ಸಾಲಮನ್ನಾ:ಮೊದಲ ಋಣಮುಕ್ತ ಪತ್ರ ಪಡೆಯಲಿದ್ದಾರೆ ದೊಡ್ಡಬಳ್ಳಾಪುರ ರೈತರು
ಬೆಂಗಳೂರು, ಡಿಸೆಂಬರ್ 07: ಸಾಲಮನ್ನಾದ ಮೊದಲ ಋಣಮುಕ್ತ ಪತ್ರವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ವ್ಯಾಪ್ತಿಯ ರೈತರು ಡಿಸೆಂಬರ್ 08 ರಂದು ಪಡೆಯಲಿದ್ದಾರೆ.
ಡಿಸೆಂಬರ್ 12ನೇ ತಾರೀಖಿನಂದು ಕುಮಾರಸ್ವಾಮಿ ಅವರು ಸಾಲಮನ್ನಾ ಆದ ರೈತರಿಗೆ ಋಣಮುಕ್ತ ಪತ್ರವನ್ನು ದೊಡ್ಡಬಳ್ಳಾಪುರದಲ್ಲಿ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವು ಮುಖಂಡರು ಭಾಗವಹಿಸಲಿದ್ದಾರೆ.
ಬ್ಯಾಂಕ್ನಿಂದ ನೋಟಿಸ್, ಏನು ಮಾಡಬೇಕು ಎಂದು ಸಿಎಂಗೆ ರೈತನ ಪತ್ರ
ರೈತರ ಬೆಳೆ ಸಾಲಮನ್ನಾವನ್ನು ಮೊದಲಿಗೆ ಪ್ರಯೋಗಿಕವಾಗಿ ದೊಡ್ಡಬಳ್ಳಾಪುರ ಮತ್ತು ಸೇಡಂ ತಾಲ್ಲೂಕುಗಳಲ್ಲಿ ಜಾರಿಗೆ ತರಲಾಗಿತ್ತು. ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ರೈತರ ಸಾಲಮನ್ನಾ ಪ್ರಕ್ರಿಯೆ ಮುಗಿದಿದೆ ಎನ್ನಲಾಗಿದ್ದು, ಹಾಗಾಗಿ ಡಿಸೆಂಬರ್ 08 ರಂದು ಋಣಮುಕ್ತ ಪತ್ರ ವಿತರಣೆ ಸಮಾರಂಭ ಆಯೋಜಿಸಲಾಗಿದೆ.
ರೈತರಿಂದ ಸಿಎಂಗೆ ಕ್ಲಾಸ್, ಮತ್ತೆ ಹಂಗಿನ ಮಾತಾಡಿದ ಕುಮಾರಸ್ವಾಮಿ
ಇತ್ತೀಚೆಗಷ್ಟೆ ರೈತರ ಸಭೆಯಲ್ಲಿ ಮಾತನಾಡಿದ್ದ ಕುಮಾರಸ್ವಾಮಿ ಅವರು, ಡಿಸೆಂಬರ್ 8 ರಿಂದ ರಾಜ್ಯದಾದ್ಯಂತ ಎಲ್ಲೆಡೆ ಸಾಲಮನ್ನಾ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಮೊದಲ ಕಂತಾಗಿ ರಾಷ್ಟ್ರೀಯ ಬ್ಯಾಂಕುಗಳ 1 ಲಕ್ಷ ಸಾಲಮನ್ನಾ ಆಗುತ್ತದೆ ಎಂದು ಹೇಳಿದ್ದರು.