ಕೇರಳದಲ್ಲಿ ಕನ್ನಡ ಕಲಿತ ವಿದ್ಯಾರ್ಥಿಗಳು ಅತಂತ್ರ

Kasargod Kannadigas fate
ಕೇರಳದ ಎಲ್ಲಾ ಶಾಲೆಗಳಲ್ಲೂ ಮಲಯಾಳ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಆರ್‌ವಿಜಿ ಮೆನನ್ ಆಯೋಗದ ವರದಿಯನ್ನು ಕೇರಳ ಸಚಿವ ಸಂಪುಟ ಅನುಮೋದಿಸಿದೆ. ಇದರಿಂದ ಅಚ್ಚಗನ್ನಡ ನೆಲವಾದ ಕಾಸರಗೋಡಿನ ಕನ್ನಡ ಶಾಲೆಗಳ ಭವಿಷ್ಯ ಬಗ್ಗೆ ಯೋಚಿಸುವಂತಾಗಿದೆ. ಆಡಳಿತ ಭಾಷೆಯಾದ ಮಲಯಾಳದ ಹೇರಿಕೆಯಿಂದ ಕನ್ನಡ ಕಲಿತವರಿಗೆ ಕಾಸರಗೋಡಿನಲ್ಲಿ ಸರಕಾರಿ ಉದ್ಯೋಗ ಪಡೆಯುವುದು ಕಷ್ಟವಾಗುತ್ತಿದೆ.

ಇದರಿಂದ ಇಲ್ಲಿನ ಕನ್ನಡ, ತುಳು ಮೊದಲಾದ ಭಾಷಿಗರು ಅನಿವಾರ್ಯವಾಗಿ ಮಲಯಾಳ ಹಾಗೂ ಇಂಗ್ಲೀಷ್ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿರುವುದರಿಂದ ಕನ್ನಡದ ಉಳಿವಿನ ಬಗ್ಗೆ ಆತಂಕ ಪಡುವಂತಾಗಿದೆ. ಕಾಸರಗೋಡಿನಲ್ಲಿ ಪದವಿ ಹಂತದಲ್ಲಿ ಕನ್ನಡವನ್ನು ಕಲಿಸುವ ಎರಡು ಕಾಲೇಜುಗಳಿವೆ. ಇಲ್ಲಿ ಕನ್ನಡ ಕಲಿತ ಪದವೀಧರರು ಕಾಸರಗೋಡಿನಲ್ಲಿರುವ ಏಕೈಕ ಶಿಕ್ಷಕ ತರಬೇತಿ ಕಾಲೇಜಿನಲ್ಲಿ ಕನ್ನಡ ಬಿಇಡಿ. ಪೂರೈಸುತ್ತಾರೆ. ಆದರೆ ಕಾಸರಗೋಡಿನಲ್ಲಿ ಕನ್ನಡ ಶಿಕ್ಷಕ ಹುದ್ದೆಗಳು ಕಡಿಮೆಯಾಗುತ್ತಿರುವುದರಿಂದ ಅನಿವಾರ್ಯವಾಗಿ ಉದ್ಯೋಗಕ್ಕಾಗಿ ಇವರು ಕರ್ನಾಟಕವನ್ನು ಆಶ್ರಯಿಸಬೇಕಾಗಿದೆ.

ಆದರೆ ಕರ್ನಾಟಕದಲ್ಲಿ ಕೇರಳದ ಕನ್ನಡ ಬಿಇಡಿ ಪದವಿಗೆ ತಾಂತ್ರಿಕ ಕಾರಣಗಳಿಂದ ಮಾನ್ಯತೆ ನೀಡದ ಕಾರಣ ಇವರು ಕರ್ನಾಟಕದ ಶಾಲೆಗಳಲ್ಲೂ ಉದ್ಯೋಗ ಸಂಪಾದಿಸಲಾಗದೆ ಅತಂತ್ರರಾಗಿದ್ದಾರೆ. ಕೇರಳದಲ್ಲಿ ಕರ್ನಾಟಕದ ಬಿಇಡಿಗೆ ಮಾನ್ಯತೆ ಇದೆ ಎಂಬುದು ಗಮನಾರ್ಹ. ಕೇರಳದಲ್ಲಿ ಕಲಿತ ಕನ್ನಡ ಬಿಎ ಅಥವಾ ಎಂಎ ಮತ್ತು ಬಿಇಡಿ. ಪದವೀಧರರನ್ನು ಕರ್ನಾಟಕದ ಶಾಲೆಗಳಿಗೂ ಪರಿಗಣಿಸಬೇಕು.

ಕರ್ನಾಟಕದಲ್ಲಿ ಕೇರಳ ಬಿಇಡಿ ಪದವಿಗೆ, ಕನಿಷ್ಟ ಪಕ್ಷ ಕನ್ನಡ ಬಿಇಡಿ. ಪದವಿಗಾದರೂ ಮಾನ್ಯತೆ ನೀಡಿ ಕಾಸರಗೋಡಿನ ಕನ್ನಡ ಪದವೀಧರ ಶಿಕ್ಷಕ ವಿದ್ಯಾರ್ಥಿಗಳನ್ನು ಕಾಪಾಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+