ಚಿತ್ರಸುದ್ದಿ: ಕಚೇರಿಗೆ ಲೇಟಾಗಿ ಬಂದ್ರೆ ಕಡ್ಡಾಯ ರಜೆ!
ಬೆಂಗಳೂರು, ಜು.1: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಿಯಾಮಾವಳಿಗಳು ಒಂದೊಂದಾಗಿ ಜಾರಿಗೊಳ್ಳುತ್ತಿದ್ದು, ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಅವರು ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.
ಸೋಮವಾರ ಬೆಳಗ್ಗೆ 9.15ಕ್ಕೆ ಸರಿಯಾಗಿ ಕಚೇರಿಗೆ ಸಚಿವ ಪ್ರಕಾಶ್ ಹಾಜರಾದಾಗ ಹೆಚ್ಚಿನ ಕುರ್ಚಿಗಳು ಖಾಲಿಯಾಗಿದ್ದವು ಇದ್ದ ಕೆಲವು ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಸಚಿವರನ್ನು ನೋಡತೊಡಗಿದ್ದರು. ಕಚೇರಿಯ ಹಾಜರಾತಿ ಪುಸ್ತಕ ತರೆಸಿಕೊಂಡು ನೋಡಿದ ಸಚಿವರು ತಕ್ಷಣವೇ ಕಚೇರಿಗೆ ತಡವಾಗಿ ಆಗಮಿಸಿದ ಅಧಿಕಾರಿಗಳಿಗೆ ಬುಲಾವ್ ಕಳಿಸಿದರು.
ಸುಮಾರು 200ಕ್ಕೂ ಅಧಿಕ ಅಧಿಕಾರಿಗಳು ಸಾಲಾಗಿ ನಿಂತರು ಅವರಲ್ಲಿ 40ಕ್ಕೂ ಅಧಿಕ ಅಧಿಕಾರಿಗಳನ್ನು ಸಚಿವ ಪ್ರಕಾಶ್ ಅವರು ಮನೆಗೆ ಕಳಿಸಿದರು ಎಂದು ತಿಳಿದು ಬಂದಿದೆ. ಸಚಿವ ಪ್ರಕಾಶ್ ಅವರ ದಿಢೀರ್ ಭೇಟಿ ಚಿತ್ರ ಹಾಗೂ ಇನ್ನಿತರ ಸುದ್ದಿಗಳು ಚಿತ್ರಗಳಲ್ಲಿ ಮುಂದೆ ನೋಡಿ...

ಕಚೇರಿಗೆ ಲೇಟಾಗಿ ಬಂದ್ರೆ ಕಡ್ಡಾಯ ರಜೆ!
ಪ್ರಧಾನಿ ನರೇಂದ್ರ ಮೋದಿ ಅವರ ನಿಯಾಮಾವಳಿಗಳು ಒಂದೊಂದಾಗಿ ಜಾರಿಗೊಳ್ಳುತ್ತಿದ್ದು, ಕೇಂದ್ರ ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಅವರು ತಮ್ಮ ಸಚಿವಾಲಯದ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ.

ಜಾಮಾ ಮಸೀದಿಯಲ್ಲಿನ ನೋಟ
ನವದೆಹಲಿಯ ಜಾಮಾ ಮಸೀದಿ ಮುಂದೆ ಸಿಕ್ಕ ಪ್ರಥಮ ದಿನ ರೋಜಾ ನಂತರದ ಸಂಜೆ ದೃಶ್ಯ PTI Photo by Manvender Vashist

ನಾಗಪುರದಲ್ಲಿ ಪೆಟ್ರೋಲ್ ಬಂಕ್ ಮುಂದೆ
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಸುದ್ದಿ ತಿಳಿಯುತ್ತಿದ್ದಂತೆ ನಾಗಪುರದಲ್ಲಿ ಪೆಟ್ರೋಲ್ ಬಂಕ್ ಮುಂದೆ ಜಮಾಯಿಸಿದ ಜನಸ್ತೋಮ

ಪಾರ್ಸಿ ಮುಖಂಡರೊಡನೆ ಮೋದಿ ಅಪ್ಪುಗೆ
ನವದೆಹಲಿ: ಪಾರ್ಸಿ ಮುಖಂಡ ದಸ್ತೂರ್ ಖುರ್ಷದ್ ಕೈಕೊಬಾದ್ ಅವರಿಗೆ ಆತ್ಮೀಯ ಅಪ್ಪುಗೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
ಲಕ್ನೊದಲ್ಲಿ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ನಡೆಸಿದ್ದು ಹೀಗೆ

ಜರ್ಮನ್ನಿನ ಲಿಸಿಕಿ ಗೆಲುವಿನ ನಗೆ
ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆರ್ಬಿಯಾದ ಅನಾ ಇವನೊವಿಕ್ ಅವರನ್ನು ಸೋಲಿಸಿದ ಜರ್ಮನ್ನಿನ ಲಿಸಿಕಿ ಗೆಲುವಿನ ನಗೆ

ಅಹಮದಾಬಾದಿನಲ್ಲಿ ಸ್ಮೃತಿ ಪೂಜೆ
ಅಹಮದಾಬಾದಿನಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಜಗನ್ನಾಥ ಯಾತ್ರೆ ಅಂಗವಾಗಿ ಪೂಜೆ ಸಲ್ಲಿಸಿದರು.

ಗೃಹ ಸಚಿವರು ಸ್ಮೈಲ್ ಪ್ಲೀಸ್ ಎಂದಾಗ
ಲಕ್ನೋದಲ್ಲಿನ ಶಾಲೆಯೊಂದರ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಗೃಹ ಸಚಿವರು ಕೆಮೆರಾ ಹಿಡಿದು ಸ್ಮೈಲ್ ಪ್ಲೀಸ್ ಎಂದ ಕ್ಷಣ.PTI Photo by Nand Kumar
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications