕೆ

ತರಕಾರಿ ಖರೀದಿಗೆ ಹೆಚ್ಚಿನ ಹಣ ಕೊಟ್ಟರೂ, ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ. ಕಡಿಮೆ ಗುಣಮಟ್ಟದ ತರಕಾರಿಯನ್ನು ಅತಿ ಹೆಚ್ಚು ಬೆಲೆ ಕೊಟ್ಟು ಖರೀದಿಸುವಂತಾಗಿದೆ. ಹೀಗಾಗಿ ಗ್ರಾಹಕರು ತರಕಾರಿ ಖರೀದಿಸಲು ಹಿಂದುಮುಂದು ನೋಡುವಂತಾಗಿದೆ. ಮತ್ತೊಂದೆಡೆ ಮಳೆ ನಡುವೆಯೂ ತರಕಾರಿಗಳನ್ನು ಕಿತ್ತು ಮಾರುಕಟ್ಟೆಗೆ ಹಾಕುತ್ತಿರುವ ರೈತರಿಗೂ ಹೆಚ್ಚಿನ ಲಾಭ ಸಿಗದೆ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ತರಕಾರಿ ಬರುತ್ತಿಲ್ಲ. ಜೊತೆಗೆ ಬೇಡಿಕೆಗೆ ಅನುಗುಣವಾಗಿ ತರಕಾರಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಆಗಿದೆ. ಹೀಗಾಗಿ ಗ್ರಾಹಕರು ಸಹ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿಲ್ಲ. ಇದು ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಆಗುತ್ತಿದ್ದು, ಇದರ ಕಡೆ ಸರ್ಕಾರ ಗಮನ ಕೊಡಬೇಕು ಎಂದು ನೊಂದ ನಗರ ವಾಸಿಗಳು ಆಗ್ರಹಿಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+