NWKRTC- Gokak Falls: ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರದಿಂದ ಗೋಕಾಕ್ ಫಾಲ್ಸ್ಗೆ ವಿಶೇಷ ಬಸ್; ದರಪಟ್ಟಿ, ಮಾಹಿತಿ ತಿಳಿಯಿರಿ
ಬೆಳಗಾವಿ, ಜುಲೈ. 11: ಮಳೆಗಾಲದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಜಲಪಾತವು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಧುಮ್ಮಿಕ್ಕಿ ಹರಿಯುತ್ತಿರುವ ಈ ಗೋಕಾಕ್ ಫಾಲ್ಸ್ ಕಣ್ಮುಂಬಿಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಘಟಪ್ರಭಾ ನದಿಯ ಮೇಲಿರುವ ಈ ಫಾಲ್ಸ್ಗೆ ಹೋಗಲು ಸಾರಿಗೆಗೆ ಬೇಡಿಕೆ ಹೆಚ್ಚಾಗಿದೆ.
ಈ ಜಲಪಾತವು ಗೋಕಾಕ್ ಪಟ್ಟಣದಿಂದ ಆರೂವರೆ ಕಿಲೋಮೀಟರ್ ದೂರದಲ್ಲಿದೆ. ಸದ್ಯ ಮುಂಗಾರಿನಲ್ಲಿ ಮಳೆ ಹೆಚ್ಚಾಗಿದ್ದು, ಫಾಲ್ಸ್ನ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೇ ವೇಳೆ ಸ್ಥಳೀಯರು ಸೇರಿದಂತೆ ಹಲವು ಭಾಗಗಳಿಂದ ಪ್ರವಾಸಿಗರು ಫಾಲ್ಸ್ಗೆ ತೆರಳುತ್ತಿದ್ದು, ಕರ್ನಾಟಕ ಸಾರಿಗೆ ಇಲಾಖೆ ಕೂಡ ಅಗತ್ಯ ಕ್ರಮ ಕೈಗೊಳ್ಳುತ್ತಿದೆ.

ಪ್ರವಾಸಿಗರು ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದನ್ನು ಗಮನಿಸಿ ಪ್ರತಿ 2ನೇ ಮತ್ತು 4ನೇ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಚಿಕ್ಕೋಡಿ, ನಿಪ್ಪಾಣಿ ಹಾಗೂ ಸಂಕೇಶ್ವರ ಬಸ್ ನಿಲ್ದಾಣದಿಂದ ಗೋಕಾಕ್ ಫಾಲ್ಸ್ ಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಸಾರಿಗೆ ಸೌಲಭ್ಯ ನೀಡುವ ಘೋಷಣೆ ಮಾಡಿದೆ.
ಜುಲೈ 13 ರಿಂದ ಆಗಸ್ಟ್ 25ರ ವರೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳು ಚಿಕ್ಕೋಡಿ, ನಿಪ್ಪಾಣಿ ಹಾಗೂ ಸಂಕೇಶ್ವರ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ. ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಸಂಕೇಶ್ವರದಿಂದ ಗೋಕಾಕ ಫಾಲ್ಸ್ಗೆ ವಿಶೇಷ ಸಾರಿಗೆ ವ್ಯವಸ್ಥೆ
ಸಂಕೇಶ್ವರ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 09:30 ಹೊರಡುವ ಬಸ್ ಬೆಳಗ್ಗೆ 10:30ಕ್ಕೆ ಹಿಡಕಲ್ ಡ್ಯಾಮ್ ತಲುಪುತ್ತದೆ. ಹಿಡಕಲ್ ಡ್ಯಾಮ್ನಿಂದ 11:30ಕ್ಕೆ ಹೊರಡುವ ಬಸ್ ಗೊಡಚಿನಮಲ್ಕಿಗೆ 12:00ಕ್ಕೆ ಬರಲಿದೆ. ಗೊಡಚಿನಮಲ್ಕಿಯನ್ನು 13:30ಕ್ಕೆ ಬಿಡುವ ಬಸ್ 14:00ಕ್ಕೆ ಗೋಕಾಕ ಫಾಲ್ಸ್ ಬರಲಿದೆ.
16:30ಕ್ಕೆ ಗೋಕಾಕ ಫಾಲ್ಸ್ ನೋಡಿದ ಬಳಿಕ ಸಂಜೆ 18:00 ಗಂಟೆಗೆ ಸಂಕೇಶ್ವರ ಬಸ್ ನಿಲ್ದಾಣಕ್ಕೆ ವಾಪಸ್ ಬರಲಿದೆ. ಹೋಗಿ ಬರುವ ಸೇರಿ ಖರ್ಚು ಸೇರಿ ಒಟ್ಟು 160 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ 77609 91877 ಮತ್ತು 77609 91555 ಸಂಖ್ಯೆಯನ್ನು ಸಂಪರ್ಕಿಸಬಹುದು. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡುವವರು www.ksrtc.in ವೆಬ್ಸೈಟ್ ಸಂಪರ್ಕಿಸಬಹುದು.
ನಿಪ್ಪಾಣಿಯಿಂದ ಗೋಕಾಕ ಫಾಲ್ಸ್ಗೆ ವಿಶೇಷ ಸಾರಿಗೆ ವ್ಯವಸ್ಥೆ
ಪ್ರತಿ 2ನೇ ಮತ್ತು 4ನೇ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ, 13 ನೇ ಜುಲೈ-2024 ರಿಂದ 25 ಆಗಷ್ಟ-2024 ರವರೆಗೆ ವಿಷೇಷ ಬಸ್ಗಳ ಕಾರ್ಯಾಚರಣೆ ನಡೆಸಲಾಗುತ್ತದೆ.
ನಿಪ್ಪಾಣಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 08:30 ಹೊರಡುವ ಬಸ್ ಬೆಳಗ್ಗೆ 10:00ಕ್ಕೆ ಹಿಡಕಲ್ ಡ್ಯಾಮ್ ತಲುಪುತ್ತದೆ. ಹಿಡಕಲ್ ಡ್ಯಾಮ್ನಿಂದ 11:00ಕ್ಕೆ ಹೊರಡುವ ಬಸ್ ಗೊಡಚಿನಮಲ್ಕಿಗೆ 11:30ಕ್ಕೆ ಬರಲಿದೆ. ಗೊಡಚಿನಮಲ್ಕಿಯನ್ನು 13:00ಕ್ಕೆ ಬಿಡುವ ಬಸ್ 13:30ಕ್ಕೆ ಗೋಕಾಕ ಫಾಲ್ಸ್ ಬರಲಿದೆ. ಗೋಕಾಕ ಫಾಲ್ಸ್ ನೋಡಿದ ಬಳಿಕ ಸಂಜೆ 16:00 ಗಂಟೆಗೆ ಹೊರಟು ನಿಪ್ಪಾಣಿ ಬಸ್ ನಿಲ್ದಾಣಕ್ಕೆ 18:00ಕ್ಕೆ ವಾಪಸ್ ಬರಲಿದೆ.
ಹೋಗಿ ಬರುವ ಸೇರಿ ಖರ್ಚು ಸೇರಿ ಒಟ್ಟು 220 ರೂಪಾಯಿ ದರ ನಿಗದಿ ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ 77609 91879 ಸಂಖ್ಯೆಯನ್ನು ಸಂಪರ್ಕಿಸಬಹುದು. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡುವವರು www.ksrtc.in ವೆಬ್ಸೈಟ್ ಸಂಪರ್ಕಿಸಬಹುದು.
ಚಿಕ್ಕೋಡಿಯಿಂದ ಗೋಕಾಕ ಫಾಲ್ಸ್ಗೆ ವಿಶೇಷ ಸಾರಿಗೆ ವ್ಯವಸ್ಥೆ
ಚಿಕ್ಕೋಡಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 09:00 ಹೊರಡುವ ಬಸ್ ಬೆಳಗ್ಗೆ 10:30ಕ್ಕೆ ಹಿಡಕಲ್ ಡ್ಯಾಮ್ ತಲುಪುತ್ತದೆ. ಹಿಡಕಲ್ ಡ್ಯಾಮ್ನಿಂದ 11:30ಕ್ಕೆ ಹೊರಡುವ ಬಸ್ ಗೊಡಚಿನಮಲ್ಕಿಗೆ 12:00ಕ್ಕೆ ಬರಲಿದೆ. ಗೊಡಚಿನಮಲ್ಕಿಯನ್ನು 13:30ಕ್ಕೆ ಬಿಡುವ ಬಸ್ 14:00ಕ್ಕೆ ಗೋಕಾಕ ಫಾಲ್ಸ್ ಬರಲಿದೆ. 16:30ಕ್ಕೆ ಗೋಕಾಕ ಫಾಲ್ಸ್ ನೋಡಿದ ಬಳಿಕ ಸಂಜೆ 18:00 ಗಂಟೆಗೆ ಚಿಕ್ಕೋಡಿ ಬಸ್ ನಿಲ್ದಾಣಕ್ಕೆ ವಾಪಸ್ ಆಗಲಿದೆ.
ಹೋಗಿ ಬರುವ ಸೇರಿ ಖರ್ಚು ಸೇರಿ ಒಟ್ಟು 220 ರೂಪಾಯಿ ದರವಿದೆ. ಹೆಚ್ಚಿನ ವಿವರಗಳಿಗೆ 77609 91875 ಸಂಖ್ಯೆಯನ್ನು ಸಂಪರ್ಕಿಸಬಹುದು. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡುವವರು www.ksrtc.in ವೆಬ್ಸೈಟ್ ಸಂಪರ್ಕಿಸಬಹುದು.
-
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ












Click it and Unblock the Notifications