ತೆಂಗಿನ ಮರ ಹತ್ತುವವರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಇದಕ್ಕೆ ಒಂದು ಸಣ್ಣ ಉದಾಹರಣೆಯೆಂದರೆ ಕರಾವಳಿಯಲ್ಲಿ ತೆಂಗು ಬೆಳೆ ಒಂದು ಕಾಲದಲ್ಲಿ ಯೆಥೇಚ್ಚಾಗಿಯೇ ಇತ್ತು. ರೈತನ ಮನೆಗೆ ಯಾರೇ ಅತಿಥಿಗಳು ಹೋದರೂ ತೆಂಗಿನ ಮರದಿಂದ ಎಳನೀರು ಕೊಡುವುದು ಸಂಪ್ರದಾಯವಾಗಿತ್ತು. ಅಂದರೆ ರೈತರು ತೆಂಗು ಬೆಳೆಸುತ್ತಿದ್ದರು ಎನ್ನುವುದಷ್ಟೇ ಅಲ್ಲ, ಯಾವ ಕ್ಷಣದಲ್ಲಿ ಅತಿಥಿಗಳು ಬಂದರೂ ಮರಹತ್ತಿ ಎಳನೀರು ಕೀಳಲು ಆ ಮನೆಯವರಲ್ಲಿ ಒಬ್ಬರಲ್ಲದಿದ್ದರೆ ಒಬ್ಬರಿಗೆ ಗೊತ್ತಿತ್ತು ಅಥವಾ ಆ ಮನೆಯ ಗದ್ದೆ ಕೆಲಸಕ್ಕೆ ಬರುತ್ತಿದ್ದ ಆಳುಗಳಿಗಾದರೂ ಗೊತ್ತಿತ್ತು.
ಈಗ ತೆಂಗಿನ ಮರ ಹತ್ತಲು ವೃತ್ತಿನಿರತರನ್ನೇ ಅವಲಂಬಿಸಬೇಕು. ಈಗ ಮೊಬೈಲ್ ಬಂದಮೇಲಂತೂ ಅವರಿಗೆ ಬಾರೀ ಡಿಮ್ಯಾಂಡ್. ಮರದಿಂದ ತೆಂಗಿನ ಕಾಯಿ ಕೀಳುವುದಿತ್ತು ಯಾವಾಗ ಬರುತ್ತೀರಿ? ಎಂದು ಅವರ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಕರೆ ಸ್ವೀಕರಿಸಿದ ವೃತ್ತಿ ನಿರತನಿಂದ ಬರುವ ಉತ್ತರ ಇನ್ನೊಂದು ವಾರ ಪುರುಸೋತ್ತಿಲ್ಲ, ಯಾವುದಕ್ಕೂ ಮುಂದಿನ ವಾರ ಕರೆ ಮಾಡಿ ಹೇಳುತ್ತೇನೆ ಎನ್ನುತ್ತಾನೆ. ನೀವು ನಾಳೆಯೇ ಬರಬೇಕು ಅಂದರೆ ಟೈಮಿಲ್ಲ, ಬೇರೆಯವರಿಂದ ಕಾಯಿ ಕೀಳಿಸಿಕೊಳ್ಳಿ ಎಂದೇಳಿ ಕರೆ ಕಟ್ ಮಾಡಿಬಿಡುತ್ತಾನೆ.
ಬೇರೆ ಗತಿಯಿಲ್ಲದೆ ವಾರ ಕಳೆದು ಕಾಡಿ ಬೇಡಿ ಅವನನ್ನು ತೆಂಗಿನಕಾಯಿ ಕೀಳಿಸಲು ಕರೆದುತರುವಲ್ಲಿ ಸಫಲರಾದಿರಿ ಅಂದುಕೊಳ್ಳಿ. ಒಂದು ಮರಕ್ಕೆ 35 ರೂಪಾಯಿ ಕೊಡಬೇಕು. ಮರ ಭಾರೀ ಎತ್ತರದಲ್ಲಿದ್ದರೆ ಇನ್ನೂ ಹತ್ತು ರೂಪಾಯಿ ಹೆಚ್ಚು. ಎಳತು-ಬಲಿತದ್ದು ಅಂತೇನಾದರೂ ಕೆಳಗೆ ನಿಂತು ರಾಗ ತೆಗೆದರೆ ಸರ್ರನೆ ಮರ ಇಳಿದು ಬೇರೆಯವರಿಂದ ಕಾಯಿ ಕೀಳಿಸಿ ಎಂದೇಳಿ ಹೋಗುತ್ತಾನೆ ಹುಷಾರ್.
ಇದು ಕಟ್ಟು ಕಥೆಯಲ್ಲ, ಕರಾವಳಿಯ ವಸ್ತುಸ್ಥಿತಿ. ಅದೆಷ್ಟೋ ತೆಂಗಿನ ತೋಟಗಳಲ್ಲಿ ತೆಂಗಿನಕಾಯಿ ಕೀಳಲು ವೃತ್ತಿನಿರತರು ಸಿಗದೆ ತಾನಾಗಿಯೇ ಉದುರುವತನಕ ತೋಟದ ಮಾಲೀಕ ಕಾಯುತ್ತಿರಬೇಕು. ಹಿಂದೆ ಹೀಗಿರಲಿಲ್ಲ ಮಾಲೀಕ ಬೇಕೆನಿಸಿದಾಗ ತೆಂಗಿನಮರ ಹತ್ತಿಸಲು ಆಳುಗಳಿರುತ್ತಿದ್ದರು. ಅಂದರೆ ಅಂದು ತೆಂಗಿನ ಮರ ಹತ್ತುವುದು, ಕಾಯಿ ಕೀಳುವುದು ವೃತ್ತಿಯಾಗಿರಲಿಲ್ಲ ಅದು ಅವರ ಬದುಕಿನ ಅಂಗವಾಗಿತ್ತು, ಹವ್ಯಾಸವೂ ಆಗಿತ್ತು ಅಲ್ಲವೇ?
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications