ಯುಪಿಸಿಎಲ್ ವಿವಾದ: ಪೇಜಾವರ ಶ್ರೀಗಳ ನಿಂದಿಸಬೇಡಿ

ಸರ್ವಪಕ್ಷಗಳ, ಸರ್ವಸಂಘಟನೆಗಳ, ಸರ್ವಧಾರ್ಮಿಕ ಮುಖ್ಯಸ್ಥರನ್ನೊಳಗೊಂಡ ಯುಪಿಸಿಎಲ್ ಹಠಾವೋ ಆಂದೋಲನ ಸಮಿತಿಗೆ ಈ ದೃಷ್ಟಿಯಿಂದಲೇ ನಾವು ಬೆಂಬಲಿಸುತ್ತಿದ್ದೇವೆ ಮತ್ತು ಅದರಲ್ಲಿ ಸಹಭಾಗಿಗಳಾಗಿದ್ದೇವೆ. ಪೇಜಾವರ ಶ್ರೀಗಳು ಎಂಎಸ್ಇಝಡ್ ಮತ್ತು ಉಷ್ಣ ವಿದುತ್ ಸ್ಥಾವರ ವಿರುದ್ಧ ಹೋರಾಟಕ್ಕೆ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ.
ಅವರ ಈ ಕಾಳಜಿಯನ್ನು ನಾವು ಅರ್ಥಮಾಡಿಕೊಂಡು ಗೌರವಿಸಬೇಕು. ಕಾರ್ಯಸಾಧನೆಯಲ್ಲಿ ಅವರ ದಾರಿ ನಮಗೆ ಹಿತವಾಗುವುದಿಲ್ಲ ಮತ್ತು ಒಪ್ಪಿಗೆ ಇಲ್ಲ ಎಂದಾದಲ್ಲಿ ಅದನ್ನು ವಿನಯಪೂರ್ವಕವಾಗಿ ಅವರಿಗೆ ತಿಳಿಸಬಹುದು. ಇಂತಹ ಸಂದರ್ಭ ನಮಗೆ ಈ ಹಿಂದೆ ಬಂದಿತ್ತು. ಚಳವಳಿಗಳ ನೇತೃತ್ವವನ್ನು ಸ್ವಾಮೀಜಿಯವರಿಗೆ ನಾವು ಒಪ್ಪಿಸಿಲ್ಲ. ನಮ್ಮ ದಾರಿಯನ್ನು ಅವರ ಮೇಲೆ ನಾವು ಹೇರುವುದು ಸರಿಯಲ್ಲ.
ಕರ್ನಾಟಕ ರಾಜ್ಯ ರೈತ ಸಂಘಕ್ಕೆ ರೈತಪರ ಹೋರಾಟದ ಖ್ಯಾತಿ ಇದೆ. ಈ ಜಿಲ್ಲೆಯಲ್ಲಿ ಅದನ್ನು ಉಳಿಸಿ ಬೆಳೆಸಬೇಕೆಂದೂ ಆದರೆ ಹಿಂಸಾತ್ಮಕ ದಾರಿ ಬೇಡವೆಂದೂ ನಾವು ವಿನಂತಿಸುತ್ತೇವೆ. ಸುಧಾರಣಾ ಸಾಮರ್ಥ್ಯ ಅಧ್ಯಯನ ಪೂರ್ಣಗೊಳ್ಳುವ ತನಕ ಈ ವಿದ್ಯುತ್ ಸ್ಥಾವರ ಬಂದ್ ಮಾಡಬೇಕೆಂದು ನಾವು ಒತ್ತಾಸುತ್ತಾ ಬಂದಿದ್ದೇವೆ ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡುವುದಕ್ಕಿಂತ ಜಿಲ್ಲೆಯ ನೆಲ, ಜಲ, ಕಾಡು, ಕಡಲು ಹಾಗೂ ಕೃಷಿಕರ, ಮೀನುಗಾರರ ಹಿತರಕ್ಷಣೆಗೆ ಒಂದಾಗಬೇಕೆಂದೂ ಈ ಪರಿಸರ ಸೂಕ್ಷ ಪ್ರದೇ ಶವನ್ನು ಮುಂದಿನ ಪೀಳಿಗೆಗೆ ಉಳಿಸಬೇಕೆಂದೂ ಆಗ್ರಹಿಸುತ್ತೇವೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications