ರೈತರ ಪರವಾಗಿ ಸಿಎಂ ಕುಮಾರಸ್ವಾಮಿಗೆ ಮತ್ತೆ ಟಾಂಗ್ ಕೊಟ್ಟ ದರ್ಶನ್
Recommended Video
ಬೆಂಗಳೂರು, ಏಪ್ರಿಲ್ 27: ಮಂಡ್ಯ ಚುನಾವಣಾ ಅಖಾಡಕ್ಕೆ ಸುಮಲತಾ ಅವರ ಪರವಾಗಿ ದರ್ಶನ್ ಅವರು ಇಳಿದಾಗಿನಿಂದಲೂ ಕುಮಾರಸ್ವಾಮಿ-ದರ್ಶನ್ ಅವರ ನಡುವೆ ಪರೋಕ್ಷ ಮಾತಿನ ಸಮರ ನಡೆಯುತ್ತಲೇ ಇದೆ. ಮತದಾನ ಮುಗಿದಿದ್ದರೂ ಸಹ ಮಾತಿನ ಸಮರ ಅಂತ್ಯವಾದಂತೆ ತೋರುತ್ತಿಲ್ಲ.
ಇಂದು ಬೆಂಗಳೂರಿನ ಕಾಲೇಜೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ದರ್ಶನ್ ಅವರು, 'ರೈತರ ಸಾಲಮನ್ನಾ ಮಾಡುವುದು ಬೇಡ, ಅವರು ಬೆಳೆದ ಬೆಲೆಗೆ ಸೂಕ್ತ ಬೆಲೆ ಕೊಡಲಿ ಸಾಕು, ಸಾಲವನ್ನು ಅವರೇ ತೀರಿಸುತ್ತಾರೆ' ಎಂದು ಹೇಳಿದ್ದಾರೆ.
ರೈತ ಸಾಲಮನ್ನಾ ಯೋಜನೆಯನ್ನು ತಂದು ಹೆಮ್ಮೆಯಿಂದ ಬೆನ್ನುತಟ್ಟಿಕೊಳ್ಳುತ್ತಿರುವ ಕುಮಾರಸ್ವಾಮಿ ಅವರನ್ನು ಉದ್ದೇಶವಾಗಿಟ್ಟುಕೊಂಡು ದರ್ಶನ್ ಅವರು ಈ ಮಾತುಗಳು ಹೇಳಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದರ್ಶನ್ ಅವರು, 'ಜೈ ಜವಾನ್, ಜೈ ಕಿಸಾನ್ ಎಂದು ಘೋಷ ವಾಕ್ಯವಿದೆ. ನಾನು ರೈತನೇ ರೈತನಿಲ್ಲದಿದ್ದರೆ ನಾವ್ಯಾರೂ ಇಲ್ಲ, ನಾವೆಲ್ಲಾ ಇಂದು ನೆಮ್ಮದಿಯಾಗಿ ಇದ್ದೀವೆಂದರೆ ಅದಕ್ಕೆ ಸೈನಿಕರು ಕಾರಣ ಅವರಿಬ್ಬರಿಗೂ ಸೆಲ್ಯೂಟ್' ಎಂದು ಹೇಳಿದರು.

'ಸಾಲಮನ್ನಾ ಬಗ್ಗೆ ಮುಂಚೆಯೇ ಮಾತನಾಡಬೇಕು ಎಂದುಕೊಂಡಿದ್ದೆ'
ರೈತರ ಸಾಲದ ಬಗ್ಗೆ ಈ ಹಿಂದೆಯೇ ಕೆಲವು ಕಡೆ ಮಾತನಾಡಬೇಕು ಎಂದುಕೊಂಡಿದ್ದೆ ಸಮಯ ಸೂಕ್ತವಾಗಿಲ್ಲವೆಂದು ಸುಮ್ಮನಾಗಿದ್ದೆ ಎಂದ ದರ್ಶನ್, ರೈತರ ಬೆಳೆಗೆ ಸೂಕ್ತ ಬೆಲೆ ಕೊಡಿ ಅವರೇ ಸಾಲ ತೀರಿಸುತ್ತಾರೆ, ಸಾಲಮನ್ನಾ ಮಾಡುವುದು ಬೇಡ ಎಂದು ಹೇಳಿದರು. ದರ್ಶನ್ ಅವರ ಈ ಮಾತನ್ನು ನೆರೆದಿದ್ದವರು ಭಾರಿ ಚಪ್ಪಾಳೆಯೊಂದಿಗೆ ಅನುಮೋದಿಸಿದರು.

'ಯಾವನೋ ಡಿ-ಬಾಸ್ ಅಂತೆ' ಅಂದಿದ್ರು ಕುಮಾರಸ್ವಾಮಿ
ಮಂಡ್ಯ ಚುನಾವಣೆ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಎದುರಾಳಿ ಸುಮಲತಾ ಅವರ ಪರವಾಗಿ ದರ್ಶನ್ ಅವರು ಪ್ರಚಾರ ಮಾಡಿದ್ದು ಕುಮಾರಸ್ವಾಮಿ ಅವರಿಗೆ ಅಸಹನೀಯವೆನಿಸಿತ್ತು. 'ಯಾವನೋ ಡಿ-ಬಾಸ್ ಅಂತೆ' ಎಂದು ಏಕವಚನದಲ್ಲಿಯೇ ಕುಮಾರಸ್ವಾಮಿ ಅವರು ದರ್ಶನ್ ಅವರನ್ನು ಸಂಭೋದಿಸಿ ಮಾತನಾಡಿದ್ದರು, ಇದು ಇವರಿಬ್ಬರ ಮಧ್ಯೆ ವೈಷಮ್ಯ ಹುಟ್ಟುಹಾಕಿತ್ತು.

ದರ್ಶನ್ ರೈತನಲ್ಲವೆಂದ ಕುಮಾರಸ್ವಾಮಿಗೆ ಸವಾಲು ಹಾಕಿದ್ದರು
ಚುನಾವಣೆಯ ಸಮಯದಲ್ಲಿ ಮೌನವಾಗಿಯೇ ಇದ್ದ ದರ್ಶನ್ ಅವರು, ಬಹಿರಂಗ ಪ್ರಚಾರದ ಕೊನೆಯ ದಿನ ಬೃಹತ್ ಸಮಾವೇಶದಲ್ಲಿ ಕುಮಾರಸ್ವಾಮಿ ಅವರ ಎಲ್ಲ ವೈಯಕ್ತಿಕ ಟೀಕೆಗಳಿಗೂ ಉತ್ತರ ನೀಡಿದ್ದರು, 'ನಾನು ರೈತ, ನೀವು ಒಂದು ಚೆಂಬು ಹಾಲು ಕರೆದು ತೋರಿಸಿ ಆಗ ಒಪ್ಪಿಕೊಳ್ಳುತ್ತೇನೆ' ಎಂದು ಸವಾಲು ಹಾಕಿದ್ದರು.

ಮತ್ತೊಂದು ಸುತ್ತಿನ ಮಾತಿನ ಸಮರಕ್ಕೆ ನಾಂದಿ?
ಮಂಡ್ಯ ಚುನಾವಣೆ ಸಮಯದಲ್ಲಿ ಪ್ರಾರಂಭವಾಗಿದ್ದ ಇಬ್ಬರ ನಡುವಿನ ಮಾತಿನ ಸಮರ ಮತದಾನ ಮುಗಿದು ಎರಡು ವಾರವಾಗುತ್ತಾ ಬಂದರೂ ಇನ್ನೂ ಮುಗಿದಂತೆ ಕಾಣುತ್ತಿಲ್ಲ. ದರ್ಶನ್ ಅವರ ಇಂದಿನ ಹೇಳಿಕೆ ಕುಮಾರಸ್ವಾಮಿ ಅವರನ್ನು ಕೆರಳಿಸುವ ಸಾಧ್ಯತೆ ಇದೆ. ಏಕೆಂದರೆ ಸಾಲಮನ್ನಾ ಯೋಜನೆ ಕುಮಾರಸ್ವಾಮಿ ಅವರ ಕನಸಿನ ಯೋಜನೆಯಾಗಿದೆ, ಇದನ್ನು ದರ್ಶನ್ ಅವರು ಇಂದು ಟೀಕಿಸಿದ್ದಾರೆ. ದರ್ಶನ್ ಅವರ ಇಂದಿನ ಹೇಳಿಕೆ ಮತ್ತೊಂದು ಸುತ್ತಿನ ಮಾತಿನ ಸಮರಕ್ಕೆ ನಾಂದಿ ಆಗುವಂತಿದೆ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications