ಬೆಂಗಳೂರಿಗೆ ಹೇಳಿ ಒಂದು ದಿನ ಗುಡ್ ಬೈ

ಬನ್ನೇರುಘಟ್ಟ : ಬೆಂಗಳೂರಿನಿಂದ ದಕ್ಷಿಣಕ್ಕೆ ಸುಮಾರು 22 ಕಿಮೀ. 25,000 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹಸುರು ಆಚ್ಛಾದಿತ ಪ್ರಾಣಿ ಸಂಗ್ರಹಾಲಯ. ಚಿಟ್ಟೆಗಳ ಪಾರ್ಕ್ ಇತ್ತೀಚಿನ ಆಕರ್ಷಣೆ. ದಟ್ಟ ಕಾಡು, ವನ್ಯಜೀವಿಗಳ ವಿಹಾರಧಾಮ. ಕಾಡುಕೋಣ, ಚಿರತೆ, ಮುಳ್ಳುಹಂದಿ ಮುಂತಾದ ಪ್ರಾಣಿಗಳಿಗೆ ಆಶ್ರಯಧಾಮ. ಪೂರ್ವ ಮತ್ತು ಪಶ್ಚಿಮ ಘಟ್ಟದ ನಡುವೆ ಓಡಾಡುವ ಆನೆಗಳ ಕಾರಿಡಾರ್. ಬೆಂಗಳೂರು ಕೇಂದ್ರ ಬಸ್ ನಿಲ್ಧಾಣದಿಂದ ವೋಲ್ವೋ ಬಸ್ಸಿದೆ.
ಮಾರ್ಗದರ್ಶನ
ಭೀಮೇಶ್ವರಿ : ಶಿವನಸಮುದ್ರ ಮತ್ತು ಮೇಕೆದಾಟು ಜಲಧಾರೆ ನಡುವೆ ಇರುವ ಸಣ್ಣ ಊರು ಭೀಮೇಶ್ವರಿ. ಮಂಡ್ಯ ಜಿಲ್ಲೆಯಲ್ಲಿ ಬರುವ ಭೀಮೇಶ್ವರಿ ಕಾವೇರಿ ನದಿಯ ರಮಣೀಯ ಬಿಂದು. ಸುಂದರ ಪ್ರಕೃತಿ ಪರಿಸರದ ನಡುವೆ ಹವ್ಯಾಸಿ ಮೀನುಗಾರಿಕೆಗೆ ಹೇಳಿ ಮಾಡಿಸಿದ ಸ್ಥಳ. ಪರಿಸರ ಪ್ರವಾಸಕ್ಕೆ ಹೆಸರುವಾಸಿ. ಮಹಸೀರ್ ಮೀನುಗಳ ಆಡುಂಬೊಲ.
ಮಾರ್ಗದರ್ಶನ.
ಚೆನ್ನಕೇಶವ ದೇವಸ್ಥಾನ, ಕೈದಾಳ : ಜಕಣಾಚಾರಿಯ ಶಿಲ್ಪ ವೈಭವದಿಂದ ಕಂಗೊಳಿಸುವ ದೇವಾಲಯ ತುಮಕೂರಿನಿಂದ ಕೇವಲ 9 ಕಿಮೀ ದೂರ. ಕುಣಿಗಲ್ ರಸ್ತೆಯಲ್ಲಿರುವ ಗೂಳೂರು ಗ್ರಾಮದ ಒಳದಾರಿಯಲ್ಲಿ ನುಸುಳಿದರೆ ಸಿಗುತ್ತದೆ. ಸಣ್ಣ ದ್ರಾವಿಡ ಶೈಲಿಯ ಮೋಹಕ ಕೆತ್ತನೆಗಳು ಇಲ್ಲಿನ ವಿಶೇಷ. 1150ರಲ್ಲಿ ನಿರ್ಮಿಸಿದ ಕೈದಾಳ ಚೆನ್ನಕೇಶವನ ತಾಣವೇ ಜಕಣಾಚಾರಿಯ ಊರು. ಅವನು ಹುಟ್ಟಿ ಬೆಳೆದದ್ದು ಇಲ್ಲೇ.
ದೇವರಾಯನ ದುರ್ಗ ರಾಶಿರಾಶಿ ಶಿಲೆಗಳ ನಡುವೆ ಮೈವೆತ್ತ ಗಿರಿಧಾಮ. ಸಮುದ್ರ ಮಟ್ಟದಿಂದ 3940 ಅಡಿ ಎತ್ತರದಲ್ಲಿರುವ ರಮಣೀಯ ಪ್ರದೇಶ. ಬೆಂಗಳೂರಿನಿಂದ 65 ಕಿಮೀ, ತುಮಕೂರಿನಿಂದ 9 ಕಿಮೀ ದೂರದಲ್ಲಿದೆ. ಬೆಟ್ಟ ಹತ್ತುವವರಿಗೆ, ಚಾರಣಿಗರಿಗೆ, ಪ್ರಕೃತಿ ಆರಾಧಕರಿಗೆ, ದೈವಭಕ್ತರಿಗೆ ಹಾಗೆ ಸುಮ್ಮನೆ ಹೊರ ಸಂಚಾರ ತೆರಳುವವರಿಗೆ, ಒತ್ತಡ ಜೀವನ ಶೈಲಿಯಿಂದ ಒಂದು ದಿನದ ಬಿಡುಗಡೆ ಪಡೆಯಬಯಸುವವರಿಗೆ ದೇವರಾಯನದುರ್ಗ ಹೇಳಿ ಮಾಡಿಸಿದ ತಾಣ.
-
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply












Click it and Unblock the Notifications