ಜಾತಿ ಆಧಾರಿತ ಜನಗಣತಿ: ಬಂಟರು ಏನ್ನಂತಾರೆ?

ಏನೇ ಆಗಲಿ ಜಾತಿ-ಆಧಾರಿತ ಜನಗಣತಿಗೆ ಹೆಚ್ಚಿನ ಬೆಂಬಲ ಇರುವಂತೆ ಕಾಣುತ್ತಿದೆ. ಈ ಸಂದಿಗ್ಧ ವಿಷಯದ ಬಗ್ಗೆ ಇತರ ಜನಾಂಗದ ಮುಖಂಡರು ತಮ್ಮ - ತಮ್ಮ ಅಭಿಪ್ರಾಯಗಳನ್ನು ಈಗಾಗಲೇ ಮಂಡಿಸಿದ್ದರೂ ಬಂಟರ ಜನಾಂಗದ ಅಭಿಪ್ರಾಯಗಳೇನು ಎಂಬುದು ಸಮುದಾಯದ ವೇದಿಕೆಯಲ್ಲೆಲ್ಲೂ ಚರ್ಚೆಗೆ ಬಂದಿಲ್ಲ.
ಈಗ ಸರಿಯಾದ ಸಮಯ ಪರ-ವಿರೋಧ ವಿಷಯಗಳನ್ನು ಆಳವಾಗಿ ಚರ್ಚೆಗೆ ಒಳಪಡಿಸಲು. ಬಂಟರ ಜನಾಂಗದ ಸರಿಯಾದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳು ಈ ಜಾತಿಯಾಧಾರಿತ ಜನಗಣತಿಯಲ್ಲಿ ಬೆಳಕಿಗೆ ಬರಬಹುದು.
ಮೇಲಾಗಿ ಕ್ಷೀಣಿಸುತ್ತಿರುವ ಬಂಟ ಜನಾಂಗದ ಜನಸಂಖ್ಯೆ, ಶೇ.28ಗೂ ಮಿಕ್ಕಿ ಇದ್ದ ಬಂಟರ ಜನಸಂಖ್ಯೆ ಇಂದು ಶೇ.18ಗೆ ಇಳಿಯಲು ಕಾರಣಗಳೇನು ಎಂದು ಈಗಿನ ಸೆನ್ಸಸ್ನಲ್ಲಿ ಗೊತ್ತಾಗಬಹುದು. ತುಳುನಾಡಿನಲ್ಲಿ ಬಂಟರ ಜನಸಂಖ್ಯೆ ಇಳಿಕೆಗೆ ಮೇಲ್ನೋಟಕ್ಕೆ ಕಾಣುವ ಕಾರಣಗಳು. 1)ವಲಸೆ, 2) ಕುಟುಂಬ ನಿಯೋಜನೆ , 3) ಅಂತರ್ಜಾತಿ ವಿವಾಹ.
ವಲಸೆ : ಮೊದಲನೇ ವಿಶ್ವಮಹಾಯುದ್ಧದ ಸಮಯದಲ್ಲಿ ಅಂದರೆ 1911ರ ನಂತರತುಳುವರ ವರಸೆ ಮುಂಬಯಿಯತ್ತ ಶುರುವಾಯಿತು. 1950ರಿಂದ 1975 ರ ಮಧ್ಯೆ ಈ ಮುಂಬೈ ವಲಸೆ ಗರಿಷ್ಟ ಮಟ್ಟಕ್ಕೆ ತಲುಪಿ, ನಂತರ ಇಳಿಮುಖವಾಗಿ, ಕೊಲ್ಲಿ ರಾಷ್ಟ್ರಗಳ ಕಡೆ ಹಾಗೂ ಕರ್ನಾಟಕದ ಒಳನಾಡು ಮತ್ತು ಬೆಂಗಳೂರು ಕಡೆ ವಲಸೆ ಹೆಚ್ಚಿತು.
1990 ನಂತರ ಅಮೆರಿಕಾ, ಆಸ್ಟ್ರೇಲಿಯಾ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳ ಕಡೆಗೂ ವಲಸೆ ಶುರುವಾಯಿತು. ಇದರಿಂದಾಗಿ ತುಳುನಾಡಿನಲ್ಲಿ ಬಂಟರ ಜನಸಂಖ್ಯೆ ಕಡಿಮೆಯಾಗಿ ಗುತ್ತಿನ ಮನೆಗಳು ಭಣಗುಟ್ಟಿದವು. ಗದ್ದೆಗಳು ಬೀಳುಬಿದ್ದವು, ಕೆರೆ-ಕಟ್ಟೆಗಳು ಒಣಗಿದವು.
1975 ರ ನಂತರದ ಬಂಟರ ಹೊರವಲಸೆಗೆ ಇನ್ನೊಂದು ಮುಖ್ಯ ಕಾರಣ ಬಂಟರ ಜಾತಿಯ ನೆಲೆಯನ್ನೆ ಅಲ್ಲಾಡಿಸಿದ ಭೂಮಸೂದೆ. ಭೂಮಸೂದೆಯಿಂದಾಗಿ ತುಳುನಾಡಿನಲ್ಲಿ ನೆಲ ಕಚ್ಚಿದ ಬಂಟರ ಸಮಾಜ ಫೀನಿಕ್ಸ್ನಂತೆ ಮೇಲೆದ್ದಿದ್ದು ಮಾತ್ರ ಹೊರನಾಡಿನಲ್ಲಿ.
ಕುಟುಂಬ ಯೋಜನೆ : 1960ರ ನಂತರ ಬಂಟರ ಹೆಣ್ಣುಗಳಲ್ಲೂ ವಿದ್ಯಾರ್ಜನೆ ತೀವ್ರ ಹೆಚ್ಚಾಗಿ, ಬಂಟ ಹೆಣ್ಣುಗಳೂ ನೌಕರಿ-ಸ್ವ ಉದ್ಯೋಗಕ್ಕೆ ಮಹತ್ವ ಕೊಟ್ಟಿದ್ದರಿಂದ ತಮ್ಮ ಕುಟುಂಬವನ್ನು ಒಂದು ಅಥವಾ ಎರಡು ಮಕ್ಕಳಿಗೆ ಸೀಮಿತಗೊಳಿಸಿದರು.
ಹಲವು ಕಾರಣಗಳಿಂದ ಉದ್ಯೋಗದಲ್ಲಿರುವ ಹೆಣ್ಮಕ್ಕಳ ಮದುವೆಯೂ ತಡವಾಗಿ ಆಗುತ್ತಿತ್ತು. ಈ ಕಾರಣಗಳಿಂದಾಗಿ ಬಂಟರ ಜನಸಂಖ್ಯೆಯಲ್ಲಿ ಸ್ತಂಬನವುಂಟಾಯಿತು.
ಅಂತರ್ಜಾತಿ ವಿವಾಹ : 1980ಕ್ಕೆ ಮೊದಲು ಬಂಟರ ಹೆಣ್ಣುಗಳಲ್ಲಿ ಅಂತರ್ ಜಾತಿ ವಿವಾಹ ಅಪರೂಪವಾಗಿತ್ತು. ಎಲ್ಲೊ ಒಂದೆರಡು ಅಂತರ್ಜಾತಿ ವಿವಾಹವಾಗುತ್ತಿದ್ದವು. ಅದಕ್ಕೆ ಹೆತ್ತವರ ವಿರೋಧವೂ ಇದ್ದಿತು. ಈಗ ತಂದೆ - ತಾಯಿಗಳೇ ಎದುರು ನಿಂತು ಅಂತರ್ಜಾತಿ ವಿವಾಹಕ್ಕೆ ಧಾರೆಯೆರೆದು ಕೂಡುತ್ತಿದ್ದಾರೆ.
ಇನ್ನೊಂದು ಐದು ವರ್ಷಗಳಲ್ಲಿ ಇನ್ನೂ ಆಸೆಬುರುಕ ಹಿರಿಯರ ಮುಷ್ಟಿಯಲ್ಲಿರುವ 'ಬದಿಪ್ರಿಯ' ಬಂಟ ಹುಡುಗನಿಗೆ ಸ್ವಜಾತಿ ಹೆಣ್ಣು ಸಿಗುವುದೇ ದುಸ್ತರವಾಗಬಹುದು. ಇಂತಹದ್ದೇ ಸ್ಥಿತಿ ತುಳುನಾಡಿನ ಇನ್ನೂ ಕೆಲವು ಜಾತಿಗಳಲ್ಲಿ ಇದೆ. ಹಾಗಾಗಿ ಜಾತಿ ಆಧಾರಿತ ಜನಗಣತಿಯು ಇಂತಹಾ ಎಲ್ಲಾ ಜಾತಿಯೊಳಗಣ ವೈರುಧ್ಯಮಯ ಸ್ಥಿತಿ-ಗತಿಗಳಿಗೆ ಕನ್ನಡಿ ಹಿಡಿಯಬಹುದು.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications