ಕರಾವಳಿ ತೆಂಗು ಬೆಳೆಗಾರರಿಗೆ ಕಪ್ಪು ತಲೆ ಹುಳದ ಚಿಂತೆ
ಮಂಗಳೂರು, ಜೂನ್ 5: ಕರಾವಳಿ ಭಾಗದ ತೆಂಗು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಕಪ್ಪು ತಲೆ ಹುಳ ಬಾಧೆಯಿಂದ ಅವರು ತಮ್ಮ ತೆಂಗಿನ ಮರಗಳನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ವಿಶೇಷವಾಗಿ ಉಳ್ಳಾಲ, ಮಂಜನಾಡಿ, ಕಲ್ಲಾಪು ಭಾಗಗಳಲ್ಲಿ ಹಾಗೂ ನೇತ್ರಾವತಿ ನದಿ ತೀರಗಳಲ್ಲಿ ಇಂತಹ ಕಪ್ಪು ತಲೆಯ ಹುಳಗಳ ಬಾಧೆ ಕಂಡುಬಂದಿದೆ.
ತೆಂಗಿನ ಮರದ ಗರಿಗಳು ಬೆಂಕಿ ಹಚ್ಚಿದ ರೀತಿಯಲ್ಲಿ ಸಂಪೂರ್ಣ ಸುಟ್ಟು ಹೋದಂತೆ ಕಂಡು ಬರುತ್ತಿವೆ. ಆರಂಭದಲ್ಲಿ ತುದಿಯು ಕಪ್ಪಾಗಿ ಒಣಗುತ್ತಾ, ತೆಂಗಿನ ಕಾಯಿ ಕೂಡಾ ಚಿಕ್ಕದಾಗಿ ಒಣಗಲು ಶುರುವಾಗುತ್ತದೆ. ಏನೇ ರಾಸಾಯನಿಕ ಪ್ರಯೋಗ ಮಾಡಿದರೂ ಈ ರೋಗವನ್ನು ಶಮನಗೊಳಿಸಲು ಸಾಧ್ಯವಾಗಿಲ್ಲ ಎನ್ನುವುದು ರೈತರ ಅಳಲು.

"ಇದು ಕಪ್ಪು ತಲೆ ಹುಳ ಬಾಧೆಯ ಸಮಸ್ಯೆ. ನಾವು ಇದಕ್ಕೆ ಈಗಾಗಲೇ ಸಿಪಿಸಿಆರ್'ಐ ಕಾಸರಗೋಡು ಮತ್ತು ಕೇಂದ್ರೀಯ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ತೋಟಗಾರಿಕಾ ಇಲಾಖೆ ಸಂಯೋಗದಲ್ಲಿ ಈಗಾಗಲೇ ಡಿಸೆಂಬರಿನಲ್ಲಿ ತರಬೇತಿಯನ್ನು ರೈತರಿಗೆ ನೀಡಿದ್ದೇವೆ. ತೋಟಗಾರಿಕಾ ಇಲಾಖೆಯಿಂದ ಇದಕ್ಕೆ ಪರ್ಯಾಯವಾಗಿ ಗೋನಿಯೋಜಿಸ್ ಪರೋಪಜೀವಿಯನ್ನು ಉತ್ಪಾದನೆ ಮಾಡಿ ಕಪ್ಪು ತಲೆ ಹುಳ ಬಾಧೆ ಕಂಡುಬರುತ್ತಿರುವ ಮರಗಳಿಗೆ ಬಿಡಲಾಗಿದೆ. ಪ್ರತೀ 15 ದಿನಕ್ಕೊಮ್ಮೆ ಇವುಗಳನ್ನು ಬಿಡುಗಡೆ ಮಾಡಿದರೆ ಹುಳಬಾಧೆ ಕಡಿಮೆಯಾಗುತ್ತದೆ," ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸೀಮಾ.
"ವಿಶೇಷವಾಗಿ ಮಳೆ ಇಲ್ಲದ ಸಂದರ್ಭದಲ್ಲಿ ಬಿರುಬಿಸಿಲಿನ ತೀವ್ರತೆಗೆ ಸಿಲುಕಿ ಮರ ಒಣಗಿದಂತೆ ಕಂಡುಬರುತ್ತಿದೆ. ಇದಕ್ಕೆ ಯಾರೂ ಆತಂಕ ಪಡಬೇಕಾಗಿಲ್ಲ. ಗಿಡಗಳು ಸಾಯುವುದಿಲ್ಲ. ಮಳೆ ಬಂದ ಕೂಡಲೇ ಇದು ಸರಿಯಾಗುತ್ತದೆ. ಹೊಸ ಗರಿಗಳು ಬರುತ್ತವೆ" ಎನ್ನುವುದು ನಿರ್ದೇಶಕಿ ಸೀಮಾ ಸಲಹೆಯಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications