ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯೂರಿಯಾ ಬೆಲೆ ಏರಿಕೆ, ಸಿಎಂ ವಿರೋಧ
ಯೂರಿಯಾ ಬೆಲೆ ಏರಿಕೆಯನ್ನು ತೀವ್ರವಾಗಿ ಖಂಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸರಕಾರ ಗಾಯದ ಮೇಲೆ ಏಳೆದಿದೆ. ಅಗತ್ಯ ವಸ್ತುಗಳು ಸೇರಿದಂತೆ ಮೂಲಭೂತ ಸೌಕರ್ಯಗಳ ದರಗಳು ಗಗನಕ್ಕೆ ಮುಟ್ಟಿವೆ. ದೇಶದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇಂತಹ ಸಮಯದಲ್ಲಿ ಕೇಂದ್ರ ಸರಕಾರ ಯೂರಿಯಾ ಬೆಲೆಯನ್ನು ಏರಿಸಿರುವುದು ರೈತ ವಿರೋಧಿ ಕ್ರಮವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಹೊಸ ನೀತಿಗೆ ಒಪ್ಪಿಗೆ ಸೂಚಿಸಿತು. ಇದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ರೈತರು ವ್ಯಾಪಕವಾಗಿ ಉಪಯೋಗಿಸುವ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್ ಪಿ) ಸರಕಾರವೇ ನಿಗದಿಪಡಿಸಲಿದೆ. ಸದ್ಯಕ್ಕೆ ಯೂರಿಯಾದ ಚಿಲ್ಲರೆ ಮಾರಾಟ ಬೆಲೆಯನ್ನು ಶೇ. 10 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸರಕಾರ ಹೇಳಿದೆ.
Comments
ಮನಮೋಹನ್ ಸಿಂಗ್ manmohan singh ಯುಪಿಎ upa ರೈತ ರಸಗೊಬ್ಬರ fertilizers urea ಯೂರಿಯಾ ಕೇಂದ್ರ ಬಜೆಟ್ union budget
Story first published: Friday, February 19, 2010, 15:15 [IST]