ಯುವ ಸಂಭ್ರಮಕ್ಕೆ ಚಾಲನೆ ನೀಡಿದ ನಟಿ ಕಾರುಣ್ಯ ರಾಮ್
ಮೈಸೂರು, ಸೆಪ್ಟೆಂಬರ್ 12 : ಅಲ್ಲಿ ತುಂಬಿದ್ದ ಯುವಕರು, ನಟಿ ಕಾರುಣ್ಯ ರಾಮ್ ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದಂತೆ ಶಿಳ್ಳೆ- ಚಪ್ಪಾಳೆ ಮುಗಿಲು ಮುಟ್ಟಿತ್ತು. ಇದು ನಡೆದದ್ದು ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರಯುಕ್ತ ನಡೆಯುವ ಯುವ ಸಂಭ್ರಮದ ವೇದಿಕೆಯಲ್ಲಿ.
ಮಂಗಳವಾರ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಟಿ ಕಾರುಣ್ಯ ರಾಮ್ ಡೋಲು ಬಡಿಯುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮೈಸೂರು ಎಂದಾಕ್ಷಣ ಮೊಗದಲ್ಲಿ ಮಂದಹಾಸ ಮೂಡುತ್ತದೆ. ನಾನು ಕೂಡಾ ಮೇಲುಕೋಟೆಯವಳು. ವಜ್ರಕಾಯ ಚಿತ್ರದ ಚಿತ್ರೀಕರಣ ಕೂಡ ಇದೇ ನಗರದಲ್ಲಿಯೇ ಆಗಿದೆ. ಮೈಸೂರು ದಸರಾ ಅದ್ಭುತ. ಮೈಸೂರು ದಸರಾ ಕಾರ್ಯಕ್ರಮದ ಅಂಗವಾದ ಯುವಸಂಭ್ರಮಕ್ಕೆ ಚಾಲನೆ ನೀಡಿರುವುದು ನನಗೆ ಸಂತಸ ನೀಡಿದೆ' ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಇತಿಹಾಸ ಇದೆ. ಹಾಡುವ ಹಾಡು, ಹಾಕುವ ಹೆಜ್ಜೆಯಲ್ಲಿ ಪೂರ್ವಜರು ಹಾಕಿಕೊಟ್ಟ ಭದ್ರ ಬುನಾದಿ ಇದೆ. ಯುವಕರಿಗೆ ಭವಿಷ್ಯದ ದಾರಿ ತೋರಿಸುತ್ತದೆ. ಕಾದಂಬರಿ, ಕವಿತೆ ಇವೆಲ್ಲದರಲ್ಲೂ ಸಾಂಸ್ಕೃತಿಕತೆ ಇದೆ. ಸಾಂಸ್ಕೃತಿಕತೆ ಮೈಮರೆಯುವುದಲ್ಲ. ಕವಿತೆಯಲ್ಲಿ ಬದುಕನ್ನು ಬದಲಿಸುವ ಶಕ್ತಿ ಇದೆ. ಸುಭಾಷ್ ಚಂದ್ರಬೋಸ್, ಚಂದ್ರಶೇಖರ ಆಜಾದ್ ಅವರ ಮೇಲೆ ಪ್ರಭಾವ ಬೀರಿದ್ದು ಅದೇ. ಸಾಂಸ್ಕೃತಿಕ ಚಟುವಟಿಕೆ ವ್ಯಕ್ತಿತ್ವ ರೂಪಿಸಿಕೊಡಲು ಇರುವ ಒಂದು ಮಹತ್ವದ ಅಂಶ. ಸರಿಯಾದ ತತ್ವಾದರ್ಶ ಪಾಲಿಸಿದರೆ ಸಾಧನೆ ಮಾಡಬಹುದು' ಎಂದರು.

ಪ್ರತಿಭಟಿಸುವ ಮನಸ್ಸು ಮೂಡಲಿ
ಸಮಾಜದಲ್ಲಿ ಅತ್ಯಾಚಾರದಂತಹ ಹೇಯ ಕೃತ್ಯಗಳು ನಡೆದಾಗ ಅದನ್ನು ಪ್ರತಿಭಟಿಸುವ ಮನಸ್ಸು ಯುವಕರಲ್ಲಿ ಮೂಡಬೇಕು. ಸಂವಿಧಾನ ಬಯಸುವುದೇ ಅದೇ. ಬದಲಾವಣೆ ತರದ ಪೂಜೆ ಪೂಜೆಯಲ್ಲ. ಜಾನಪದ, ಗೀಗೀ ಪದ ಬೆಳೆದು ಬಂದಿದ್ದು ಅದೇ ಹಾದಿಯಲ್ಲಿ. ಸಂವಿಧಾನ ರೂಪುಗೊಂಡಿದ್ದು ಅದೇ ಉದ್ದೇಶದಿಂದ. ಏನೇ ಆದರೂ ಧೈರ್ಯ ಗೆಡಬೇಡಿ ಎಂದು ಚೆನ್ನಣ್ಣನವರ್ ಹೇಳಿದರು.

ಮನರಂಜಿಸಿದ ಹಾಡುಗಳು
ಶಿವನೇ ನಿನ್ನ ಆಟ ಬಲ್ಲವರ್ಯಾರಾರು, ಚೆಲ್ಲಿದರು ಮಲ್ಲಿಗೆಯ ಹಾಡುಗಳನ್ನು ಹಾಡಿ ಜನ ಮನ ರಂಜಿಸಿದರು. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ನೃತ್ಯದ ಮೂಲಕ ನವ ದುರ್ಗೆಯರಿಗೆ ನಮನ ಸಲ್ಲಿಸಿದರೆ, ಮಂಗಳೂರಿನ ಹೆಜ್ಜೆನಾದ ತಂಡದವರು ಶ್ರೀಗಣೇಶಾಯ ಏಕದಂತಾಯ ಧೀಮಹಿ ನೃತ್ಯ ಮಾಡುವ ಮೂಲಕ ಪ್ರಥಮ ವಂದಿತನಿಗೆ ನಮನ ಸಲ್ಲಿಸಿದರು. ಇದೇ ತಂಡದವರು ಬಾಜಿರಾವ್ ಮಸ್ತಾನಿ ಚಿತ್ರದ ಒಂದು ಗೀತೆಗೆ ನೃತ್ಯ ಮಾಡಿ ಎಲ್ಲರು ಕುಣಿದು ಕುಪ್ಪಳಿಸುವಂತೆ ಮಾಡಿದರು.

ನೃತ್ಯ ವೈಭವ
ಹೆಜ್ಜೆನಾದ ತಂಡದವರು ಲಾವಣಿ ನೃತ್ಯ, ಲೈಲಾ ಹೂ ಮೈ ಲೈಲಾ ಗೀತೆಗೆ ನೃತ್ಯ ಪ್ರಸ್ತುತಪಡಿಸಿದರು. ಬನ್ನೂರು ಸಂತೇಮಾಳ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ತಮ್ಮನೃತ್ಯದ ಮೂಲಕ ಸ್ವಚ್ಛಭಾರತದ ಕುರಿತು ಅರಿವು ಮೂಡಿಸಿದರಲ್ಲದೇ ಸ್ವಚ್ಛತೆಗೆ ಪ್ರತಿಯೊಬ್ಬರೂ ಕೈಜೋಡಿಸಿ ಎಂಬ ಜಾಗೃತಿ ಮೂಡಿಸಿದರು.

ನಮಗಿಲ್ಲ ಸಾಟಿ!
ಯುವ ಸಭ್ರಮದಲ್ಲಿ ಪ್ರತಿಯೊಬ್ಬರೂ ಸಂಭ್ರಮದಿಂದ ಪಾಲ್ಗೊಂಡು ಒಬ್ಬರನ್ನೊಬ್ಬರು ಮೀರಿಸುವಂತೆ ಪ್ರದರ್ಶನ ನೀಡಿ ನಮಗೆ ಬೇರಾರೂ ಸಾಟಿಯಿಲ್ಲ ಎಂಬುದನ್ನು ನಿರೂಪಿಸಿದರು.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications