ಮಳೆಯಿಂದಾಗಿ ಬಯಲಾಯ್ತೇ 'ನಮ್ಮ ಮೆಟ್ರೋ' ಕಾಮಗಾರಿ ಸಾಚಾತನ?
ಮಳೆಯಿಂದಾಗಿ ಸೋರುತ್ತಿರುವ ನಮ್ಮ ಮೆಟ್ರೋ ನಿಲ್ದಾಣಗಳು. ಮೆಟ್ರೋ ಕಾಮಗಾರಿಯನ್ನು ಪ್ರಶ್ನಿಸುತ್ತಿವೆ ಈ ವಾಟರ್ ಲೀಕೇಜ್.
ಬೆಂಗಳೂರು, ಆಗಸ್ಟ್ 28: 'ನಮ್ಮ ಮೆಟ್ರೋ' ಮಾರ್ಗಗಳು ಉದ್ಘಾಟನೆಯಾದಾಗ ಬೆಂಗಳೂರಿಗರಾದ ನಾವು ಹಿರಿಹಿರಿ ಹಿಗ್ಗಿದೆವು. ವಿಶ್ವಮಟ್ಟದ ಸಂಪರ್ಕ ಸೌಲಭ್ಯವೊಂದು ನಮ್ಮಲ್ಲೂ ತಲೆಯಿತ್ತೆಂದು ಬೀಗಿದೆವು. ಮೆಟ್ರೋ ರೈಲಿನಲ್ಲಿ ಸಂಚರಿಸಿ, ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದೆವು. ಆದರೆ, ಈ ಎಲ್ಲಾ ಖುಷಿ, ಹಿರಿಮೆ, ಸಂಭ್ರಮಗಳು ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಅಗಾಧ ಮಳೆಗೆ ಕೊಚ್ಚಿಕೊಂಡು ಹೋಗಿವೆ.
Recommended Video

ಹೌದು. ನಾವು ವಿಶ್ವಮಟ್ಟದ ಸೌಲಭ್ಯವೆಂದು ಕಲ್ಪಿಸಿಕೊಂಡಿದ್ದ ನಮ್ಮ ಮೆಟ್ರೋ ನಿರ್ಮಾಣದಲ್ಲಿನ ಲೋಪ ದೋಷಗಳು ಈಗ ಕಣ್ಣಿಗೆ ರಾಚುತ್ತಿವೆ. ಅಗಾಧ ಮಳೆಯಿಂದಾಗಿ, ಹಲವಾರು ಮೆಟ್ರೋ ನಿಲ್ದಾಣಗಳಲ್ಲಿರುವ ಮೇಲ್ಛಾವಣೆಗಳು ಸೋರುತ್ತಿವೆ. ಫ್ಲಾಟ್ ಫಾರಂನೊಳಗೆ ನೀರು ನುಗುತ್ತಿವೆ. ನೆಲ ಮಟ್ಟದಿಂದ ಕೆಳಗಿರುವ ಮೆಟ್ರೋ ನಿಲ್ದಾಣಗಳಿಗೆ ಮಳೆ ನೀರು ನುಗ್ಗಿ ನಿಲ್ದಾಣಗಳಲ್ಲಿ ನೀರು ನಿಲ್ಲುವಂತಾಗುತ್ತಿದೆ.

ಇದು, ನಮ್ಮ ಮೆಟ್ರೋ ಬಗ್ಗೆ ಜನರಿಗೆ ಭ್ರಮ ನಿರಸನವಾಗುವಂತೆ ಮಾಡಿದೆ. ಎಂ.ಜಿ. ರಸ್ತೆ ನಿಲ್ದಾಣ, ಕಬ್ಬನ್ ಪಾರ್ಕ್ ನಿಲ್ದಾಣ ಸೇರಿದಂತೆ ಹಲವರು ಮೆಟ್ರೋ ಸ್ಟೇಷನ್ ಗಳ ಮೇಲ್ಛಾವಣೆ ಸೋರುತ್ತಿವೆ ಅಥವಾ ನಿಲ್ದಾಣದೊಳಗ್ಗೆ ನೀರು ಬಂದು ನಿಲ್ಲುತ್ತಿದೆ. ಟಿಕೆಟ್ ಕೌಂಟರ್ ಗಳು, ಫ್ಲಾಟ್ ಫಾರಂಗಳು - ಹೀಗೆ ಎಲ್ಲೆಲ್ಲೂ ನೀರು ಸೋರುತ್ತಿರುವುದು ಪ್ರಯಾಣಿಕರಲ್ಲಿ ಅಸಮಾಧಾನ ತಂದಿದೆ.
ಅಷ್ಟೇ ಅಲ್ಲ, ನಮ್ಮ ಮೆಟ್ರೋದ ಪ್ರಮುಖಾತಿ ಪ್ರಮುಖ ನಿಲ್ದಾಣವಾದ ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಕೂಡ ಇಂಥ ಲೋಪದೋಷಗಳಿಂದ ಹೊರತಾಗಿಲ್ಲ. ಹಸಿರು ಹಾಗೂ ನೇರಳೆ ಮಾರ್ಗಗಳಿಗೆ ಜಂಕ್ಷನ್ ಇದಾಗಿರುವ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ 3ನೇ ಹಾಗೂ 4ನೇ ಫ್ಲಾಟ್ ಫಾರಂ ನ ಮೇಲ್ಛಾವಣೆಯು ಈಗಾಗಲೇ ಲೀಕ್ ಆಗುತ್ತಿದೆ.
ಸುಮಾರು 7.5 ಎಕರೆ ವಿಸ್ತೀರ್ಣದಲ್ಲಿ 500 ಕೋಟಿ ರು. ವೆಚ್ಛದಲ್ಲಿ ಕಟ್ಟಲಾಗಿರುವ ಈ ನಿಲ್ದಾಣವು 2016ರ ಏಪ್ರಿಲ್ ನಲ್ಲಿ ಭಾಗಶಃ ಉದ್ಘಾಟನೆಗೊಂಡಿತ್ತು. ಇದೇ ಜೂನ್ ತಿಂಗಳಲ್ಲಿ ಸಂಪೂರ್ಣವಾಗಿ ಜನಸೇವೆಗೆ ಲಭ್ಯವಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಜನರಿಗೆ ತೆರೆದುಕೊಂಡ ನಂತರದ ಕೆಲವೇ ತಿಂಗಳುಗಳಲ್ಲೇ ಇಂಥ ದುಸ್ಥಿಗೆ ಬಂದಿರುವುದು ಶೋಚನೀಯ ಎಂದು ಮೆಟ್ರೋ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ.
-
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ











Click it and Unblock the Notifications