South Western Railway: ಈ ಮಾರ್ಗದಲ್ಲಿ ಫೆಬ್ರವರಿ 11ರಂದು ಎಕ್ಸ್‌ಪ್ರೆಸ್‌ ರೈಲು ಭಾಗಷಃ ರದ್ದು-ಎಲ್ಲಿ ಹಾಗೂ ಕಾರಣ ತಿಳಿಯಿರಿ

ಹುಬ್ಬಳ್ಳಿ, ಫೆಬ್ರವರಿ, 06: ಹಳಿ ಕಾಮಗಾರಿಗಳು ಸೇರಿದಂತೆ ಇನ್ನಿತರೆ ಕಾಮಗಾರಿ ನಡೆಯುವಂತಹ ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದು ಮಾಡಲಾಗುತ್ತದೆ. ಹಾಗೆಯೇ ಇದೀಗ ದಾವಣಗೆರೆ ಜಿಲ್ಲೆಯ ಅಮರಾವತಿ ತೊಳಹುಣಸೆ ಯಾರ್ಡ್‌ ರೈಲು ನಿಲ್ದಾಣಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಫೆಬ್ರವರಿ 11ರಂದು ಈ ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದು ಮಾಡಲಾಗುತ್ತದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಹಳಿ ನಿರ್ವಹಣಾ ಕಾಮಗಾರಿ ಹಿನ್ನೆಲೆ ಫೆಬ್ರವರಿ 11ರಂದು ಹುಬ್ಬಳ್ಳಿ-ಚಿತ್ರದುರ್ಗ ಡೈಲಿ ಎಕ್ಸ್‌ಪ್ರೆಸ್‌ ರೈಲಿನ (17347) ಹರಿಹರ ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವಿನ ಸಂಚಾರ ರದ್ದು ಮಾಡಲಾಗಿದೆ. ಅದೇ ದಿನ ಹೊರಡುವ ಚಿತ್ರದುರ್ಗ-ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್‌ ರೈಲಿನ (17348) ಚಿತ್ರದುರ್ಗ ಹಾಗೂ ಹರಿಹರ ನಡುವಿನ ಸಂಚಾರವನ್ನು ರದ್ದು ಮಾಡಲಾಗಿದೆ.

South Western Railway: Express train cancelation on February 11 on these route, where?

ಇನ್ನು ಫೆಬ್ರವರಿ 14 ಮತ್ತು 18ರಂದು ಹೊಸಪೇಟೆ ನಿಲ್ದಾಣದಿಂದ ಹೊರಡುವ ಹೊಸಪೇಟೆ-ಹರಿಹರ ಡೈಲಿ ಪ್ಯಾಸೆಂಜರ್‌ ಸ್ಪೆಷಲ್‌ ರೈಲು (06245) ತೆಲಗಿ, ಅಮರಾವತಿ ಕಾಲೊನಿ, ಹರಿಹರ ಮಾರ್ಗದ ಮೂಲಕ ಸಂಚಾರ ಮಾಡಲಿದೆ ಎಂದುv ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮಾರ್ಗದಲ್ಲಿ ಪ್ರತಿ ದಿನವೂ ವಂದೆ ಭಾರತ್‌ ರೈಲು ಸಂಚಾರ

ಮೈಸೂರು ಮತ್ತು ಚೆನ್ನೈ ನಡುವೆ ಬೆಂಗಳೂರು ಮೂಲಕ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾರ್ಚ್ 2024ರ ಅಂತ್ಯದವರೆಗೆ ವಾರದ ಪ್ರತಿ ದಿನವೂ ಕಾರ್ಯನಿರ್ವಹಿಸಲಿದೆ. ಪ್ರಸ್ತುತ, ಈ ರೈಲು ಬುಧವಾರ ಹೊರತುಪಡಿಸಿ ವಾರದಲ್ಲಿ 6 ದಿನ ಕಾರ್ಯನಿರ್ವಹಿಸುತ್ತದೆ.

ಈ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನವೆಂಬರ್ 2022ರಲ್ಲಿ ಪ್ರಾರಂಭಿಸಲಾಯಿತು. ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಮತ್ತು ಮೈಸೂರು ಸಿಟಿ ಜಂಕ್ಷನ್ ಅನ್ನು ಸಂಪರ್ಕಿಸುವ ವಿಶೇಷ ರೈಲಿನ ಕಾರ್ಯಾಚರಣೆಯನ್ನು ಮಾರ್ಚ್ 27ರವರೆಗೆ ವಾರದ ಎಲ್ಲಾ ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ನೈಋತ್ಯ ರೈಲ್ವೆ ಸೂಚಿಸಿದೆ.

ರೈಲು ಸಂಖ್ಯೆ 06037 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್, ಫೆಬ್ರವರಿ 7ರಿಂದ ಮಾರ್ಚ್ 27, 2024 ರವರೆಗೆ ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿಗ ಸಂಚರಿಸಲಿದೆ. ಅದೇ ರೀತಿ, ರೈಲು ಸಂಖ್ಯೆ 06038 ಮೈಸೂರಿನಿಂದ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್, ಫೆಬ್ರವರಿ 7ರಿಂದ ಮಾರ್ಚ್‌ 27, 2024ರವರೆಗೆ ಎಲ್ಲಾ ಬುಧವಾರದಂದು ಚಲಿಸುತ್ತದೆ. ಇದಕ್ಕೂ ಮೊದಲು, ಬುಧವಾರದಂದು ಎರಡೂ ಕಡೆಯಿಂದ ಪ್ರಯಾಣವು ಜನವರಿಯಲ್ಲಿ ಕೊನೆಗೊಳ್ಳಬೇಕಿತ್ತು.

ರೈಲು ಮೈಸೂರು ಮತ್ತು ಚೆನ್ನೈ ನಡುವೆ 500 ಕಿಮೀ ದೂರವನ್ನು 6 ಗಂಟೆ 25 ನಿಮಿಷಗಳಲ್ಲಿ ಕ್ರಮಿಸುತ್ತದೆ. ರೈಲು ಸಂಖ್ಯೆ 06037 ಚೆನ್ನೈನಿಂದ ಮೈಸೂರಿಗೆ 5:50 ಗಂಟೆಗೆ ಚೆನ್ನೈನಿಂದ ಹೊರಟು 12:20 ಗಂಟೆಗೆ ಮೈಸೂರಿಗೆ ತಲುಪುತ್ತದೆ. ಈ ಮಾರ್ಗದಲ್ಲಿ, ರೈಲು ಕಟ್ಪಾಡಿ (ಆಗಮನ 07:13 ಗಂಟೆ ಮತ್ತು ನಿರ್ಗಮನ 07.15 ಗಂಟೆ) ಮತ್ತು ಕೆಎಸ್ಆರ್ ಬೆಂಗಳೂರಿನಲ್ಲಿ (ಆಗಮನ 10:10 ಗಂಟೆ ಮತ್ತು ನಿರ್ಗಮನ 10.15 ಗಂಟೆ) ವಾಣಿಜ್ಯ ನಿಲುಗಡೆಗಳನ್ನು ಹೊಂದಿದೆ.

ರೈಲು ಸಂಖ್ಯೆ 06038 ಮೈಸೂರಿನಿಂದ ಚೆನ್ನೈಗೆ 13:05 ಗಂಟೆಗೆ ಮೈಸೂರಿನಿಂದ ಹೊರಟು 19:20 ಗಂಟೆಗೆ ಚೆನ್ನೈ ತಲುಪುತ್ತದೆ. ಮಾರ್ಗದಲ್ಲಿ, ರೈಲು KSR ಬೆಂಗಳೂರಿನಲ್ಲಿ (14:50 ಗಂಟೆಗೆ ಆಗಮನ ಮತ್ತು 14.55 ಗಂಟೆಗೆ ನಿರ್ಗಮನ) ಮತ್ತು ಕಟ್ಪಾಡಿ (17.33 ಗಂಟೆಗೆ ಆಗಮನ ಮತ್ತು 17.35 ಗಂಟೆಗೆ ನಿರ್ಗಮನ) ವಾಣಿಜ್ಯ ನಿಲುಗಡೆಗಳನ್ನು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ನಂತರ, ರೈಲು ಯಶಸ್ವಿಯಾಗಿ 100 ಪ್ರತಿಶತ ಆಕ್ಯುಪೆನ್ಸಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆದರೂ, ನೈಋತ್ಯ ರೈಲ್ವೆ (SWR) ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಗಂಟೆಗೆ 200 ಕಿಲೋ ಮೀಟರ್‌ ವೇಗದಲ್ಲಿ ಚಲಿಸುವ ಸೆಮಿ ಹೈಸ್ಪೀಡ್ ರೈಲುಗಳ ಕಾರ್ಯಾಚರಣೆಯ ಅನುಕೂಲಗಳು ಮತ್ತು ಸವಾಲುಗಳನ್ನು ಪರಿಶೀಲಿಸುತ್ತಿದೆ ಎಂದು ನೈಋತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಆರ್.ಎನ್.ಸಿಂಗ್ ಹೇಳಿದರು.

ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಕಾರ್ಯಗತಗೊಳಿಸಲು ಪರಿಗಣನೆ ಇದೆ ಎಂದು ಅವರು ಹೇಳಿದರು. ಈ ರೈಲುಗಳು ಗಂಟೆಗೆ 200 ಕಿಮೀ ವೇಗದಲ್ಲಿ ಚಲಿಸುತ್ತವೆ. ರೈಲ್ವೇ ಜಾಲಕ್ಕೆ ಹೈಸ್ಪೀಡ್ ಲೈನ್ ಅನ್ನು ಸಂಯೋಜಿಸಲು ಪ್ರಸ್ತುತ ಪರಿಶೀಲನೆ ನಡೆಯುತ್ತಿದೆ.

ಅಸ್ತಿತ್ವದಲ್ಲಿರುವ ಹಳಿಗಳನ್ನು ಬಲಪಡಿಸುವ ಮೂಲಕ ಹೈಸ್ಪೀಡ್ ರೈಲನ್ನು ಕಾರ್ಯಗತಗೊಳಿಸಲು ಇದು ಕಾರ್ಯಸಾಧ್ಯವಾಗಿದೆ ಎಂದು ಸಿಂಗ್ ಹೇಳಿದರು. ಆದರೂ, ಕೆಲವು ಪ್ರದೇಶಗಳಲ್ಲಿ, ಹೊಸ ಟ್ರ್ಯಾಕ್‌ಗಳನ್ನು ಅಳವಡಿಸಬಹುದು. ಹಾಗೂ ಹೊಸ ಸಿಗ್ನಲಿಂಗ್ ವ್ಯವಸ್ಥೆಗಳನ್ನು ಸಹ ಅಳವಡಿಸಬೇಕಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+