KSRTC; ಮಂಗಳೂರು-ಹುಬಳ್ಳಿ ನಡುವೆ ಪಲ್ಲಕ್ಕಿ ಬಸ್, ವೇಳಾಪಟ್ಟಿ
ಮಂಗಳೂರು, ಡಿಸೆಂಬರ್ 17; ಕೆಎಸ್ಆರ್ಟಿಸಿಯ 'ಪಲ್ಲಕ್ಕಿ' ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ ಸೇವೆ ಜನಪ್ರಿಯವಾಗುತ್ತಿದೆ. ಹಲವಾರು ಮಾರ್ಗದಲ್ಲಿ ಈಗಾಗಲೇ ಬಸ್ಗಳ ಸಂಚಾರ ಆರಂಭಿಸಲಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸಲು 'ಪಲ್ಲಕ್ಕಿ' ಬಸ್ ಸೇವೆ ಆರಂಭವಾಗಿದೆ.
ಕೆಎಸ್ಆರ್ಟಿಸಿ ತಾಳಿಕೋಟೆ, ಗಂಗಾವತಿಗೆ ವಯಾ ಹುಬ್ಬಳ್ಳಿ 'ಪಲ್ಲಕ್ಕಿ' ಬಸ್ ಸೇವೆಯನ್ನು ಆರಂಭಿಸಿದೆ. ಅಕ್ಟೋಬರ್ನಲ್ಲಿ 'ಪಲ್ಲಕ್ಕಿ' ಹೆಸರಿನ ನೂತನ ಬಸ್ ಸೇವೆಯನ್ನು ಕೆಎಸ್ಆರ್ಟಿಸಿ ಆರಂಭಿಸಿದೆ. ರಾಜ್ಯದ ಹಲವಾರು ಮಾರ್ಗದಲ್ಲಿ ಈ ಬಸ್ಗಳು ಸಂಚಾರ ನಡೆಸುತ್ತಿವೆ.

ಇದು ಸ್ಲೀಪರ್ ಮಾದರಿಯ ಬಸ್. ಆದರೆ ಎಸಿ ಸೌಲಭ್ಯವನ್ನು ಹೊಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ 'ಪಲ್ಲಕ್ಕಿ' ಬಸ್ ಸೇವೆಗೆ ಚಾಲನೆ ಕೊಟ್ಟಿದ್ದರು.
ಬಸ್ ವೇಳಾಪಟ್ಟಿ; ಮಂಗಳೂರು-ತಾಳಿಕೋಟೆ ನಡುವಿನ 'ಪಲ್ಲಕ್ಕಿ' ಬಸ್ ಸಂಜೆ 6.30ಕ್ಕೆ ಮಂಗಳೂರಿನಿಂದ ಹೊರಡಲಿದೆ. ಮುಂಜಾನೆ 2.45ಕ್ಕೆ ಹುಬ್ಬಳ್ಳಿ, ಬಳಿಕ 7 ಗಂಟೆಗೆ ತಾಳಿಕೋಟೆ ತಲುಪಲಿದೆ. ತಾಳಿಕೋಟೆ-ಮಂಗಳೂರು ನಡುವಿನ ಬಸ್ ಸಂಜೆ 5.01ಕ್ಕೆ ತಾಳಿಕೋಟೆಯಿಂದ ಹೊರಡಲಿದೆ. 10.45ಕ್ಕೆ ಹುಬ್ಬಳ್ಳಿ ಮತ್ತು ಮರುದಿನ ಬೆಳಗ್ಗೆ 6.45ಕ್ಕೆ ಮಂಗಳೂರು ತಲುಪಲಿದೆ.
ಮಂಗಳೂರು-ಗಂಗಾವತಿ ನಡುವಿನ ಬಸ್ ಮಂಗಳೂರಿನಿಂದ ರಾತ್ರಿ 8.30ಕ್ಕೆ ಹೊರಟು, 3.45ಕ್ಕೆ ಹುಬ್ಬಳ್ಳಿ ತಲುಲಪಿದೆ. ಗಂಗಾವತಿಗೆ ಬೆಳಗ್ಗೆ 7.30ಕ್ಕೆ ತಲುಪಲಿದೆ. ಗಂಗಾವತಿ-ಮಂಗಳೂರು ನಡುವಿನ ಬಸ್ ಗಂಗಾವತಿಯಿಂದ ಸಂಜೆ 6.31ಕ್ಕೆ ಹೊರಡಲಿದೆ. ಹುಬ್ಬಳ್ಳಿಗೆ 10 ಗಂಟೆಗೆ ತಲುಪಲಿದೆ. ಮಂಗಳೂರಿಗೆ ಮರುದಿನ ಬೆಳಗ್ಗೆ 6.30ಕ್ಕೆ ತಲುಪಲಿದೆ.
ಕೆಎಸ್ಆರ್ಟಿಸಿ ಹುಬ್ಬಳ್ಳಿ-ಮಂಗಳೂರು ನಡುವಿನ ಪ್ರಯಾಣ ದರ 818 ರೂ. ಎಂದು ನಿಗದಿ ಮಾಡಿದೆ. ಮಂಗಳೂರು-ತಾಳಿಕೋಟೆ ನಡುವಿನ ದರ 1,315 ರೂ. ಮತ್ತು ಮಂಗಳೂರು ಮತ್ತು ಗಂಗಾವತಿ ನಡುವಿನ ದರ 1,131 ರೂ. ಆಗಿದೆ.
'ಪಲ್ಲಕ್ಕಿ' ಮಾದರಿ ಬಸ್ಗಳಲ್ಲಿ ಸಂಚಾರ ನಡೆಸಲು ಬಯಸುವ ಜನರು https://www.ksrtc.in/oprs-web/ ವೆಬ್ ಸೈಟ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆ 080-26252625.
ಕೆಎಸ್ಆರ್ಟಿಸಿ ಈಗಾಗಲೇ ಸಾಗರ, ಸೊರಬ, ಶಿಕಾರಿಪುರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ. ಸಾಗರ-ಶಿವಮೊಗ್ಗ-ವಿಜಯಪುರ ಮಾರ್ಗ ವಯಾ ಹರಿಹರ, ಹೊಸಪೇಟೆ, ಇಳಕಲ್ 'ಪಲ್ಲಕ್ಕಿ' ಬಸ್ ಸೇವೆಗಳನ್ನು ಆರಂಭಿಸಿದೆ. ವಿವಿಧ ವಿಭಾಗಗಳಿಗೆ ಹೊಸ ಬಸ್ಗಳನ್ನು ಹಂಚಿಕೆ ಮಾಡುತ್ತಿದೆ.
ಈ ಮಾದರಿಯ ಬಸ್ಗಳಿಗೆ 'ಪಲ್ಲಕ್ಕಿ' ಎಂಬ ಹೆಸರು ನೀಡಿದ್ದು ಸ್ವತಃ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ. 'ಸಂತೋಷವು ಪ್ರಯಾಣಿಸುತ್ತದೆ' ಎಂಬ ಟ್ಯಾಗ್ ಲೈನ್ ಇದಕ್ಕೆ ನೀಡಲಾಗಿದೆ.
ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಶೀಘ್ರದಲ್ಲಿಯೇ 'ಪಲ್ಲಕ್ಕಿ' ಮಾದರಿಯ 10 ಬಸ್ಗಳು ಸೇರಲಿವೆ.ಈ ಬಸ್ 11.3 ಮೀಟರ್ ಉದ್ದವಿದೆ. ಬಿಎಸ್-6 ತಂತ್ರಜ್ಞಾನ ಮಾದರಿ ಹೆಚ್ಪಿ ಇಂಜಿನ್ ಹೊಂದಿದೆ.
30 ಸೀಟುಗಳನ್ನು ಹೊಂದಿರುವ ಬಸ್ನ ಪ್ರತಿ ಸೀಟುಗಳಿಗೆ ಮೊಬೈಲ್, ಲ್ಯಾಪ್ಟಾಪ್ ಚಾರ್ಜಿಂಗ್ ವ್ಯವಸ್ಥೆ ಮಾಡಲಾಗಿದೆ. ಆಡಿಯೋ ಸ್ಪೀಕರ್ ಮೂಲಕ ಜನರಿಗೆ ನಿಲ್ದಾಣದ ಮಾಹಿತಿ ನೀಡುವ ವ್ಯವಸ್ಥೆ ಇದೆ.
ಈ ಬಸ್ಗಳಲ್ಲಿ ಚಾಲಕರಿಗೆ ಸಹಾಯಕವಾಗಲು ಹಿಂಭಾಗದಲ್ಲಿ ಸಹ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಈ ಮಾದರಿ ಬಸ್ಗಳು ಸದ್ಯ ಕರ್ನಾಟಕದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಸಂಚಾರ ನಡೆಸುತ್ತಿವೆ.
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು












Click it and Unblock the Notifications