ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪತ್ರ
ಬೆಂಗಳೂರು, ಆಗಸ್ಟ್ 02 : ಕರ್ನಾಟಕ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಮಹದಾಯಿ ಹೋರಾಟದ ಸಂದರ್ಭದಲ್ಲಿ ಬಂಧಿತರಾದ ರೈತರನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಬಳ್ಳಾರಿ ಮತ್ತು ಚಿತ್ರದುರ್ಗ ಜೈಲಿನಲ್ಲಿರುವ 180ಕ್ಕಿಂತ ಅಧಿಕ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು. ರೈತರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಲು ತುರ್ತು ಸಚಿವ ಸಂಪುಟ ಸಭೆ ಕರೆಯಬೇಕು ಎಂದು ಕುಮಾರಸ್ವಾಮಿ ಅವರು ಪತ್ರದಲ್ಲಿ ತಿಳಿಸಿದ್ದಾರೆ. ಪತ್ರದ ವಿವರಗಳು ಇಲ್ಲಿವೆ.....[ಸಿದ್ದರಾಮಯ್ಯ-ನರೇಂದ್ರ ಮೋದಿ ರಾಜಕಾರಣದ ನಡುವೆ ಬಡವಾದ ರೈತ]

ಆತ್ಮೀಯ ಶ್ರೀ ಸಿದ್ದರಾಮಯ್ಯ ರವರೆ,[ಮಹದಾಯಿ ನೀರು ಹಂಚಿಕೆ : ಅಂದಿನಿಂದ ಇಂದಿನವರೆಗೆ]
'ಬದುಕು ಅನ್ನುವುದು ನದಿಯ ಹಾಗೆ ಕೊನೆ ಇಲ್ಲದ ಪಯಣ, ಯಾವುದೂ ನಮ್ಮ ಜೊತೆ ಉಳಿಯುವುದಿಲ್ಲ. ಉಳಿಯುವುದೂ ಒಂದೇ, ಹೃದಯಕ್ಕೆ ತಟ್ಟಿದ ನೆನಪು ಮಾತ್ರ....' ಪ್ರಿಯ ಮಿತ್ರ, ಬಂಧು ರಾಕೇಶನ ಅಗಲಿಕೆ ನಮ್ಮ ನೆನಪಿನಲ್ಲಿ ಉಳಿಸುವುದು ಅವನ ಸಿಹಿ ನೆನಪು ಮಾತ್ರ. [ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]

ಬಹುಶಃ ಯಾರಿಗೂ ಬರಬಾರದ ನೋವನ್ನು ನೀವು ಅನುಭವಿಸುತ್ತಿದ್ದೀರಿ. ನಾವಾದರೂ ಏನು ಮಾಡಬಲ್ಲೆವು? ನಿಮ್ಮೊಡನೆ ದುಖಃ ಅನುಭವಿಸುವ ಹೊರತು ಸಿದ್ದರಾಮಣ್ಣ ಧೈರ್ಯವೊಂದೇ ಈಗ ನಮ್ಮ ಕೈ ಹಿಡಿಯುವುದು. ಧೈರ್ಯ ತಂದುಕೊಳ್ಳೋಣ. ನೋವನ್ನು ಒಟ್ಟಾಗಿ ಎದುರಿಸೋಣ. ಬದುಕು ನಮಗೇನು ನೀಡುವುದೋ ಅದನ್ನು ಸ್ವೀಕರಿಸೋಣ.













Click it and Unblock the Notifications