ಸಮ್ಮೇಳನಕ್ಕೆ ಬೆಂಬಲ : ಬೆಳಗಾವಿ ಆಟೋರಿಕ್ಷಾ

ಆದೇಶದ ಪ್ರಕಾರ, ಆಟೋದಲ್ಲಿ ಐದು ಪ್ರಯಾಣಿಕರನ್ನು ಕುಳ್ಳಿರಿಸಬಹುದಾಗಿದೆ. ಕನಿಷ್ಠ ಆಟೋದರ 15 ರು.ದಿಂದ 20 ರು.ಗೆ ಏರಿಸಲಾಗಿದೆ. ಆದರೆ, ಏಕಕಾಲಕ್ಕೆ ಐದು ಜನ ಪ್ರಯಾಣಿಕರನ್ನು ಕರೆದೊಯ್ಯಬಹುದಾದದ್ದು ಸಾರ್ವಜನಿಕರಿಗೆ ಬೋನಸ್. ಅಂದ ಹಾಗೆ, ಎರಡು ಕಿ.ಮೀ. ನಂತರದ ಪ್ರತಿ ಕಿ.ಮೀ. ದರ 4 ರು.
ಬೆಳಗಾವಿಯಲ್ಲಿ ಸುಮಾರು ಎಂಟು ಸಾವಿರ ಆಟೋ ರಿಕ್ಷಾಗಳು ಹರಿದಾಡುತ್ತವೆ. ಬಹುತೇಕ ಆಟೋಗಳು 2 ಸ್ಟ್ರೋಕ್ ಇಂಜಿನ್ ದವಾದರೆ, ಇತ್ತೀಚೆಗೆ ಬರುತ್ತಿರುವ ಆಟೋಗಳೆಲ್ಲ 4 ಸ್ಟ್ರೋಕ್ ಮಾಡೆಲ್ ಗಳಾಗಿವೆ. ಎಲ್ಲಾ ಆಟೋಗಳಿಗೂ ಲಾಕ್ ಅಂಡ್ ಬೋಲ್ಟ್ ಸೌಲಭ್ಯವಿರುವ ಬಾಗಿಲುಗಳಿವೆ. ಮಕ್ಕಳನ್ನು ಶಾಲೆಗೆ ಒಯ್ಯುವ ಚಾಲಕರಿಗೆ ಮತ್ತು ಮಳೆಗಾಲದಲ್ಲಿ ಸುತ್ತಾಡುವವರಿಗೆ ಇದು ತುಂಬಾ ಅನುಕೂಲವಾಗುತ್ತದೆ. ಇಂಥ ಆಟೋವನ್ನು ಬೆಂಗಳೂರಿನಲ್ಲಿ ಹುಡುಕಿಕೊಟ್ಟವರಿಗೆ ಒಂದು ಐಪ್ಯಾಡ್ 2 ಬಹುಮಾನವಾಗಿ ನೀಡಲಾಗುತ್ತದೆ!
"ಸಮ್ಮೇಳನ ನಡೆಯುತ್ತಿರುವುದು ಭಾಳ ಖುಷಿ ತಂದೈತಿ. ಬೆಳಗಾನಿಂದ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಮಸ್ತ್ ಓಡಾಟ ನಡದೈತಿ. ಕಮಾಯಿನೂ ಭರಪೂರೈತಿ" ಎಂದು ಹೇಳುತ್ತಾರೆ ಆಟೋ ಚಾಲಕ ಶೇಖರ್ ಕಾಮತಕರ್. ಆಟೋ ನಂಬರ್, ಕೆಎ 22 - 2758. ಶೇಖರ್ ಮಾತಿಗೆ ದನಿಗೂಡಿಸಿದವರು ಆಟೋ ಚಾಲಕ ಹಫೀಜ್ ಲಷ್ಕರ್. ಅವರ ಆಟೋ ನಂಬರ್ ಕೆಎ 22 ಬಿ 3645.
"ನಾವು ಇಂತಹ ಸಂಭ್ರಮವನ್ನು ನೋಡಿರಲಿಲ್ಲ. ಊರು ತುಂಬ ಹೊಸ ಮಂದಿ ಬಂದಾರ. ಕನ್ನಡ ಸಮ್ಮೇಳನಕ್ಕೆ ನಮ್ಮ ಮತ್ತು ಎಲ್ಲಾ ಆಟೋ ಚಾಲಕರ ಬೇಷರತ್ ಬೆಂಬಲ ಇದೆ. ಜಿಲ್ಲಾಧಿಕಾರಿಗಳ ಆದೇಶವನ್ನು ಶಿರಸಾವಹಿಸಿ ಪಾಲಿಸುವಂತೆ ಆಟೋ ಯೂನಿಯನ್ ನಮಗೆಲ್ಲ ಹೇಳಿದೆ" ಎಂದು ಶೇಖರ್ ಜೆಎನ್ಎಮ್ ಸಿ ರಸ್ತೆಯಲ್ಲಿ ಹೇಳಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications