ಬಜೆಟ್ ಅಂದರೆ ಏನು, ಜನಸಾಮಾನ್ಯರ ನಿರೀಕ್ಷೆ-ಕುತೂಹಲಗಳೇನು?
ಬೆಂಗಳೂರು, ಫೆಬ್ರವರಿ 1: ಕೇಂದ್ರ ಬಜೆಟ್ ನ ಕಡೆಗೆ ಇಡೀ ದೇಶವೇ ನಿರೀಕ್ಷೆ ಕಣ್ಣು ನೆಟ್ಟು ಕೂತಿದೆ. ಇಂಥ ಸನ್ನಿವೇಶದಲ್ಲಿ ಬಜೆಟ್ ಹೀಗೇ ಅಲ್ಲವೇ ಎಂದು ತಿಳಿಯುವ ಪ್ರಯತ್ನ ಇದು. ದೇಶವೊಂದರ ಅಂದಾಜು ಆದಾಯ ಮತ್ತು ಖರ್ಚು-ವೆಚ್ಚವನ್ನು ಜನರ ಮುಂದಿಡುವುದೇ ಬಜೆಟ್. ನೆನಪಿರಲಿ, ಈ ಎಲ್ಲ ಅಂಕಿಗಳು ಅಂದಾಜು ಮಾಡಿರುವಂಥವು.[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]
ಉದಾಹರಣೆಗೆ ಒಂದು ಮನೆ ಅಂದುಕೊಳ್ಳೋಣ. ಆ ಮನೆಯ ಆದಾಯ ಮೂಲಗಳು ಇರುತ್ತವೆ. ಒಬ್ಬರು 10, ಮತ್ತೊಬ್ಬರು 30, ಇನ್ನೊಬ್ಬರು 50 ಸಾವಿರ ದುಡಿಯಬಹುದು. ಒಂದಷ್ಟು ಹಣ ಠೇವಣಿ ಇಟ್ಟಿರಬಹುದು. ಅದರಿಂದ ಒಂದಿಷ್ಟು ಬಡ್ಡಿ ಬರುತ್ತಿರಬಹುದು. ಎಲ್ಲ ಸೇರಿ ಆ ವರ್ಷಕ್ಕೆ ಇಷ್ಟು ಎಂಬುದು ಆ ಮನೆಯ ಒಟ್ಟು ಆದಾಯ.[ಜೇಟ್ಲಿ ಬಜೆಟ್ 2017 : ತೆರಿಗೆದಾರರ 10 ನಿರೀಕ್ಷೆಗಳು]

ಅದರಲ್ಲಿ ಮನೆಯ ತಿಂಗಳಿನ ದಿನಸಿ, ವಿದ್ಯುತ್ ಬಿಲ್, ಮಕ್ಕಳ ಶಿಕ್ಷಣ, ಮನೆ ಹಿರಿಯರ ಔಷಧ ಖರ್ಚು, ಮನೆಯ ಬಾಡಿಗೆ, ಚೀಟಿ ಹಣ, ಇನ್ಷೂರೆನ್ಸ್, ವಾಹನ ಸಾಲದ ಕಂತು...ಹೀಗೆ ನಾನಾ ಖರ್ಚುಗಳಿಗೆ, ಇನ್ವೆಸ್ಟ್ ಮೆಂಟ್ ಗಳಿಗೆ, ಉಳಿತಾಯಕ್ಕೆ ಇಷ್ಟಿಷ್ಟು ಎಂದು ಅಂದುಕೊಂಡಿರುತ್ತಾರೆ.[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]
ಅದೇ ರೀತಿ ಸರಕಾರ ಕೂಡ. ತೆರಿಗೆಗಳು, ಸರಕಾರಿ ಕಂಪನಿಗಳಿಂದ ಬಂದ ಲಾಭ, ಡಿವಿಡೆಂಡ್ ಹೀಗೆ ನಾನಾ ಮೂಲಗಳಿಂದ ಬರುವ ಹಣವನ್ನು ಆದಾಯ ಎಂದು ಪರಿಗಣಿಸುತ್ತದೆ. ಇನ್ನು ಅದರ ಖರ್ಚು ಹೀಗೆ ಮಾಡುತ್ತೇವೆ ಎಂಬ ಲೆಕ್ಕಾಚಾರವನ್ನು ಮುಂದಿಡುತ್ತವೆ. ಈ ವರೆಗೆ ಖರ್ಚನ್ನು ಯೋಜನಾ ವೆಚ್ಚ ಮತ್ತು ಯೋಜನೇತರ ವೆಚ್ಚ ಎಂದು ವರ್ಗೀಕರಣ ಮಾಡಲಾಗುತ್ತಿತ್ತು. ಈ ವರ್ಷದಿಂದ ಆದಾಯ ವೆಚ್ಚ, ಬಂಡವಾಳ ವೆಚ್ಚ ಎಂದು ಕರೆಯಲಾಗುತ್ತದೆ.[ಬಜೆಟ್ ಅಧಿವೇಶನ ಆರಂಭ, ಸದನ ಉದ್ದೇಶಿಸಿ ಪ್ರಣಬ್ ಭಾಷಣ]
ಅಂದರೆ, ಕೆಲವು ಖರ್ಚುಗಳು ಬಂಡವಾಳವಾಗಿ ಮಾರ್ಪಡುತ್ತದೆ. ಆದರೆ ಕೆಲವೊಮ್ಮೆ ನಿರೀಕ್ಷಿಸಿದ ಆದಾಯ ಬರದೇ ಇರಬಹುದು. ಉದಾಹರಣೆಗೆ ಗುಜರಾತ್ ನಲ್ಲಾದ ಭೂಕಂಪ. ದೇಶದ ಜಿಡಿಪಿಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದ ಆ ರಾಜ್ಯದಲ್ಲಾದ ಅನಾಹುತ ದೇಶದ ಮೇಲೆ ಪರಿಣಾಮ ಬೀರಿತ್ತು. ಅದೇ ರೀತಿ ಸಂಬಳ ಹೆಚ್ಚಳ ಮಾಡಿದ್ದರಿಂದ ಸರಕಾರಕ್ಕೆ ಇಷ್ಟು ಹೊರೆ ಎಂಬ ಸುದ್ದಿ ಗಮನಿಸಿರುತ್ತೀರಾ.[ಅಪನಗದೀಕರಣ ಪರಿಣಾಮ ಜಿಡಿಪಿ ಪಾರದರ್ಶಕ, ದೈತ್ಯ: ಜೇಟ್ಲಿ]
ಅದರರ್ಥ ಇಷ್ಟೇ. ಈ ವೆಚ್ಚ ಬಜೆಟ್ ಮಾಡುವ ವೇಳೆಯಲ್ಲಿ ಸರಕಾರದ ಅಂದಾಜು ಪಟ್ಟಿಯಲ್ಲಿ ಇರಲಿಲ್ಲ. ಅದೀಗ ಹೊರೆಯಾಗುತ್ತದೆ. ಅದೇ ರೀತಿ ಯಾವುದೇ ಅನಿರೀಕ್ಷಿತ ಆದಾಯ ಸರಕಾರಕ್ಕೆ ಬರಬಹುದು. ಅದು ಕೂಡ ಬಜೆಟ್ ವೇಳೆ ನಿರೀಕ್ಷೆ ಮಾಡಿರದಿದ್ದರೆ ಅದು ಹೆಚ್ಚುವರಿ ಆದಾಯ. ಅಂದಹಾಗೆ ಬಜೆಟ್ ಒಂದೇ ವರ್ಷದ ಅವಧಿಯದು. ಆ ವೇಳೆ ಮುಂದಿನ ವರ್ಷಗಳಲ್ಲಿ ಇಂತಿಷ್ಟು ಹಣ ಮೀಸಲಿರಿಸುವ ಉದ್ದೇಶ ಇದೆ ಎಂದಷ್ಟೇ ಹೇಳಲು ಸಾಧ್ಯ.[ಆರ್ಥಿಕ ಸಮೀಕ್ಷೆ: ವ್ಯಾಪಾರ-ಜಿಡಿಪಿ ಪ್ರಮಾಣ, ಚೀನಾವನ್ನು ಹಿಂದಿಕ್ಕಿದ ಭಾರತ]
ಆದಾಯ ತೆರಿಗೆ ಮಿತಿ ಹೆಚ್ಚಳ ಆಗಬಹುದೇ? ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಬೆಲೆ ಮೇಲೆ ಬಜೆಟ್ ಪ್ರಭಾವ ಏನು? ಗೃಹ-ವಾಹನ ಸಾಲ ಬಡ್ಡಿ ದರ ಇಳಿಕೆ ಅಗಬಹುದೇ? ಗೃಹ ಬಳಕೆ ವಸ್ತುಗಳ ಬೆಲೆ ಇಳಿಯುತ್ತದೋ, ಏರಿಕೆ ಆಗುತ್ತದೋ? ಕೃಷಿಗೆ ಸಂಬಂಧಿಸಿದ ಹಾಗೆ ಮಹತ್ವದ ಆದೇಶ ಇದೆಯಾ? ಶಿಕ್ಷಣ, ವೈದ್ಯಕೀಯ ವೆಚ್ಚದಲ್ಲಿ ಇಳಿಕೆ ಆಗಬಹುದೇ? ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಆಗುವಂಥ ಯೋಜನೆ ಬರುತ್ತದಾ? ನಮ್ಮ ಪ್ರಶ್ನೆಗಳು ಇಂಥವೇ ಅಲ್ಲವೆ?[ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು]
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications