ತೊಗರಿ, ಹತ್ತಿ ಬೆಳೆಯುವ ರೈತರಿಗೆ ಕೆಲವು ಸಲಹೆಗಳು
ಕಲಬುರಗಿ,ಸೆಪ್ಟೆಂಬರ್ 11 : ಕಲಬುರಗಿ ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಕಳೆದ ಎರಡು ದಿನಗಳಲ್ಲಿ ಅತಿ ಮಳೆಯಿಂದ ಹಲವು ಹೊಲಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದ ತೊಗರಿ ಮತ್ತು ಹತ್ತಿ ಬೆಳೆದ ರೈತರು ಸಂಕಷ್ಟಕ್ಕೀಡಾಗಿದ್ದು, ಈ ಬಗ್ಗೆ ಕೃಷಿ ನಿರ್ದೇಶಕರು ಕೆಲ ಸಲಹೆಗಳನ್ನು ನೀಡಿದ್ದಾರೆ.
ತೊಗರಿ ಮತ್ತು ಹತ್ತಿ ಬೆಳೆಯ ಹೊಲಗಳಲ್ಲಿ ಅತೀ ತೇವಾಂಶದಿಂದ ರೈತರು ಈ ಕೆಳಕಂಡಂತೆ ಬೆಳೆವಾರು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಹೆಚ್ ಮೊಕಾಶಿ ತಿಳಿಸಿದ್ದಾರೆ.

ತೊಗರಿ ಬೆಳೆಗೆ ಪೈಟೊಪ್ತೆರಾ ಬ್ಲೈಟ, ಸೊರಗು ರೋಗ, ಬೇರು ಕೊಳೆ, ಕಾಂಡ ಕೊಳೆಯುವ ರೋಗಕ್ಕೆ ಸಂಬಂಧಿಸಿದಂತೆ ಗಿಡದ ಕೆಳಭಾಗದಲ್ಲಿ ಕಾಂಡದ ಮೇಲೆ ಕಂದು ಬಣ್ಣದ ಮಚ್ಚೆಗಳು ಹಾಗೂ ಗಂಟುಗಳು ಕಾಣಿಸಿಕೊಂಡಿದ್ದು, ನಂತರ ಗಿಡಗಳು ಮುರಿದು ಬೀಳುತ್ತದೆ.
ಒಂದು ವೇಳೆ ತೊಗರಿಯ ಬೆಳವಣಿಗೆಯ ಹಂತದಲ್ಲಿದ್ದಾಗ, ಮೋಡ ಮುಸುಕಿದ ವಾತಾವರಣ ಹಾಗೂ ಸತತವಾಗಿ ತುಂತುರ ಮಳೆ ಬಂದು ಹೊಲದಲ್ಲಿ ನೀರು ನಿಂತರೆ ಈ ರೋಗ ಹೆಚ್ಚಾಗಿ ಕಂಡು ಬರುತ್ತದೆ.
ಇದು ಮಣ್ಣು ಜನ್ಯ ರೋಗವಾಗಿದ್ದು, ನೀರು ನಿಲ್ಲುವ ಪ್ರದೇಶದಲ್ಲಿ ರೋಗದ ಭಾದೆ ಹೆಚ್ಚಾಗಿ ಕಂಡುಬರುತ್ತದೆ. ರೈತರು ಹೊಲದಲ್ಲಿ ನಿಂತ ನೀರನ್ನು ಬಸೆದು ಹೊಗುವಂತೆ ಮಾಡಬೇಕು ಹಾಗೂ ಪ್ರತಿ ಲೀಟರ ನೀರಿಗೆ 2 ಗ್ರಾಂ ಮಾಂಕೊಜೆಬ ಅಥವಾ ಮೆಟಾಲಾಕ್ಸಿಲ್ ಬೆರೆಸಿ ಗಿಡದ ಕಾಂಡದ ಮೇಲೆ ಸಿಂಪಡಿಸಬೇಕು ಮತ್ತು ಬುಡದ ಮಣ್ಣನ್ನು ನೆನೆಸಬೇಕು.
ಹತ್ತಿ ಬೆಳೆಗೆ ಸೊರಗು ರೋಗ, ಬೇರು ಕೊಳೆ, ಕಾಂಡ ಕೊಳೆಯುವ ರೋಗ, ಗಿಡ ಬಾಡುವಿಕೆ ಸಂಬಂಧಿಸಿದಂತೆ ತಗ್ಗು ಪ್ರದೇಶದ ಹೊಲದಲ್ಲಿ ನೀರು ನಿಂತಲ್ಲಿ ಹಾಗೂ ಅತಿ ತೇವಾಂಶದಿಂದ ಬೇರು ಕೊಳೆತು ಗಿಡ ಬಾಡುತ್ತದೆ.
ಹೊಲದಲ್ಲಿ ನಿಂತ ನೀರನ್ನು ಬಸೆದು ಹೊಗುವಂತೆ ಮಾಡಬೇಕು. ತೇವಾಂಶವಿದ್ದಲ್ಲಿ ಪ್ರತಿ ಲೀಟರ ನೀರಿಗೆ 3 ಗ್ರಾಂ ತಾಮ್ರದ ಆಕ್ಸೈಕ್ಲೋರೈಡ ಸಿಂಪರಣೆ ಮಾಡುವದು. ತೇವಾಂಶವಿರದಿದ್ದಲ್ಲಿ 2 ಗ್ರಾಂ ಕಾರ್ಬನಡೈಜಿಮ ಬೆರೆಸಿ ಗಿಡದ ಕಾಂಡದ ಮೇಲೆ ಸಿಂಪಡಿಸಬೇಕು ಮತ್ತು ಬುಡದ ಮಣ್ನನ್ನು ನೆನೆಸಬೇಕು.
ರೈತರಿಗೆ ಅವಶ್ಯವಿರುವ ಬಿತ್ತನೇ ಬೀಜಗಳು, ಜೈವಿಕ ಗೊಬ್ಬರಗಳು, ಲಘು ಪೋಷಕಾಂಶಗಳು, ಜೈವಿಕ ಪಿಡೆನಾಶಕಗಳು, ಕೀಟನಾಶಕಗಳು ಹತ್ತಿರದ ಸಂಪರ್ಕ ಕೇಂದ್ರಗಳಲ್ಲಿ ರೈತರು ರಿಯಾಯತಿ ದರದಲ್ಲಿ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications