ದಕ್ಷಿಣ ಕನ್ನಡದಲ್ಲಿ ಮಳೆ ನಾಪತ್ತೆ , ರೈತರು ಕಂಗಾಲು
ಮಂಗಳೂರು : ದಕ್ಷಿಣ ಕನ್ನಡದಲ್ಲಿ ಮಳೆ ನಾಪತ್ತೆಯಾಗಿದೆ. ಎಡೆಬಿಡದೆ ಮಳೆ ಸುರಿಯಬೇಕಿದ್ದ ಜುಲೈ ತಿಂಗಳಲ್ಲಿ ಮಳೆಯೇ ಇಲ್ಲ. ತುಳುವರ ಆಟಿ ತಿಂಗಳು (ಆಷಾಢದಂತೆ) ಎಂದರೆ ಭಾರಿ ಮಳೆಯ ಕಪ್ಪು ದಿನಗಳ ತಿಂಗಳು. ಆದರೆ, ಈ ಬಾರಿ ಪರಿಸ್ಥಿತಿ ವ್ಯತಿರಿಕ್ತ. ಬೇಸಿಗೆ ಕಾಲದಂತಹ ಬಿರು ಬಿಸಿಲು.
ಆರ್ದ್ರ, ಪುನರ್ವಸು , ಪುಷ್ಯಗಳು ಮಳೆ ಸುರಿಸು-ವ ನಕ್ಷತ್ರಗಳೆಂಬುದು ದ.ಕ. ಜಿಲ್ಲೆಯ ಕೃಷಿಕರ ಲೆಕ್ಕಾಚಾರ. ಈ ಬಾರಿ ಲೆಕ್ಕಾಚಾರ ತಪ್ಪಿದೆ. ಮಳೆ ಇಲ್ಲದೆ ಕೃಷಿಗೆ ನೀರಿನ ಅಭಾವವುಂಟಾಗಿದೆ.
ಮಳೆರಾಯನ ಈ ಮುನಿಸಿನಿಂದ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳ ರೈತರು ಕಂಗಾಲಾಗಿದ್ದಾರೆ. ಬೆಟ್ಟುಗದ್ದೆಗಳು ಒಣಗುತ್ತಿವೆ. ಹಸಿರು ಪೈರು ಹಳದಿಯಾಗುತ್ತಿದೆ. ಪಂಪ್ಸೆಟ್ ಇದ್ದವರು ಅದರ ಮೊರೆ ಹೋಗಿದ್ದಾರೆ. ಸದ್ಯಕ್ಕೆ ಖಾರಿಫ್ ಬೆಳೆಯನ್ನು ಉಳಿಸಿಕೊಳ್ಳುವ ಚಿಂತೆಯ ಜೊತೆಗೆ ಎರಡನೇ ಮತ್ತು 3 ನೇ ಬೆಳೆಯ ಕತೆ ಏನು ಎಂಬ ಪ್ರಶ್ನೆ ರೈತನನ್ನು ಕಾಡುತ್ತಿದೆ.
ಈ ಬಾರಿ ಮುಂಗಾರು ಸಕಾಲಕ್ಕೆ ಆರಂಭವಾಗಿ ಭರ್ಜರಿಯಾಗಿ ಸುರಿದಿತ್ತು. ರೈತರು ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ದಕ್ಷಿಣ ಕನ್ನಡ ಎತ್ತರ - ತಗ್ಗು ಪ್ರದೇಶವಾಗಿದ್ದು , ಎತ್ತರದಲ್ಲಿರುವ ಬೆಟ್ಟುಗದ್ದೆಗಳಲ್ಲಿ ಬೆಳೆಗೆ ಮಳೆಯೇ ಆಧಾರ. ಒಟ್ಟು ವಿಸ್ತೀರ್ಣದಲ್ಲಿ ಶೇ. 30 ರಷ್ಟು ಭತ್ತದ ಕೃಷಿ ಆರಂಭವಾಗಿದೆ. ಈಗ ಮತ್ತೆ ಮಳೆಗಾಗಿ ಕಾಯುತ್ತಿದ್ದಾರೆ. ಉಡುಪಿ ಜಿಲ್ಲೆಯ ಕೆಲ ಭಾಗ-ದಲ್ಲಿ ಭತ್ತಕ್ಕೆ ಕಳೆ ರೋಗ , ಸೈನಿಕ ಹುಳುವಿನ ಬಾ-ಧೆಯಂತಹ ತೊಂದರೆಗಳೂ ಕಂಡು ಬಂದು ಕೃಷಿಕನ್ನು ಹೆದರಿಸಿವೆ.
ಪ್ರತಿ ವರ್ಷವೂ ಜುಲೈ ತಿಂಗಳಲ್ಲಿ ಕನಿಷ್ಟ 2 ಅಥವಾ 3 ದಿನಗಳಾದರೂ ಶಾಲಾ ಕಾಲೇಜುಗಳಿಗೆ -ಮ-ಳೆ-ಯಿಂ-ದಾ-ಗಿ ರಜೆ ಘೋಷಿಸಲಾಗುತ್ತಿತ್ತು. ಆದರೆ ಈ ಬಾರಿ ರಜೆ ಘೋಷಿಸಬೇಕಾದ ಪರಿಸ್ಥಿತಿಯನ್ನು ಮಳೆ ನಿರ್ಮಿಸಲೇ ಇಲ್ಲ.
1998ರಲ್ಲಿ ಸುಳ್ಯ, ಬೆಳ್ತಂಗಡಿ, ಪುತ್ತೂರು , ಭಂಟ್ವಾಳ, ಮಂಗಳೂರು ತಾಲೂಕುಗಳಲ್ಲಿ ಜುಲೈ ತಿಂಗಳಲ್ಲಿ 6055.1 ಮಿಮೀ ಮಳೆಯಾಗಿತ್ತು. 1999ರಲ್ಲಿ ಮಳೆಯ ಪ್ರಮಾಣ 6656.5 ಮಿಮೀ ಮತ್ತು 2000ನೇ ಇಸವಿಯಲ್ಲಿ ಸದ್ಯಕ್ಕೆ 3, 519 ಮಿಮೀ ಮಳೆಯಾಗಿದೆ. ಈವರೆಗೆ ಸಾಕಷ್ಟು ಮಳೆಯಾಗಬೇಕಾಗಿದ್ದು, ಒಟ್ಟು ಪ್ರಮಾಣದಲ್ಲಿ ಈ ವರ್ಷ ಅರ್ಧಕ್ಕರ್ಧ ಕುಸಿದಿದೆ ಎಂದೇ ಹೇಳಬಹುದು.
ಹಳ್ಳಿಗಳಲ್ಲಿ ಅಕ್ಟೋಬರ್ ಅಂತ್ಯದವರೆಗೆ ಇರುತ್ತಿದ್ದ ಒರತೆ ನೀರು ಈ ಬಾರಿ ಆಗಸ್ಟ್ ಆರಂಭಕ್ಕೇ ಬತ್ತಿ ಹೋಗಿದೆ. ಬಯಲು ಪ್ರದೇಶದ ಬೆಳೆಗೂ ನೀರು ಹಾಯಿಸಬೇಕಾಗಿದೆ. ಈಗ ನಾಪತ್ತೆಯಾಗಿರುವ ಮಳೆ ಮತ್ತೆ ಕಟಾವಿನ ಸಮಯಕ್ಕೆ ಬಂದರೆ ಕೈಗೆ ಬಂದ ಕಾಳು ತುತ್ತು ಬಾಯಿಗೆ ಬರುವುದಿಲ್ಲ.
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications