ಜಯಾಗೆ ನೀರುಕುಡಿಸಿದ ಕೋರ್ಟ್: ಸದ್ಯಕ್ಕೆ ರಾಜ್ಯ ಬಚಾವ್

ಈಗಲೇ ಈ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ. ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ಮಂದಿ ಸದಸ್ಯರು ಇರುವ ಹೊಸ ಪೀಠ ರಚಿಸಿ ಜುಲೈ ತಿಂಗಳಲ್ಲಿ ಅರ್ಜಿಯ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಯ ಪೀಠಕ್ಕೆ ಆದೇಶಿಸಿದೆ. ಹಾಗಾಗಿ, ಕರ್ನಾಟಕ ಸರಕಾರ ಈ ತಿಂಗಳ ಜುಲೈ ತಿಂಗಳವರೆಗೆ ತಮಿಳುನಾಡಿಗೆ ನೀರು ಬಿಡುವ ಗೋಜಿಗೆ ಹೋಗಬೇಕಾಗಿಲ್ಲ.
ಬೇಸಿಗೆ ಬೆಳೆ ಬೆಳೆಯದಂತೆ ಕರ್ನಾಟಕಕ್ಕೆ ನಿರ್ಭಂದ ಹೇರ ಬೇಕೆಂದು ತಮಿಳುನಾಡು ರಾಜ್ಯದ ವಿರುದ್ದ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಆದೇಶದಿಂದ ತಮಿಳುನಾಡು ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ಈ ಮಧ್ಯೆ, ಸರಕಾರ ತಮಿಳುನಾಡಿಗೆ ನೀರು ಹರಿಯ ಬಿಟ್ಟಿಲ್ಲ, ಮಾಧ್ಯಮಗಳಲ್ಲಿ ಬಂದು ವರದಿಯಲ್ಲಿ ನಿಜಾಂಶವಿಲ್ಲ ಎಂದು ಸಿಎಂ ಸದಾನಂದ ಗೌಡ ಸ್ಪಷ್ಟ ಪಡಿಸಿದ್ದಾರೆ.












Click it and Unblock the Notifications