ಮೈರಾ ಮೆಡಿಸಿನ್ಸ್ ವಿರುದ್ಧ ದೂರು ದಾಖಲಿಸಿದ ಎನ್ ಜಿಒ
ಬೆಂಗಳೂರಿನ ಇ-ಫಾರ್ಮಸಿ ಆಪ್ ಕಂಪನಿ ಮೈರಾ ಮೆಡಿಸಿನ್ಸ್ ವಿರುದ್ಧ ದೆಹಲಿ ಮೂಲದ ಸ್ವದೇಶ್ ಸೇವಾ ಸಂಸ್ಥ ಎಂಬ ಎನ್ಜಿಒ ದೂರು ನೀಡಿದೆ.
ಬೆಂಗಳೂರು, ಜನವರಿ ೨೦: ಬೆಂಗಳೂರಿನ ಇ-ಫಾರ್ಮಸಿ ಆಪ್ ಕಂಪನಿ ಮೈರಾ ಮೆಡಿಸಿನ್ಸ್ ವಿರುದ್ಧ ದೆಹಲಿ ಮೂಲದ ಸ್ವದೇಶ್ ಸೇವಾ ಸಂಸ್ಥ ಎಂಬ ಎನ್ಜಿಒ ದೂರು ನೀಡಿದೆ. ಶೆಡ್ಯೂಲ್ ಎಚ್ ಮತ್ತು ನಿರ್ಬಂಧಿತ ಔಷಧಗಳನ್ನು ಮೌಲಿಕ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡುತ್ತಿರುವ ಆರೋಪವನ್ನು ಹೊರೆಸಿ ದೂರು ನೀಡಲಾಗಿದೆ. ಕರ್ನಾಟಕದ ಔಷಧ ನಿಯಂತ್ರಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಸ್ವದೇಶ್ ಸೇವಾ ಸಂಸ್ಥಾದ ಪ್ರತಿನಿಧಿ ರಾಹುಲ್ ಸಿಂಗ್, ಕರ್ನಾಟಕದ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ನಿರ್ಬಂಧಿತ ಹಾಗೂ ಶೆಡ್ಯೂಲ್ ಎಚ್ ವಿಭಾಗಕ್ಕೆ ಸೇರಿದ ಔಷಧಗಳನ್ನು ಮಾರಾಟ ಮಾಡುತ್ತಿರುವುದರ ವಿರುದ್ಧ ದೂರು ನೀಡಿದ್ದರು.
ಕಾನೂನು ಮತ್ತು ಎಫ್ಡಿಎ ನಿಯಮಗಳ ಪ್ರಕಾರ ಈ ಔಷಧಗಳನ್ನು ನೋಂದಾಯಿತ ವೈದ್ಯರ ಮೌಲಿಕ ಪ್ರಿಸ್ಕ್ರಿಪ್ಷನ್ ಇಲ್ಲದೆ ನೇರವಾಗಿ ರೋಗಿಗಳಿಗೆ ಮಾರಾಟ ಮಾಡುವಂತಿಲ್ಲ.[ಔಷಧಿ ನಿಷೇಧಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೆಹಲಿ ಹೈಕೋರ್ಟ್ ತಡೆ]

ಮೈರಾ ಮೆಡಿಸಿನ್ಸ್ ಸಂಸ್ಥೆಯನ್ನು ಸಾಕ್ಷ್ಯದೊಂದಿಗೆ ಸಿಲುಕಿಸಲು ಎನ್ಜಿಒ ಹಲವು ಆರ್ಡರ್ ಗಳನ್ನು ಆಪ್ ಮೂಲಕ ನೀಡಿತು. ನಿರ್ಬಂಧಿತ ಔಷಧಗಳಾದ ಕೊರೆಕ್ಸ್, ಶೆಡ್ಯೂಲ್ ಎಚ್ ಔಷಧಗಳಾದ ಮೊಕ್ಸಿಕೈಂಡ್ ಸಿವಿ 625ಎಂಜಿ, ಜಲ್ರಾ ಎಂ 50/500ಎಂಜಿ, ಡಾವೊನಿಲ್ 5ಎಂಜಿ ಮತ್ತು ನ್ಯೂರೊಕೈಂಡ್ 500ಎಂಸಿಜಿ ಒಳಗೊಂಡು ಹಲವು ಔಷಧಗಳನ್ನು ವೈದ್ಯರ ಮಾರ್ಗದರ್ಶನವಿಲ್ಲದೆ ಪೂರೈಸಿತು.
ಔಷಧಗಳು ಮತ್ತು ಪ್ರಸಾಧನಗಳ ಕಾಯ್ದೆ 1940, ಔಷಧಗಳು ಮತ್ತು ಪ್ರಸಾಧನಗಳ ನಿಯಮಗಳು 1945 ಮತ್ತು ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೊಟ್ರೊಪಿಕ್ ಸಬ್ಸ್ಟೆನ್ಸಸ್ ಆಕ್ಟ್, 1985ರ ಅನ್ವಯ ಅಂತಹ ನಿರ್ಬಂಧಿತ ಔಷಧಗಳು ಮತ್ತು ಶೆಡ್ಯೂಲ್ ಎಚ್ ಔಷಧಗಳನ್ನು ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications