ಇನ್ನ ಮುದ್ದಾಣು ಮಹಾತೊಭಾರ ಶ್ರೀ ಮಹಾಲಿಂಗೇಶ್ವರ

ಪೌರಾಣಿಕ ಹಿನ್ನೆಲೆ : ಭಾರ್ಗವ ಮುನಿಗಳು ಇಲ್ಲಿಗೆ ಸಮೀಪದ ಬೆಟ್ಟದಲ್ಲಿ ಶಿವನನ್ನು ಧ್ಯಾನಿಸುತ್ತಾ ಅಘೋರ ತಪಸ್ಸು ನಡೆಸಿದಾಗ ಮುನಿಗಳಿಗೆ ಶಿವ ಪ್ರತ್ಯಕ್ಷನಾದ. ಬೇಕಾದ ವರವನ್ನು ಕೇಳೆಂದು ಭಾರ್ಗವ ಮುನಿಗಳಿಗೆ ಶಿವ ಹೇಳಿದಾಗ, ಈ ಕ್ಷೇತ್ರದಲ್ಲಿ ಬಂದು ನೆಲೆಸುವಂತೆ ಮುನಿಗಳು ದೇವರನ್ನು ಪ್ರಾರ್ಥಿಸಿದರು. ಮುನಿಗಳ ಬೇಡಿಕೆಯನ್ನು ಒಪ್ಪಿದ ಶಿವ ಈಕ್ಷೇತ್ರದಲ್ಲಿ ನೆಲೆಸಿದ ಎನ್ನುವುದು ಪ್ರತೀತಿ.
1300 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ದಿನ ಮೂರು ಹೊತ್ತು ಪೂಜೆ ಸಲ್ಲುತ್ತದೆ. ತುಳುನಾಡಿನ ಭಾಷೆಯಲ್ಲಿ ದಿನದ ಮೂರು ಹೊತ್ತು ಪೂಜೆ ಸಲ್ಲಿಸಲಾಗುವ ದೇವಾಲಯಕ್ಕೆ "ಮಹಾತೋಭಾರ" ದೇವಾಲಯವೆಂದು ಕರೆಯುತ್ತಾರೆ. ಇನ್ನ ದೇವಾಲಯ ಮತ್ತು ಕ್ಷೇತ್ರಕ್ಕೆ ಸಮೀಪವಿರುವ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಾಲಯ ಭಾರ್ಗವ ಗೋತ್ರದವರಿಗೆ ಕುಲದೇವಸ್ಥಾನ. ಕ್ಷೇತ್ರದಲ್ಲಿ ಪ್ರಮುಖ ಭೂತಾರಾಧನೆ 'ವಾರಾಹಿ ಪಂಜುರ್ಲಿಗೆ' ನಡೆಯುತ್ತದೆ.
ಇತ್ತೀಚೆಗೆ ದೇವಾಲಯದ ಜೀರ್ಣೋದ್ದಾರ ಕೆಲಸ ನಡೆದಿತ್ತು. ಕಾರ್ತಿಕ ಮಾಸದಲ್ಲಿ ಲಕ್ಷದೀಪೋತ್ಸವ ಮತ್ತು ವಾರ್ಷಿಕ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.
ತಲುಪುವುದು ಹೇಗೆ? : ಮಂಗಳೂರುನಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಪಡುಬಿದ್ರೆ (ಎಕ್ಸ್ ಪ್ರೆಸ್ ಬಸ್ ಗಳ ನಿಲುಗಡೆಯಿದೆ) ಎನ್ನುವ ಸ್ಥಳದಲ್ಲಿ ಇಳಿಯಬೇಕು. ಅಲ್ಲಿಂದ ಕಾರ್ಕಳಕ್ಕೆ ಹೋಗುವ ಬೈಪಾಸ್ ನಲ್ಲಿ ಎಂಟು ಕಿ.ಮೀ ದೂರ ಕ್ರಮಿಸಿದ ನಂತರ, ಬಲಕ್ಕೆ ಮೂರು ಕಿ.ಮೀ ಒಳಗೆ ಹೋಗಬೇಕು (ಬಲಕ್ಕೆ ತಿರುಗುವಾಗ ದೇವಾಲಯದ ಸ್ವಾಗತ ಗೋಪುರವನ್ನು ಕಾಣಬಹುದು).
ವಿಳಾಸ
ಇನ್ನ ಮುದ್ದಾಣು ಮಹಾತೊಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯ
ಶ್ರೀಕ್ಷೇತ್ರ ಇನ್ನ, ಕಾರ್ಕಳ ತಾಲೂಕು
ಉಡುಪಿ ಜಿಲ್ಲೆ - 576 146
ದೂರವಾಣಿ : 08258 – 268108
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications