ಬಿಟಿ ಹತ್ತಿ ಬೆಳೆ ಉಳಿಸೋಕೆ ಕೃಷಿ ಇಲಾಖೆಯಿಂದ ಮಾರ್ಗಸೂಚಿ
ಹಲವು ರೈತರಿಗೆ ಆದಾಯದ ಮೂಲವಾಗಿರುವ ಬಿಟಿ ಹತ್ತಿ ಬೆಳೆಗೆ ಸೋಂಕಿರುವ ಗುಲಾಬಿ ಕಾಯಿಕೊರಕ ಹುಳದ ಹತೋಟಿಗೆ ಕೃಷಿ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಬೆಂಗಳೂರು, ಏಪ್ರಿಲ್ 25: ಬಿ.ಟಿ. ಹತ್ತಿ ಬೆಳೆಗಾರರಿಗೆ ತಲೆನೋವಾಗಿರುವ ಗುಲಾಬಿ ಕಾಯಿಕೊರಕ ಹುಳದ ಹತೋಟಿ ಅಗತ್ಯ ಎಂಬುದನ್ನು ಮನಗಂಡಿರುವ ಕೃಷಿ ಇಲಾಖೆ ಕೆಲವು ನಿರ್ವಹಣಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ರೈತರನ್ನು ವಿನಂತಿಸಿದೆ. ಕೃಷಿ ಇಲಾಖೆ ಸೂಚಿಸಿದ ಕೆಲವು ಕ್ರಮಗಳು ಹೀಗಿವೆ:
* ಜಮೀನು ನಿರ್ಮಲೀಕರಣ: ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದು. ತೆರೆಯದ ಮತ್ತು ಅರ್ಧ ತೆರೆದಿರುವ ಕಾಯಿಗಳನ್ನು ಹತ್ತಿ ಗಿಡದಿಂದ ಕಿತ್ತು ನಾಶಪಡಿಸುವುದು.[ಕರ್ನಾಟಕ ಪರೀಕ್ಷಾ ಮಂಡಳಿಗೆ ಮುಖ್ಯಮಂತ್ರಿಗಳಿಂದ ಚೆಕ್ ಹಸ್ತಾಂತರ]
* ಜಿನ್ ನಿರ್ಮಲೀಕರಣ: ಜಿನ್ನಿಂಗ್ ಮಾಡಿದ ನಂತರ ಬಾಧೆಗೆ ತುತ್ತಾದ ಹತ್ತಿ ಬೀಜಗಳನ್ನು ನಾಶ ಮಾಡುವುದರಿಂದ ಈ ಬೀಜಗಳಲ್ಲಿ ಸುಪ್ತಾವಸ್ಥೆಯಲ್ಲಿರುವ ಮರಿಹುಳುಗಳನ್ನು ನಾಶಮಾಡಬಹುದು. ಜಿನ್ನಿನಲ್ಲಿ ಲಿಂಗಾಕರ್ಷಕ ಬಲೆಗಳನ್ನು ಸ್ಥಾಪಿಸುವುದು ಅಷ್ಟೇ ಮಹತ್ವದ್ದಾಗಿರುತ್ತದೆ..
* ಬಿತ್ತನೆ ಕಾಲಾವಧಿ ಬಹಳ ಮುಖ್ಯವಾಗಿರುವುದರಿಂದ ವಲಯವಾರು (sowing window) ಮಾಹಿತಿ ಪಡೆದು ಅದರಂತೆ ಬಿತ್ತನೆ ಮಾಡಬೇಕು. ಬಿ.ಟಿ. ಹತ್ತಿಯ ಜೊತೆಗೆ ಬಿ.ಟಿ. ರಹಿತ ಹತ್ತಿಯನ್ನು ಆಶ್ರಯ ಬೆಳೆಯಾಗಿ ಬೆಳೆಯುವುದಾಗಿದೆ.
* ಜಮೀನಿನನಲ್ಲಿ ಲಿಂಗಾಕರ್ಷಕ ಬಲೆಗಳನ್ನು ಹೂ ಬಿಡುವ ಹಂತದಲ್ಲಿ ಉಪಯೋಗಿಸುವುದು. (20 ರಿಂದ 35 ಬಲೆಗಳು ಪ್ರತಿ ಹೆಕ್ಟೆರ್ ಗೆ)
* 100 ದಿನಗಳ ಕಡಿಮೆ ಇರುವ ಬೆಳೆಯಲ್ಲಿ ಹೂ ಬಿಡುವ ಹಂತದಲ್ಲಿ ಪ್ರೋಫೆನೋಫಾಸ್ ಕೀಟನಾಶಕವನ್ನು ಸಿಂಪಡಿಸುವುದರಿಂದ ಶೇ. 50 ರಷ್ಟು ನಷ್ಟವನ್ನು ಕಡಿಮೆಗೊಳಿಸಬಹುದು. 100 ದಿನಗಳಿಗಿಂತ ಹೆಚ್ಚಿನ ಕಾಲಾವಧಿಯಾಗಿರುವ ಬೆಳೆಯಲ್ಲಿ ಫೈರಾತ್ರೈಡ್ ಕೀಟನಾಶಕವನ್ನು ಸಿಂಪಡಿಸುವುದರಿಂದ ನಷ್ಟವನ್ನು ಕಡಿಮೆಗೊಳಿಸುತ್ತದೆ (ಲ್ಯಾಮ್ ಡಾ/ಸೈಪರ್ ಮೆತ್ರಿನ್ 0.5 ಎಂ.ಎಲ್. ಪ್ರತಿ ಲೀಟರ್ ಗೆ)
ಕೃಷಿ ಇಲಾಖೆ ನೀಡಿದ ಈ ಎಲ್ಲ ಸೂಚನೆಗಳನ್ನು ರೈತರು ಪಾಲಿಸಿದಲ್ಲಿ ತಮ್ಮ ಬಿ.ಟಿ. ಹತ್ತಿ ಬೆಳೆಯನ್ನು ಉಳಿಸಿಕೊಳ್ಳಬಹುದು.