Get Updates
Get notified of breaking news, exclusive insights, and must-see stories!

Tirumala Tirupati: ತಿರುಮಲ ಶ್ರೀವಾರಿ ವೈಕುಂಠ ದ್ವಾರ ದರ್ಶನಕ್ಕೆ ಭೇಟಿ ನೀಡಲಿದ್ದೀರಾ.. ಈ ಸೂಚನೆಗಳನ್ನು ಪಾಲಿಸಲೇಬೇಕು

ತಿರುಮಲದ ಶ್ರೀವಾರಿ ವೈಕುಂಠ ದರ್ಶನ ಮುಂದಿನ ವಾರ ಆರಂಭವಾಗಲಿದೆ. ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ವೈಷ್ಣವರ ಸಂಪ್ರದಾಯದಂತೆ ಡಿಸೆಂಬರ್ 23ರಿಂದ ಜನವರಿ 1ರವರೆಗೆ 10 ದಿನಗಳ ಕಾಲ ವೈಕುಂಠ ಬಾಗಿಲು ತೆರೆಯಲು ಟಿಟಿಡಿ ವ್ಯವಸ್ಥೆ ಮಾಡುತ್ತಿದೆ.

ಪುರಾಣಗಳ ಪ್ರಕಾರ ವೈಕುಂಠದ ದರ್ಶನ ವಿಶಿಷ್ಟವಾದುದ್ದು. ವೈಕುಂಠದಲ್ಲಿ ವಿಷ್ಣುವಿಗೆ ಒಂದು ದಿನ ಅಂದರೆ ಭೂಮಿಯ ಮೇಲಿನ ಒಂದು ವರ್ಷವಾಗಿದೆ. ವೈಕುಂಠದಲ್ಲಿ 120 ನಿಮಿಷಗಳ ಅರುಣೋದಯ ಭೂಮಿಯ ಮೇಲಿನ 30 ದಿನಗಳಿಗೆ ಸಮಾನವಾಗಿರುತ್ತದೆ. ಇದನ್ನು ನಾವು ಧನುರ್ಮಾಸ ಎಂದು ಕರೆಯುತ್ತೇವೆ. ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ವಿಷ್ಣುವು ದೇವತೆಗಳಿಗೆ ಮತ್ತು ಋಷಿಗಳಿಗೆ 40 ನಿಮಿಷಗಳ ಕಾಲ ದರ್ಶನವನ್ನು ನೀಡುತ್ತಾನೆ.

https://kannada.oneindia.com/astrology/horoscope-2024-zodiac-signs-who-will-rule-in-2024-in-kannada-333347.html

ಇದು ಆ ಕಾಲದ ಪ್ರಕಾರ ವೈಕುಂಠದಲ್ಲಿ ಪ್ರತಿನಿತ್ಯ ನಡೆಯುವ ಪ್ರಕ್ರಿಯೆಯಾಗಿತ್ತು. ಇದು ಭೂಮಿಯ ಸಮಯದ ಪ್ರಕಾರ ವರ್ಷಕ್ಕೊಮ್ಮೆ ನಡೆಯುವ ಪ್ರಕ್ರಿಯೆಯಾಗಿದೆ. ಈ 40 ನಿಮಿಷಗಳು ಭೂಮಿಯ ಮೇಲಿನ 10 ದಿನಗಳಿಗೆ ಸಮಾನವಾಗಿರುವುದರಿಂದ ವೈಷ್ಣವ ದೇವಾಲಯಗಳಲ್ಲಿ ಈ 10 ದಿನಗಳಲ್ಲಿ ವೈಕುಂಠಕ್ಕೆ ಭೇಟಿ ನೀಡಿದರೆ ವಿಷ್ಣುವನ್ನು ನೇರವಾಗಿ ನೋಡುವ ಭಾಗ್ಯ ಸಿಗುತ್ತದೆ ಎಂದು ನಂಬಲಾಗಿದೆ.

10 ದಿನಗಳ ಕಾಲ ವೈಕುಂಠ ದ್ವಾರ ದರ್ಶನ

10 ದಿನಗಳ ಕಾಲ ಯಾವುದೆ ದಿನ ವೈಕುಂಠ ದರ್ಶನ ಪಡೆಯಬಹುದು ಎಂದು ಟಿಟಿಡಿ ಹೇಳಿದೆ. ಜೊತೆಗೆ ಕೆಲ ಸೂಚನೆಗಳನ್ನು ಪಾಲಿಸಲೇಬೇಕು ಎಂದು ಟಿಟಿಡಿ ವಿನಂತಿಸಿದೆ. ತಿರುಮಲದಲ್ಲಿ ಸೀಮಿತ ಕೊಠಡಿಗಳ ಲಭ್ಯತೆಯಿಂದಾಗಿ, ಈ ದಿನಗಳಲ್ಲಿ ಭಕ್ತರ ನೂಕುನುಗ್ಗಲು ಇರುವುದರಿಂದ ಬೇರೆಡೆ ಕೊಠಡಿಗಳನ್ನು ಪಡೆಯಲು ಭಕ್ತರಿಗೆ ಸೂಚಿಸಲಾಗಿದೆ.

ವೈಕುಂಠ ದರ್ಶನ 10 ದಿನಗಳವರೆಗೆ ಇರಲಿದ್ದು, ವಿಐಪಿಗಳು ಮತ್ತು ಇತರ ಭಕ್ತರು ವೈಕುಂಠ ಏಕಾದಶಿಯ ಮೊದಲ ದಿನದಂದು ಮಾತ್ರ ದರ್ಶನವನ್ನು ಪಡೆಯಬೇಕೆಂಬ ಯಾವುದೇ ಆತುರವಿಲ್ಲದೆ. ಹತ್ತು ದಿನಗಳಲ್ಲಿ ಯಾವುದೇ ದಿನ ಭೇಟಿ ನೀಡುವ ಯೋಜನೆಗಳನ್ನು ಮಾಡಿಕೊಳ್ಳಬಹುದು.

https://kannada.oneindia.com/astrology/horoscope-2024-zodiac-signs-who-will-rule-in-2024-in-kannada-333347.html

ಟಿಕೆಟ್ ವ್ಯವಸ್ಥೆ ಮತ್ತು ಸೂಚನೆಗಳು

ತಿರುಪತಿಗೆ ಬರುವ ಭಕ್ತರಿಗೆ ಇಲ್ಲಿನ ಕೌಂಟರ್‌ಗಳಲ್ಲಿ ಆಫ್‌ಲೈನ್ ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ. ಇದೇ ತಿಂಗಳ 22ರಿಂದ ಒಟ್ಟು 10 ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 94 ಕೌಂಟರ್‌ಗಳಲ್ಲಿ ಒಟ್ಟು 4,23,500 ಟೋಕನ್‌ಗಳನ್ನು ವಿತರಿಸಲಾಗುವುದು ಎಂದು ಟಿಟಿಡಿ ಹೇಳಿದೆ.

ಈ ಟಿಕೆಟ್‌ಗಳನ್ನು ಶ್ರೀನಿವಾಸಂ ಕಾಂಪ್ಲೆಕ್ಸ್, ವಿಷ್ಣುನಿವಾಸಂ ಕಾಂಪ್ಲೆಕ್ಸ್, ಭೂದೇವಿ ಕಾಂಪ್ಲೆಕ್ಸ್, ಇಂದಿರಾ ಮೈದಾನ, ರಾಮಚಂದ್ರ ಪುಷ್ಕರಿಣಿ, ಎಂ.ಆರ್.ಪಲ್ಲಿಯ ಜಿಲ್ಲಾ ಪರಿಷತ್ ಪ್ರೌಢಶಾಲೆ, ರಾಮನಾಯ್ಡು ಪ್ರೌಢಶಾಲೆ, ಜೀವಕೋಣದ ಜಿಲ್ಲಾ ಪರಿಷತ್ ಪ್ರೌಢಶಾಲೆ, ಕೌಸ್ತುಭಂ ತಂಗುದಾಣದಲ್ಲಿ ನೀಡಲಾಗುತ್ತದೆ.

ಇದಲ್ಲದೆ ವೈಕುಂಠ ಏಕಾದಶಿ ದರ್ಶನದ ಸಮಯದಲ್ಲಿ ಟಿಕೆಟ್ ಪಡೆದ ಭಕ್ತರಿಗೆ ಮಾತ್ರ ಶ್ರೀವಾರಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ. ದರ್ಶನ ಟಿಕೆಟ್ ಇಲ್ಲದ ಭಕ್ತರು ಕೂಡ ತಿರುಮಲಕ್ಕೆ ಬರಬಹುದು ಆದರೆ ದರ್ಶನಕ್ಕೆ ಅವಕಾಶವಿಲ್ಲ ಎಂಬುದನ್ನು ಗಮನಿಸಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+