ಕೊಪ್ಪಳಕ್ಕೆ 78ನೇ ಸಮ್ಮೇಳನ ಒಲಿದಿದ್ದೇಕೆ?

ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಹಾವೇರಿ, ಬಳ್ಳಾರಿ, ಕೋಲಾರ ಹಾಗೂ ಕೊಪ್ಪಳ ಜಿಲ್ಲೆಗಳ ಪ್ರತಿನಿಧಿಗಳು ತೀವ್ರ ಪೈಪೋಟಿ ನಡೆಸಿದರು. ಕೊನೆಗೆ ಕಲ್ಯಾಣ ಕರ್ನಾಟಕದ ಭಾಗಕ್ಕೆ ಅವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಗೆ ಬಹುಮತ ಬಂದಿದ್ದರಿಂದ ಪ್ರೊ. ನಲ್ಲೂರು ಅವರು ಗಂಗಾವತಿಯಲ್ಲಿ 78ನೆ ಸಾಹಿತ್ಯ ಸಮ್ಮೇಳನ ಎಂದು ಘೋಷಿಸಿದರು.
ಹಾವೇರಿಯಲ್ಲಿ ಈವರೆಗೆ ಒಮ್ಮೆಯೂ ಸಾಹಿತ್ಯ ಸಮ್ಮೇಳನಜರಗದ ಹಿನ್ನೆಲೆಯಲ್ಲಿ ಮುಂದಿನ ಸಾಹಿತ್ಯ ಸಮ್ಮೇಳನದ ಆತಿಥೇಯತ್ವ ತಮಗೆ ನೀಡುವಂತೆ ಜಿಲ್ಲೆಯ ಸಾಹಿತ್ಯಾಸಕ್ತರು ಆಗ್ರಹಿಸಿ ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಸಿದರು. ಆದರೆ 24 ಜನರಿದ್ದ ಸಭೆಯಲ್ಲಿ ಹಾವೇರಿ ಪರ ಕೇವಲ 8 ಮತಗಳು ಮಾತ್ರ ಬಿದ್ದವು. ಹೆಚ್ಚಿನ ಮತವನ್ನು ಕೊಪ್ಪಳ ಜಿಲ್ಲೆ ಪಡೆಯಿತು.
2006 ರಲ್ಲಿ ಬೀದರ್ ನಲ್ಲಿ ಸಮ್ಮೇಳನವಾದ ಮೇಲೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೇಳಿಕೊಳ್ಳುವಂಥ ಕನ್ನಡ ಪರ ಸಮ್ಮೇಳನ, ಸಮಾರಂಭಗಳು ನಡೆದಿಲ್ಲ. ಕರ್ನಾಟಕ ಏಕೀಕರಣದ ಹಬ್ಬ ಆಚರಣೆಗೂ ಇದು ವೇದಿಕೆ ಒದಗಿಸಲಿದೆ. 76 ನೇ ಸಾಹಿತ್ಯ ಸಮ್ಮೇಳನ ಗದಗಿನಲ್ಲಿ ನಡೆದಿದ್ದು ಹಾವೇರಿಗೆ ಕೊಂಚ ಮುಳುವಾಯಿತು. ಆದರೆ, ಹಾವೇರಿಯಲ್ಲಿ ಈವರೆಗೆ ಸಮ್ಮೇಳನ ನಡೆದಿಲ್ಲವಾದ್ದರಿಂದ ಈ ಬಾರಿ ಆಯ್ಕೆಯಾಗುವುದು ಖಚಿತ ಎಂದು ಅಲ್ಲಿನ ಮಂದಿ ನಂಬಿದ್ದರು. ಆದರೂ ಎಲ್ಲವೂ ರೆಡ್ಡಿ ಸೋದರರ ಪಾಳೆಯದ ಕಡೆಯ ತಾಣಗಳು ಎಂಬುದು ವಿಶೇಷ.
ಕೊಪ್ಪಳ ಸಾಹಿತ್ಯ ನಂಟು: 1992 ರಲ್ಲಿ ಸಿಂಪಿ ಲಿಂಗಣ್ಣ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ನಂತರ ಕೊಪ್ಪಳ ಜಿಲ್ಲಾಕೇಂದ್ರವಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳಸುವ ಪ್ರಮುಖ ವೇದಿಕೆಯಾಗಿ ಬೆಳೆಯಿತು.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications