“CALM BEFORE STORM” ಎಂಬಂತೆ ಮುಂದಿನ ದಿನಗಳಲ್ಲಿ ಮಿಡತೆಗಳ ದಾಳಿ ಭೀಕರವಾಗಲಿದೆ
ಮರುಭೂಮಿ ಮಿಡತೆಗಳ ದಾಳಿಯ ಸುದ್ದಿ ಕೊಂಚ ಮರೆಯಾದಂತೆ ಕಾಣುತ್ತಿದೆ. ಇತ್ತೀಚೆಗೆ ಗುಜರಾತ್, ರಾಜಾಸ್ಥಾನ್, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಬೆಳೆಗಳ ಮೇಲೆ ದಾಳಿ ಇಟ್ಟಿದ್ದ ಮಿಡತೆಗಳು ಎತ್ತ ಹೋದವು?
Recommended Video
ಪಾಕೀಸ್ತಾನ ಮತ್ತು ಇರಾನ್ ನಿಂದ ಬಂದಿದ್ದ ಈ ಮಿಡತೆಗಳ ಕೆಲ ಸಮೂಹ ಕೀಟ ನಾಶಕ ಸಿಂಪರಣೆಗಳಿಂದ ಸತ್ತಿದ್ದರೆ, ಮತ್ತಷ್ಟು ಆಯಸ್ಸು ಮುಗಿದು ತೀರಿ ಹೋಗಿವೆ. ಇವುಗಳ ಜೀವಿತಾವಧಿ ಐದು ತಿಂಗಳು. ವಾತಾವರಣವನ್ನಾಧರಿಸಿ ಮೂರರಿಂದ ಐದು ತಿಂಗಳವರೆಗೆ ಬದುಕಿರುತ್ತವೆ. ಅಂದ ಮಾತ್ರಕ್ಕೆ ಮರುಭೂಮಿ ಮಿಡತೆಗಳ ಹಾವಳಿ ಮುಗಿದು ಹೋಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಮತ್ತಷ್ಟು ಮಿಡತೆಗಳ ಸಮೂಹ ಭಾರತಕ್ಕೆ ದಾಳಿ ಇಡುವ ಸಂಭವವಿದೆ. ಈ ಬಾರಿ ಮುಂಗಾರು ಮಾರುತಗಳನ್ನು ಅನುಸರಿಸಿ ಆಫ್ರಿಕಾ ದೇಶದಿಂದ ಬರುತ್ತವೆ ಎಂದು ಫರೀದಾಬಾದ್ ನ LWO (Locust Warning Organization) ಊಹಿಸಿದೆ.

ಮಿಡತೆಗಳ ನಿಯಂತ್ರಣ ಕೆಲಸ ನಡೆಯುತ್ತಲೇ ಇರುತ್ತದೆ
ಬಿಸಿಲು ಮತ್ತು ಮಳೆಯ ವಾತಾವರಣ ಮರುಭೂಮಿ ಮಿಡತೆಗಳಿಗೆ ಬಹಳ ಆನಂದ. ಸಂತಾನ ವೃದ್ಧಿಗೂ ಇದು ಸುಸಮಯ. ಇದೀಗ ಉತ್ತರ ಭಾರತದಲ್ಲಿ ಮುಂಗಾರು ಮಳೆ ಆರಂಭವಾದಾಗ ಮರಳು ಪ್ರದೇಶಗಳಲ್ಲಿ ಮಿಡತೆಗಳು ಮೊಟ್ಟೆಗಳನ್ನಿಡುತ್ತವೆ. ಮತ್ತೆ ಸಂತಾನ ವೃದ್ಧಿಯಾಗುತ್ತದೆ. ಅವುಗಳ ನಿಯಂತ್ರಣ ಕೆಲಸ ಎಂದಿನಂತೆ ನಡೆಯುತ್ತಲೇ ಇರುತ್ತದೆ.

ಆಫ್ರಿಕಾ ಮಿಡತೆಗಳನ್ನು ಎದುರಿಸಲು ತಯಾರಿ
ಅದು ಬಿಟ್ಟು ಇದೀಗ ಆಫ್ರಿಕಾದಿಂದ ಬರಲಿರುವ ಮಿಡತೆಗಳ ಸಮೂಹವನ್ನು ಎದುರಿಸಲು ಎಲ್ಲಾ ತಯಾರಿ ನಡೆಸಿಕೊಂಡಿರುವುದಾಗಿ LWO ತಿಳಿಸಿದೆ. 25 ಡ್ರೋನ್ ಗಳು 60 ವಾಹನ ಚಾಲಿತ ಸಿಂಪರಣಾ ಘಟಕಗಳನ್ನು ಈ ತಿಂಗಳೊಳಗಾಗಿ ಸಿದ್ಧವಾಗಿಟ್ಟುಕೊಳ್ಳುವುದಾಗಿಯೂ ಸಂಸ್ಥೆ ಹೇಳಿದೆ.

ಗುತ್ತಿಗೆ ಆಧಾರದ ಮೇಲೆ 175 ಮಂದಿ ಕ್ಷೇತ್ರಾಧಿಕಾರಿಗಳ ನೇಮಕ
ಕೇಂದ್ರ ಸರ್ಕಾರದ Directorate of Plant Protection, Quarantine and Storage - Faridabad ಫೋನ್. 0129-2418506 ಸಂಸ್ಥೆಯು ಮರುಭೂಮಿ ಮಿಡತೆಗಳ ನಿಯಂತ್ರಣ ಕಾರ್ಯಕ್ಕೆ ಗುತ್ತಿಗೆ ಆಧಾರದ ಮೇಲೆ 175 ಮಂದಿ ಕ್ಷೇತ್ರಾಧಿಕಾರಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಇದೇ ತಿಂಗಳು 12 ರಂದು ನಡೆವ ಸಂದರ್ಶನದಲ್ಲಿ ಆಯ್ಕೆಯಾಗುವ ಸಿಬ್ಬಂದಿ ಮುಂದಿನ ಮಾರ್ಚ್ 2021 ರವರೆಗೆ ಕೆಲಸ ನಿರ್ವಹಿಸಲಿದ್ದಾರೆ.

ಮಿಡತೆ ನಿಯಂತ್ರಣಕ್ಕೆ 30 ಮಂದಿ ತಜ್ಞರ ನಿಯೋಜನೆ
ಬೆಂಗಳೂರು, ಮುಂಬೈ, ದೆಹಲಿ, ಪಾಟ್ನಾ, ಇಂಫಾಲ್, ಕಲ್ಕತ್ತಾ ಸೇರಿದಂತೆ ಅನೇಕ ಪ್ರದೇಶಗಳಿಂದ 30 ಮಂದಿ ತಜ್ಞರನ್ನು ಮಿಡತೆಗಳ ನಿಯಂತ್ರಣಕ್ಕೆ ನಿಯೋಜಿಸಿ ನಿನ್ನೆ ಆದೇಶ ಹೊರಬಿದ್ದಿದೆ.
ಈ ಎಲ್ಲಾ ತಯಾರಿಗಳನ್ನು ಗಮನಿಸಿದಾಗ "CALM BEFORE THE STORM" ಎಂಬಂತೆ ಮರುಭೂಮಿ ಮಿಡತೆಗಳ ದಾಳಿ ಕೊಂಚ ಶಮನವಾದಂತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳಿಂದ ಬಹುದೊಡ್ಡ ವಿಪತ್ತು ಕಾದಿದೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications