ಧಾರವಾಡ ಕೃಷಿಮೇಳ 2022; ಸೆ.17ರಿಂದ ನಾಲ್ಕು ದಿನದ ಮೇಳಕ್ಕೆ ವೇದಿಕೆ ಸಜ್ಜು
ಧಾರವಾಡ, ಸೆಪ್ಟೆಂಬರ್, 16: ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸೆಪ್ಟೆಂಬರ್ 17 ರಿಂದ 20 ರವರೆಗೆ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ನಾಲ್ಕು ದಿನಗಳ ಕೃಷಿ ಮೇಳಕ್ಕೆ ವಿವಿಧ ಜಿಲ್ಲೆಯ ಹಾಗೂ ರಾಜ್ಯಗಳಿಂದ ಸುಮಾರು 10-12 ಲಕ್ಷ ರೈತರು, ಸಾರ್ವಜನಿಕರು ಆಗಮಿಸುವ ನಿರೀಕ್ಷೆಯಿದೆ. ಜನದಟ್ಟಣೆಯನ್ನು ನಿರ್ವಹಿಸಲು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಸಚಿವ ಶಿವಾನಂದ ಬಿ.ಕರಳೆ ತಿಳಿಸಿದ್ದಾರೆ.
ವಾಹನ
ನಿಲುಗಡೆಗೆ
ತಲುಪುವ
ಮಾರ್ಗಗಳು
ಸೆಪ್ಟೆಂಬರ್
13ರಂದು
ಕೃಷಿ
ವಿಶ್ವವಿದ್ಯಾಲಯದಲ್ಲಿ
ಜರುಗಿದ
ವಾಹನ
ಸಂಚಾರ
ಮತ್ತು
ನಿಲುಗಡೆ
ಸಮಿತಿ
ಸಭೆಯ
ನೇತೃತ್ವ
ವಹಿಸಿ
ಅವರು
ಮಾತನಾಡಿದರು.
ಕೃಷಿಮೇಳ
ಯಶಸ್ವಿಯಾಗಿ
ಸಂಘಟಿಸುವ
ಉದ್ದೇಶದಿಂದ
ವಾಹನ
ಸಂಚಾರ
ಮತ್ತು
ನಿಲುಗಡೆಗೆ
ಸಾಕಷ್ಟು
ವ್ಯವಸ್ಥೆಗಳನ್ನು
ಮಾಡಲಾಗಿದೆ.
ಧಾರವಾಡದ
ಜುಬ್ಲಿ
ಸರ್ಕಲ್
ಕಡೆಯಿಂದ
ಬರುವ
ವಾಹನಗಳಿಗೆ
ಕೃಷಿ
ವಿಶ್ವವಿದ್ಯಾಲಯದ
ಮುಖ್ಯ
ಕ್ರೀಡಾಂಗಣ
ಮತ್ತು
ಡೇರಿ
ವಿಭಾಗಗಳಲ್ಲಿ
ನಿಲುಗಡೆಗೆ
ವ್ಯವಸ್ಥೆ
ಮಾಡಲಾಗಿದೆ.
ವಿಜಯಪುರ,
ಬಾಗಲಕೋಟ,
ನರಗುಂದ,
ನವಲಗುಂದ,
ರಾಮದುರ್ಗ,
ಗೋಕಾಕ
ಮತ್ತು
ಸವದತ್ತಿ
ಕಡೆಯಿಂದ
ಬರುವ
ವಾಹನಗಳಿಗೆ
ನೇರವಾಗಿ
ಮುರಘಾಮಠದಿಂದ
ಎತ್ತಿನಗುಡ್ಡದ
ಹಿರಿಯ
ಪ್ರಾಥಮಿಕ
ಶಾಲೆ,
ಎತ್ತಿನಗುಡ್ಡ
ಮತ್ತು
ಪಿ.ಜಿ.ಹಾಸ್ಟೆಲ್
ಆವರಣದಲ್ಲಿ
ನಿಲುಗಡೆಗೆ
ವ್ಯವಸ್ಥೆಯನ್ನು
ಮಾಡಲಾಗಿದೆ.
ವಾಹನ
ನಿಲುಗಡೆಗೆ
ಸ್ಥಳಗಳ
ವ್ಯವಸ್ಥೆ
ಕೊಲ್ಹಾಪುರ,
ನಿಪ್ಪಾಣಿ,
ಸಂಕೇಶ್ವರ,
ಚಿಕ್ಕೋಡಿ
ಮತ್ತು
ಬೆಳಗಾವಿ
ಕಡೆಯಿಂದ
ಬರುವ
ವಾಹನಳಿಗೆ
ಬೈ
ಪಾಸ್
ಹತ್ತಿರ
ಏರ್
ಟೆಕ್
ಕಂಪನಿ
ಪಕ್ಕದಲ್ಲಿ
ವಾಹನ
ನಿಲುಗಡೆಗೆ
ವ್ಯವಸ್ಥೆ
ಮಾಡಲಾಗಿದೆ.
ಕಂಪನಿ
ಪಕ್ಕದಲ್ಲಿ
ಖಾಲಿ
ಇರುವ
ಜಾಗದಲ್ಲಿ
ಮತ್ತು
ಬಸವನಗರದ
ಖಾಲಿ
ಇರುವ
ಜಾಗದಲ್ಲಿ
ವಾಹನ
ನಿಲುಗಡೆಗೆ
ವ್ಯವಸ್ಥೆ
ಮಾಡಲಾಗಿದೆ.
