ಲೋಕಾಯುಕ್ತ ರಾಜೀನಾಮೆ ವಾಪಸು ಬೇಡ: ಚಂಪಾ

ರಾಜೀನಾಮೆ ವಾಪಸು ಪಡೆಯಬೇಕೆಂದು ಒತ್ತಾಯಿಸುತ್ತಿರುವವರಲ್ಲಿ ಎರಡು ಬಗೆ: (1) ಹೋರಾಟದ ಒಂದು ಶಕ್ತಿಯೇ ಇಲ್ಲವಾದರೆ ಇನ್ನಾರು ಗತಿ? ಎಂಬ ಆತಂಕ ಹಾಗೂ ನೋವಿನಲ್ಲಿರುವ ಸಾಮಾನ್ಯ ಜನತೆ ಮತ್ತು ಜನಪರ ಚಳವಳಿಗಾರರು.
2) ಹೆಗಡೆಯವರು ಹೇಗಾದರೂ ಆ ಸ್ಥಾನಕ್ಕೆ ಮರಳಿ ಬರುವಂತಾಗಿ, ಯಥಾ ಸ್ಥಿತಿ (ಸ್ಟೇಟಸ್) ಹಾಗೆಯೇ ಮುಂದುವರಿಯಲಿ ಎಂದು ಒಳಗೊಳಗೇ ಹಾರೈಸುತ್ತಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಾಯಕರು.
ನನ್ನ ವೈಯಕ್ತಿಕ ಅಭಿಪ್ರಾಯ: ಎಂಥದ್ದೇ ಒತ್ತಡ ಬಂದರೂ ಸಂತೋಷ ಹೆಗಡೆಯವರು ರಾಜೀನಾಮೆ ವಾಪಸು ಪಡೆಯಬಾರದು ಮತ್ತು ಒಂದು ದಿಟ್ಟ ಹೆಜ್ಜೆಯನ್ನಿಟ್ಟ ಅವರು, ಅಲ್ಲಿಗೇ ನಿಲ್ಲದೆ, ಮುಂದಿನ ದಿಟ್ಟ ಹೆಜ್ಜೆ ಇಡಲು ಮುಂದಾಗಬೇಕು.
ಈ ಮಾತು ಬರೆಯುವಾಗ ಮೂವತ್ತೈದು ವರ್ಷಗಳ ಹಿಂದಿನ, ತುರ್ತು ಪರಿಸ್ಥಿತಿಯ (ಎಮರ್ಜೆನ್ಸಿ) ಆ ಕರಾಳ ದಿನಗಳ ನೆನಪು ನನಗೆ. ಜೇಪಿ ನೇತೃತ್ವದ ಆಂದೋಲನ ಒಂದು ನೆಲೆಯಲ್ಲಿ ಯಶಸ್ವಿಯಾಗಿ ಈ ದೇಶದಲ್ಲಿ ಮಹತ್ವದ ರಾಜಕೀಯ ಪಲ್ಲಟವನ್ನುಂಟು ಮಾಡಿದ್ದೇನೋ ನಿಜ.
ಆದರೆ, ಈ ಮೂರುವರೆ ದಶಕಗಳಲ್ಲಿ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅನೇಕ ಸ್ತರಗಳಲ್ಲಿ ಚಳವಳಿಗಳು (ರೈತ, ಕಾರ್ಮಿಕ, ದಲಿತ, ಕನ್ನಡ, ಮಹಿಳೆ, ಪರಿಸರ, ಕೋಮುವಾದ ವಿರೋಧಿ ಹೀಗೆ.) ನಡೆದಿವೆ.
ಆದರೆ, ನಾಯಕರ ಬಗ್ಗೆ ಜನ ವಿಶ್ವಾಸ ಕಳಕೊಂಡಿದಾಟಛಿರೆ. ಈ ಎಲ್ಲ ಚಳವಳಿಗಳ ಎಳೆಗಳನ್ನು ಜೋಡಿಸುತ್ತಲೇ ಸಮಗ್ರ ಆಂದೋಲನವೊಂದನ್ನು ರೂಪಿಸ ಬಲ್ಲ ಒಟ್ಟು ಪ್ರಾಮಾಣಿಕ ಜನ ನಾಯಕನಿಗಾಗಿ ಜನ ಕಾಯುತ್ತಿದ್ದಾರೆ.
ದೇಶದ ಎಲ್ಲೋ ಒಂದು ಕಡೆ ಕಿಡಿ ಹೊತ್ತಿದರೂ ಹಾಹಾ ಅನ್ನುವುದರೊಳಗೆ ಅದು ಸರ್ವವ್ಯಾಪಿಯಾಗಬಹುದಾದ ಸಾಧ್ಯತೆ ಈಗ ಇದೆ. ನ್ಯಾಯಮೂರ್ತಿ ಹೆಗಡೆಯವರು, ಅವರು ಮಾಡಲಿ ಇವರು ಮಾಡಲಿ ಅಂತ ಕಾಯದೆ ತಾವೇ ಈ ಕಾರ್ಯಕ್ಕೆ ಮುಂದಾಗಲಿ ಅಂತ ಹಾರೈಸುವೆ.
ಈಗ ಒದಗಿ ಬಂದಿರುವ ಈ ಐತಿಹಾಸಿಕ ಕ್ಷಣದಲ್ಲಿ ಅವರು ಸಾರಾಸಾರ ವಿಚಾರ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಿ. ಇಂಥದೊಂದು ಜನಾಂದೋಲನ ಪ್ರಾರಂಭವಾದರೆ ಸ್ವಯಂಸೇವಕನಾಗಲು ನಾನಂತೂ ಸಿದ್ಧ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications