ಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದ
ತುಮಕೂರು ಜಿಲ್ಲೆಯ ಮಧುಗಿರಿಯ ಎರಡು ಅದ್ಭುತ ಜಾಗಗಳನ್ನು ನಿಮಗೆ ತಿಳಿಸುವುದು ಉದ್ದೇಶ. ಏಕಶಿಲಾ ಬೆಟ್ಟ ಹಾಗೂ ಜಯಮಂಗಲಿ ಸಂರಕ್ಷಿತ ಪ್ರದೇಶದ ಕೃಷ್ಣಮೃಗ ಈ ಎರಡೂ ಒಮ್ಮೆಯಾದರೂ ನೋಡಲೇಬೇಕು. ಆ ಪೈಕಿ ಜಯಮಂಗಲಿ ಬಗ್ಗೆ ಮಾಹಿತಿ ಇಲ್ಲಿದೆ
ತುಮಕೂರು ಜಿಲ್ಲೆಯ ಮಧುಗಿರಿ ಅಂದರೆ ಎರಡು ಮುಖ್ಯ ಆಕರ್ಷಣೆಗಳಿವೆ. ಒಂದು ಏಕಶಿಲಾ ಬೆಟ್ಟ. ಮತ್ತೊಂದು ಅಲ್ಲಿನ ಜಯಮಂಗಲಿ ಸಂರಕ್ಷಿತ ಪ್ರದೇಶ. ಎರಡೂ ಕೂಡ ಅದ್ಭುತ ಅನುಭವ ನೀಡುವಂಥದ್ದು. ಆ ಎರಡರ ಪೈಕಿ ಕೃಷ್ಣಮೃಗದ ಬಗ್ಗೆ ತಿಳಿಸುವ ಪ್ರಯತ್ನ ಇದು. ಮಧುಗಿರಿಯ ಮೈದನಹಳ್ಳಿ ಕಾವಲ್ ನಲ್ಲಿ ಈ ಕೃಷ್ಣಮೃಗಗಳನ್ನು ನೋಡಬಹುದು.
ಬೆಳಗ್ಗೆ 8-9 ಗಂಟೆಯೊಳಗೆ ಹಾಗೂ ಸಂಜೆ 5 ಗಂಟೆ ಸುಮಾರಿಗೆ ಅಲ್ಲಿದ್ದರೆ ಕೃಷ್ಣಮೃಗಗಳು ನೋಡಲಿಕ್ಕೆ ಸಿಗುತ್ತವೆ. ಉಳಿದ ಸಮಯದಲ್ಲೂ ನೋಡಬಹುದು. ಈಗ ಬೇಸಿಗೆ ಆದ್ದರಿಂದ ನೀರಿರುವ ಕಡೆ ಕೂಡ ಅವುಗಳು ಹಿಂಡುಹಿಂಡಾಗಿ ಇರುತ್ತವೆ. ಆದರೆ ಇದು ಪ್ರಾಣಿ ಸಂಗ್ರಹಾಲಯದಲ್ಲಿ ನೋಡುವಂತೆ ಕೂಡಿಹಾಕಿರುವಂಥದ್ದಲ್ಲ.
ಕುರುಚಲು ಹುಲ್ಲು ಬೆಳೆದಿರುವ ಈ ಅರಣ್ಯ ಪ್ರದೇಶದಲ್ಲಿ ಸ್ವಚ್ಛಂದವಾಗಿ ಅಡ್ಡಾಡುತ್ತವೆ. ಆದ್ದರಿಂದಲೇ ಈ ಕೃಷ್ಣಮೃಗಗಳನ್ನು ನೋಡುವುದು ಮತ್ತೂ ಸೊಗಸು.[ರಾಮನಗರದ ರಣಹದ್ದು, ರಾಮ ದೇಗುಲ, ವಾರಾಂತ್ಯದ ಚಾರಣ]

ಸ್ವಂತ ವಾಹನದಲ್ಲಿ ತೆರಳಿದರೆ ಸಂರಕ್ಷಿತ ಪ್ರದೇಶದಲ್ಲಿ ಮಾಡಿರುವ ದಾರಿಯಲ್ಲಿ ಡ್ರೈವ್ ಮಾಡುತ್ತಾ ಇವುಗಳನ್ನು ನೋಡಬಹುದು. ಮಣ್ಣಿನ ರಸ್ತೆ ಇದೆ. ಹತ್ತಿರದಲ್ಲಿ ಯಾವುದೇ ಅಂಗಡಿ-ಹೋಟೆಲ್ ಗಳಿಲ್ಲ. ಬೆಂಗಳೂರು ಕಡೆಯಿಂದ ಮಧುಗಿರಿಗೆ ಹೋಗಿ ಅಲ್ಲಿಂದ ಮೈದನಹಳ್ಳಿಯಲ್ಲಿರುವ ಜಯಮಂಗಲಿಗೆ ಬರಬಹುದು. ಅದೇ ರೀತಿ ಗೌರಿಬಿದನೂರು ಕಡೆಯಿಂದಲೂ ಬರಬಹುದು.
ಇಲ್ಲಿ ಪ್ರವೇಶ ಶುಲ್ಕ ಅಂತಲೋ ಕ್ಯಾಮೆರಾ ಬಳಸಿದ್ದಕ್ಕೆ ಇಷ್ಟು ಹಣ ಅಂತಲೋ ಯಾವುದೂ ಇಲ್ಲ. ಅಸಲಿಗೆ ಜನರೇ ಇರದ ಪ್ರದೇಶವಿದು. ಹಾಗಂತ ಸ್ವೇಚ್ಛಾಚಾರವಾಗಿರಬಹುದು ಅಂತ ಅಂದುಕೊಳ್ಳಬೇಡಿ. ಏಕೆಂದರೆ ಕೃಷ್ಣಮೃಗ ಅಳಿವಿನಂಚಿನಲ್ಲಿರುವ ಪ್ರಾಣಿ. ಅವುಗಳನ್ನು ಉಳಿಸಿಕೊಳ್ಳಬೇಕಾದ್ದು ಎಲ್ಲರ ಜವಾಬ್ದಾರಿ. ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ಸಂರಕ್ಷಿತ ಪ್ರದೇಶದ ಎಲ್ಲೂ ಎಸೆಯಬೇಡಿ.[ಸಫಾರಿಗೆ ಹೋಗುವ ಮುನ್ನ ಏನೇನು ಸಿದ್ಧತೆ ಮಾಡಿಕೊಳ್ಳಬೇಕು?]
ಹೇಗೆಂದರೆ ಹಾಗೆ ಗಾಡಿ ಚಲಾಯಿಸಿ ಅವುಗಳನ್ನು ಗಾಬರಿ ಪಡಿಸಬೇಡಿ. ಫೋಟೋಗ್ರಫಿ ಮಾಡುವುದಕ್ಕೆ ಹೇಳಿ ಮಾಡಿಸಿದ ಜಾಗದಂತಿರುವ ಇಲ್ಲಿ, ಉಳಿದುಕೊಳ್ಳುವುದಕ್ಕೆ ಹೆಚ್ಚಿನ ಅನುಕೂಲಗಳಿಲ್ಲ. ಪೆಟ್ರೋಲ್-ಡೀಸೆಲ್ ಅಗತ್ಯವಾದಷ್ಟು ಇರುವಂತೆ ಮುಂಚಿತವಾಗಿಯೇ ನೋಡಿಕೊಳ್ಳಿ. ಜತೆಗೆ ಬೈನಾಕ್ಯುಲರ್ ಇದ್ದರೆ ಚಂದ.
ಒಂದು ದಿನದಲ್ಲಿ ಜಯಮಂಗಲಿಯ ಕೃಷ್ಣಮೃಗ ಹಾಗೂ ಏಕಶಿಲಾ ಬೆಟ್ಟ ನೋಡಿಬರಲು ಸಾಧ್ಯವಿದೆ. ಬೆಂಗಳೂರಿಗರಿಗಂತೂ ತುಂಬ ಹತ್ತಿರದ ಜಾಗ. ಬೆಂಗಳೂರಿನಿಂದ ಹೊರಡುವುದಾದರೆ ದಾಬಸ್ ಪೇಟೆ ಬಳಿ ಬಲಕ್ಕೆ ತಿರುಗಿದರೆ ಸೀದಾ ಕೊರಟಗೆರೆಗೆ ಹೋಗಿ, ಅಲ್ಲಿಂದ ಮಧುಗಿರಿಗೆ ಹೋಗಬಹುದು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications