BMTC: ಎರಡು ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ, ವೇಳಾಪಟ್ಟಿ
ಬೆಂಗಳೂರು, ಜೂನ್ 22: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಬೇಡಿಕೆಯಂತೆ ಎರಡು ಹೊಸ ಮಾರ್ಗದಲ್ಲಿ ಸಾಮಾನ್ಯ ಬಸ್ಗಳ ಸಂಚಾರವನ್ನು ಆರಂಭಿಸಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರ ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬಿಎಂಟಿಸಿ ಪ್ರಯಾಣಿಕರ ಬೇಡಿಕೆಯಂತೆ ಹಲವಾರು ಹೊಸ ಮಾರ್ಗವನ್ನು ಪರಿಚಯಿಸುತ್ತದೆ. ಈಗ ಇದೇ ಮಾದರಿಯಲ್ಲಿ ಎರಡು ಹೊಸ ಮಾರ್ಗವನ್ನು ಘೋಷಣೆ ಮಾಡಿದ್ದು, ಬಸ್ ಹೊರಡುವ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ.

ಒಂದು ಮಾರ್ಗದ ಬಸ್ 302-ಕೆ ಶಿವಾಜಿನಗರ- ಕೆ ಚನ್ನಸಂದ್ರ ನಡುವೆ ಸಂಚಾರ ನಡೆಸುತ್ತದೆ. ಈ ಮಾರ್ಗದ ಬಸ್ ಐಟಿಸಿ, ಸೇವಾನಗರ, ಬಾಣಸವಾಡಿ, ಹೊರಮಾವು, ಜಯಂತಿ ನಗರ, ಕಲ್ಕೆರೆ ಮೂಲಕ ಸಾಗುತ್ತದೆ.
2ನೇ ಮಾರ್ಗ 401-ಎನ್. ಬನಶಂಕರಿ ಬಸ್ ನಿಲ್ದಾಣ- ಮಲ್ಲೇಶ್ವರ ಬಸ್ ನಿಲ್ದಾಣ 18ನೇ ಕ್ರಾಸ್. ಈ ಮಾರ್ಗದ ಬಸ್ ವಿಜಯನಗರ, ಮಾಗಡಿ ರಸ್ತೆ ಟೋಲ್ಗೇಟ್, ಇಎಸ್ಐ, ನವರಂಗ್ ಮೂಲಕ ಸಂಚಾರ ನಡೆಸುತ್ತದೆ.
ವೇಳಾಪಟ್ಟಿಯ ವಿವರ: 401-ಎನ್. ಬನಶಂಕರಿ ಬಸ್ ನಿಲ್ದಾಣ- ಮಲ್ಲೇಶ್ವರ ಬಸ್ ನಿಲ್ದಾಣ 18ನೇ ಕ್ರಾಸ್. ಈ ಮಾರ್ಗದ ಬಸ್ ಬನಶಂಕರಿಯಿಂದ ಹೊರಟು ಕತ್ರಿಗುಪ್ಪೆ, ಪಿಇಎಸ್ ಕಾಲೇಜು, ನಾಯಂಡಹಳ್ಳಿ, ವಿಜಯನಗರ ಟಿಟಿಎಂಸಿ, ಮಾಗಡಿ ರಸ್ತೆ ಟೋಲ್ಗೇಟ್, ಬಾಶ್ಯಂ ವೃತ್ತ, ಇಎಸ್ಐ, ನವರಂಗ್, ಮಲ್ಲೇಶ್ವರ ವೃತ್ತ ಮೂಲಕ ಮಲ್ಲೇಶ್ವರ ಬಸ್ ನಿಲ್ದಾಣ ತಲುಪಲಿದೆ.
ಬನಶಂಕರಿ ಬಸ್ ನಿಲ್ದಾಣದಿಂದ ಬಸ್ಗಳು 7.35, 8.05, 8.35, 8.55, 9.35, 10.30, 11, 11.30, 11.50, 12.20, 12.50, 14.45, 15.05, 15.40, 17.10, 17.40, 20.10ಕ್ಕೆ ಹೊರಡಲಿದೆ.
ಮಲ್ಲೇಶ್ವರ ಬಸ್ ನಿಲ್ದಾಣದಿಂದ ಬಸ್ 6.40, 7.45, 8.20, 8.50, 9.20. 9.50, 10.35, 11.10, 11.40, 12.40, 13.00, 13.30, 14.30, 15.55, 16.25, 16.50, 18.55ಕ್ಕೆ ಹೊರಡಲಿದೆ.
302-ಕೆ ಶಿವಾಜಿನಗರ- ಕೆ ಚನ್ನಸಂದ್ರ ನಡುವಿನ ಬಸ್. ಶಿವಾಜಿನಗರದಿಂದ ಹೊರಟು ಕಂಟೋನ್ಮೆಂಟ್ ರೈಲು ನಿಲ್ದಾಣ, ಕೋಲ್ಸ್ ಪಾರ್ಕ್, ಐಟಿಸಿ, ಕ್ಲಾರೆನ್ ಶಾಲೆ, ಸೇವಾ ನಗರ, ಬಾಣಸವಾಡಿ, ಹೊರಮಾವು ಪೆಟ್ರೋಲ್ ಬಂಕ್, ಹೊರಮಾವು, ಜಯಂತಿ ನಗರ, ಕಲ್ಕೆರೆ ಮೂಲಕ ಕೆ ಚನ್ನಸಂದ್ರ ತಲುಪಲಿದೆ.
ಶಿವಾಜಿನಗರದಿಂದ ಬಸ್ 7.45, 8.15, 10.15, 10.30, 16.10, 17.00, 18.45, 19.45, 21.15ಕ್ಕೆ ಹೊರಡಲಿದೆ.
ಕೆ ಚನ್ನಸಂದ್ರದಿಂದ ಬಸ್ 5.30, 8.45, 9.20, 11.15, 11.30, 17.15, 18.05, 19.50, 20.50ಕ್ಕೆ ಹೊರಡಲಿದೆ.
ಬಿಎಂಟಿಸಿ ಬಸ್ ಬೆಂಗಳೂರು ನಗರದ ಜನರ ಜೀವನಾಡಿ. ನಮ್ಮ ಮೆಟ್ರೋ, ಆಟೋ, ಕ್ಯಾಬ್ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಬಂದರೂ ಸಹ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಪ್ರತಿದಿನ 6 ಸಾವಿರಕ್ಕೂ ಅಧಿಕ ಬಿಎಂಟಿಸಿ ಬಸ್ಗಳು ಜನರ ಸೇವೆಗಾಗಿ ರಸ್ತೆಗೆ ಇಳಿಯುತ್ತವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬೆಂಗಳೂರು ನಗರ, ಉಪನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಣೆಯ ವಿಸ್ತಾರ ಹೊಂದಿದೆ. ದಿನಂಪ್ರತಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಹೊಸ ಹೊಸ ಮಾರ್ಗವನ್ನು ಬಿಎಂಟಿಸಿ ಪರಿಚಯಿಸುತ್ತಲೇ ಬರುತ್ತಿದೆ. ನೂತನ ತಂತ್ರಜ್ಞಾನಕ್ಕೆ ಅನುಗುಣವಾಗಿ ವಿವಿಧ ಹೊಸ ಐಷಾರಾಮಿ ಮಾದರಿ ಬಸ್ ಸೇವೆಯನ್ನು ಸಹ ಬಿಎಂಟಿಸಿ ಆರಂಭಿಸಿದೆ. ಸಾಮಾನ್ಯ ಎಸಿ, ನಾನ್ ಎಸಿ, ವಿದ್ಯುತ್ ಬಸ್ಗಳನ್ನು ಬಿಎಂಟಿಸಿ ಓಡಿಸುತ್ತಿದೆ. ಅಲ್ಲದೇ ಕೆಂಪೇಗೌಡ ವಿಮಾನ ನಿಲ್ದಾಣಕ್ಕಾಗಿ ಪ್ರತ್ಯೇಕವಾಗಿ ವಾಯುವಜ್ರ ಬಸ್ಗಳನ್ನು ಓಡಿಸಲಾಗುತ್ತಿದೆ.
-
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ












Click it and Unblock the Notifications