Get Updates
Get notified of breaking news, exclusive insights, and must-see stories!

ಕುಮಟಾ-ಶಿವಮೊಗ್ಗ-ಬೆಂಗಳೂರು-ತಿರುಪತಿ ವೇಗದೂತ ಬಸ್‌: ವೇಳಾಪಟ್ಟಿ, ದರ

ಬೆಂಗಳೂರು, ಮೇ 23: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ತಿರುಪತಿಗೆ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಗಿ ಬಸ್‌ ಸೇವೆಯನ್ನು ಆರಂಭಿಸಿದೆ. ಕುಮಟಾದಿಂದ ಹೊರಡುವ ಬಸ್ ಶಿವಮೊಗ್ಗ, ಬೆಂಗಳೂರು ಮೂಲಕ ತಿರುಪತಿಗೆ ಸಂಚಾರ ನಡೆಸಲಿದೆ.

ಕುಮಟಾ- ತಿರುಪತಿ ಮಾರ್ಗದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವೇಗದೂತ ಬಸ್‌ಗಳನ್ನು ಓಡಿಸಲಿದೆ. ಬಸ್ ವೇಳಾಪಟ್ಟಿ, ದರಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಿರುಪತಿಗೆ ಸಾಗುವ ಭಕ್ತರು ಬಸ್ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದೆ.

NWKRTC Bus Tirupati From Kumata Via Shivamogga Bengaluru Schedule

ಬಸ್ ವೇಳಾಪಟ್ಟಿ, ದರ: ಕುಮಟಾ-ತಿರುಪತಿ ನಡುವಿನ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್‌ಗೆ 855 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಪ್ರಯಾಣಿಕರು ಮುಂಗಡ ಟಿಕೆಟ್ ಬುಕ್ಕಿಂಗ್‌ಗಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ವೇಗದೂತ ಬಸ್ ಕುಮಟಾದಿಂದ 16:00ಕ್ಕೆ ಹೊರಟು, ತಿರುಪತಿಯನ್ನು 09:30ಕ್ಕೆ ತಲುಪಲಿದೆ. ಹಾಗೆಯೇ ತಿರುಪತಿಯಿಂದ 16:00 ಗಂಟೆಗೆ ಹೊರಟು, ಕುಮಟಾವನ್ನು 10.30ಕ್ಕೆ ತಲುಪಲಿದೆ ಎಂದು ವೇಳಾಪಟ್ಟಿ ಹೇಳಿದೆ.

ಕುಮಟಾ-ತಿರುಪತಿ ನಡುವಿನ ವೇಗದೂತ ಬಸ್ ಶಿರಸಿ, ಸಿದ್ಧಾಪುರ, ಶಿವಮೊಗ್ಗ, ಬೆಂಗಳೂರು ಮೂಲಕ ಸಂಚಾರ ನಡೆಸುತ್ತದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 7760991730 ಸಂಖ್ಯೆಗೆ ಕರೆ ಮಾಡಬಹುದು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಲವು ಮಾರ್ಗಗಳಲ್ಲಿ ವೇಗದೂತ ಬಸ್‌ಗಳನ್ನು ಓಡಿಸುತ್ತಿದೆ. ಬೆಳಗಾವಿ-ಬಬಲಾದಿ ನಡುವೆಯೂ ವೇಗದೂತ ಬಸ್‌ ಓಡಿಸುತ್ತಿದೆ.

ಈ ಬಸ್ ಬೆಳಗಾವಿಯನ್ನು ಬಿಡುವ ವೇಳೆ 16:00, ಬಬಲಾದಿ ತಲುಪುವ ವೇಳೆ 20:00. ಬಬಲಾದಿ ಬಿಡುವ ವೇಳೆ 06:00, ಬೆಳಗಾವಿ ತಲುಪುವ ವೇಳೆ 10:00. ಈ ಬಸ್ ಯರಗಟ್ಟಿ, ಯಾದವಾಡ, ಮುಧೋಳ್, ಗಲಗಲಿ ಮೂಲಕ ಸಂಚಾರ ನಡೆಸುತ್ತದೆ.

ಪಲ್ಲಕ್ಕಿ ಬಸ್‌ಗಳು: ಈಗ ಕರ್ನಾಟಕದಲ್ಲಿ ಪಲ್ಲಕ್ಕಿ ನಾನ್ ಎಸಿ ಬಸ್‌ಗಳು ಜನಪ್ರಿಯವಾಗುತ್ತಿವೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ-ಶಿರಡಿ, ಬೆಳಗಾವಿ-ಲಾತೂರ, ರಾಮದುರ್ಗ-ಬೆಂಗಳೂರು, ಮುರುಡೇಶ್ವರ- ಬೆಂಗಳೂರು ಮತ್ತು ಬೀಳಗಿ-ಬೆಂಗಳೂರು ಮಾರ್ಗದಲ್ಲಿ ಈ ಬಸ್‌ಗಳನ್ನು ಓಡಿಸುತ್ತಿದೆ.

ಹುಬ್ಬಳ್ಳಿ-ಶಿರಡಿ ಮಾರ್ಗದ ಬಸ್ ಹುಬ್ಬಳ್ಳಿಯಿಂದ ಹೊರಟು 20:08, ಶಿರಡಿಯನ್ನು 08;45ಕ್ಕೆ ತಲುಪುತ್ತದೆ. ಶಿರಡಿಯಿಂದ 20:00ಕ್ಕೆ ಹೊರಟು, ಹುಬ್ಬಳ್ಳಿಯನ್ನು 08:45ಕ್ಕೆ ತಲುಪಲಿದೆ. ಬಸ್ ಧಾರವಾಡ, ಬೆಳಗಾವಿ, ಪುಣೆ, ಅಹಮದ್ ನಗರ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಪ್ರಯಾಣ ದರ 1,300 ರೂ.ಗಳು.

ಬೆಳಗಾವಿ-ಲಾತೂರ ಬಸ್ ಪ್ರಯಾಣ ದರ 924 ರೂ.ಗಳು. ಈ ಬಸ್ ಲೋಕಾಪುರ, ಜಮಖಂಡಿ, ವಿಜಯಪುರ, ಸೊಲ್ಲಾಪುರ, ತುಳುಜಾಪುರ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಬಸ್ ಬೆಳಗಾವಿಯಿಂದ 20:00ಕ್ಕೆ ಹೊರಟು, ಲಾತೂರ 06:20ಕ್ಕೆ ತಲುಪಲಿದೆ. ಲಾತೂರದಿಂದ 19:30ಕ್ಕೆ ಹೊರಟು, ಬೆಳಗಾವಿಗೆ 50.30ಕ್ಕೆ ತಲುಪುತ್ತದೆ.

ಮುರುಡೇಶ್ವರ-ಬೆಂಗಳೂರು ನಡುವಿನ 'ಪಲ್ಲಕ್ಕಿ' ಬಸ್ ಭಟ್ಕಳ, ಬೈಂದೂರು, ಕೊಲ್ಲೂರು, ನಗರ, ಹೊಸನಗರ ಮಾರ್ಗದಲ್ಲಿ ಸಂಚಾರ ನಡೆಸುತ್ತದೆ. ಪ್ರಯಾಣ ದರ 1018 ರೂ.ಗಳು. ಬಸ್ ಮುರುಡೇಶ್ವರದಿಂದ 19:15ಕ್ಕೆ ಹೊರಟು ಬೆಂಗಳೂರು ನಗರವನ್ನು 06:30ಕ್ಕೆ ತಲುಪುತ್ತದೆ. ಬೆಂಗಳೂರು ನಗರದಿಂದ 19:15ಕ್ಕೆ ಹೊರಟು ಮುರುಡೇಶ್ವರವನ್ನು 07:00ಕ್ಕೆ ತಲುಪಲಿದೆ.

ರಾಮದುರ್ಗ-ಬೆಂಗಳೂರು ಬಸ್ ಪ್ರಯಾಣ ದರ 1070 ರೂ.ಗಳು. ನರಗುಂದ, ನವಲಗುಂದ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು ಮಾರ್ಗವಾಗಿ ಈ ಪಲ್ಲಕ್ಕಿ ಬಸ್ ಸಂಚಾರ ನಡೆಸುತ್ತದೆ. ರಾಮದುರ್ಗದಿಂದ ಬಸ್ 20:03ಕ್ಕೆ ಹೊರಟು, ಬೆಂಗಳೂರು ನಗರವನ್ನು 07:10ಕ್ಕೆ ತಲುಪುತ್ತದೆ. ಬೆಂಗಳೂರು ನಗರದಿಂದ 21:15ಕ್ಕೆ ಹೊರಟು, ರಾಮದುರ್ಗವನ್ನು 07:30ಕ್ಕೆ ತಲುಪಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+