ವಾಹನ
ನಿಲುಗಡೆ
ಸ್ಥಳದಲ್ಲಿ
ಪೋಲಿಸ್
ಅಧಿಕಾರಿಗಳಿಗಾಗಿ
ಟೆಂಟ್,
ಮೈಕ್
ವ್ಯವಸ್ಥೆ
ಕಲ್ಪಿಸಲಾಗಿದೆ
ಎಂದು
ತಿಳಿಸಿದರು.
ಕರ್ತವ್ಯದ
ಮೇಲಿದ್ದ
ಸಂಚಾರಿ
ಪೊಲೀಸ್
ಅಧಿಕಾರಿಗಳಿಗೆ
ಸ್ಥಳದಲ್ಲಿಯೇ
ಊಟದ
ವ್ಯವಸ್ಥೆ
ಮಾಡಲಾಗಿದೆ.
ಕೃಷಿ
ವಿಶ್ವವಿದ್ಯಾಲಯದ
ಮುಖ್ಯ
ದ್ವಾರದ
ಎದುರಿನ
ಹಳೆ
ಎನ್ಎಚ್4
ಹೆದ್ದಾರಿಯಲ್ಲಿ
ಯಾವುದೇ
ವಾಹನಗಳನ್ನು
ನಿಲ್ಲಿಸದೇ
ಸುಗಮ
ಸಂಚಾರ
ಕೈಗೊಳ್ಳಲು
ಕ್ರಮ
ಕೈಗೊಳ್ಳಲಾಗಿದೆ.
ರೈತರು
ನಿಗದಿಪಡಿಸಿದ
ಸ್ಥಳಗಳಲ್ಲಿಯೇ
ತಮ್ಮ
ವಾಹನಗಳನ್ನು
ನಿಲ್ಲಿಸಿ
ಕೃಷಿಮೇಳವನ್ನು
ಯಶಸ್ವಿಗೊಳಿಸಬೇಕೆಂದು
ತಿಳಿಸಿದರು
ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ; ರೈತರಿಗೆ ಉಚಿತವಾಗಿ ಔಷಧಿ
ಸಭೆಯಲ್ಲಿ ಉಪಪೊಲೀಸ್ ಆಯುಕ್ತ ಗೋಪಾಲ ಎಂ. ಬ್ಯಾಕೋಡ, ಧಾರವಾಡ ತಹಶೀಲ್ದಾರ್ ಸಂತೋಷ್ ಎಸ್.ಹಿರೇಮಠ, ಎಸಿಪಿ ಟಿ.ಜಿ.ದೊಡ್ಡಮನಿ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಸ್.ನಾಯ್ಕರ್, ಪೋಲಿಸ್ ಸಬ್ ಇನ್ಸ್ಪೆಕ್ಟರ್ ಉಮೇಶ್ ಗೌಡ ಪಾಟೀಲ ಹಾಗೂ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳಾದ ವಿಸ್ತರಣಾ ನಿರ್ದೇಶಕ ಡಾ.ಪಿ.ಎಸ್.ಹೂಗಾರ, ಸಂಶೋಧನಾ ನಿರ್ದೇಶಕ ಡಾ.ಪಿ.ಎಲ್ ಪಾಟೀಲ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ
ವಿವಿಯಲ್ಲಿ
ಬೀಜಮೇಳಕ್ಕೆ
ವೇದಿಕೆ
ಸಜ್ಜು
ಕೃಷಿ
ವಿಶ್ವವಿದ್ಯಾಲಯದಲ್ಲಿ
ಸೆಪ್ಟೆಂಬರ್
17ರಂದು
ಕೃಷಿಮೇಳದ
ಮುಖ್ಯ
ವೇದಿಕೆಯಲ್ಲಿ
ಬೀಜಮೇಳವನ್ನು
ಏರ್ಪಡಿಸಲಾಗಿದೆ.
ಕರ್ನಾಟಕ
ಪ್ರದೇಶ
ಕೃಷಿಕ
ಸಮಾಜದ
ಆಡಳಿತ
ಅಧ್ಯಕ್ಷ
ಜಿ.ಶಿವನಗೌಡರು
ಕಾರ್ಯಕ್ರಮವನ್ನು
ಉದ್ಘಾಟಿಸಲಿದ್ದು,
ಕೃಷಿ
ವಿಶ್ವವಿದ್ಯಾಲಯ
ಕುಲಪತಿ
ಡಾ.ಆರ್.ಬಸವರಾಜಪ್ಪ
ಅಧ್ಯಕ್ಷತೆ
ವಹಿಸಲಿದ್ದಾರೆ.
ಅತಿಥಿಗಳಾಗಿ
ಕೃಷಿ
ವಿವಿ
ವ್ಯವಸ್ಥಾಪಕ
ಮಂಡಳಿ
ಸದಸ್ಯ
ಹಾಗೂ
ಶಾಸಕ
ಗೋವಿಂದರಾಜು,
ತೋಟಗಾರಿಕಾ
ಇಲಾಖೆಯ
ಪ್ರಧಾನ
ಕಾರ್ಯದರ್ಶಿ
ರಾಜೇಂದ್ರ
ಕುಮಾರ್
ಕಟಾರಿಯಾ,
ಕೃಷಿ
ಇಲಾಖೆಯ
ಕಾರ್ಯದರ್ಶಿ
ಶಿವಯೋಗಿ
ಕಳಸದ
ಸೇರಿದಂತೆ
ಇನ್ನಿತರ
ಅಧಿಕಾರಿಗಳು
ಭಾಗಿಯಾಗಲಿದ್ದಾರೆ.
ಅತಿಥಿ ಉಪನ್ಯಾಸಕರಾಗಿ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಟಿ.ಪುತ್ರ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ನಿರ್ದೇಶಕ ಡಾ.ಕರುಣಾಕರ.ಜೆ, ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ವಿವೇಕ ಮೋರೆ ಆಗಮಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.