ಸಿಇಟಿ ಗೊಂದಲನಿವಾರಿಸಿ; ರದ್ದಾಗುವುದು ಬೇಡ
ಈ ವರ್ಷ ಸಿಇಟಿ ಇರುವುದಿಲ್ಲವೆಂದು ವೈದ್ಯಕೀಯ ಸಚಿವರು ಹೇಳಿದರೆ, ಉನ್ನತ ಶಿಕ್ಷಣ ಸಚಿವರು ಮಾತ್ರ ಸಿಇಟಿ ಇದ್ದೇ ಇರುತ್ತದೆ. ಅದನ್ನು ಹುಬ್ಬಳ್ಳಿ, ಗುಲ್ಬರ್ಗಕ್ಕೂ ವಿಸ್ತರಿಸಲಾಗುವುದೆಂದು ಹೇಳಿದರು. ಎಲ್ಲರಿಗಿಂತ ಮೊದಲು ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕದಲ್ಲಿ ಸಿಇಟಿಯನ್ನು ಏಕೆ ಪ್ರಾರಂಭಿಸಲಾಯಿತು ಮತ್ತು ಅದರ ಪ್ರಯೋಜನಗಳೇನೆಂಬುದನ್ನು ಅರಿಯಬೇಕಾದ್ದು ಅತ್ಯಗತ್ಯ.
ಸಿಇಟಿಯಿಂದ ಯೋಗ್ಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗಿದೆ, ಆಗುತ್ತಿದೆ. ಪಿಯುಸಿ ಮತ್ತು ಸಿಇಟಿಯಲ್ಲಿ ಉತ್ತಮ ಅಂಕ ಪಡೆದವರು ಸಿಇಟಿ ಮೂಲಕವಷ್ಟೇ ವೃತ್ತಿಶಿಕ್ಷಣಕ್ಕೆ ಆಯ್ಕೆ ಆಗುತ್ತಾರೆ. ಸಿಇಟಿ ಇಲ್ಲದಿದ್ದರೆ, ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆಯಲು ಹಣ ಬಲ, ಅಧಿಕಾರ ಬಲ ಮತ್ತು ಭುಜ ಬಲವುಳ್ಳವರು ಅಕ್ರಮದಲ್ಲಿ ತೊಡಗಬಹುದು. ಸದ್ಯದ ವ್ಯವಸ್ಥೆಯಲ್ಲಿ ಅನ್ಯಾಯದ ಮೂಲಕ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದರೂ ಸಿಇಟಿಯಲ್ಲಿ ಅಂಥವರು ಗೋತಾ ಹೊಡೆಯುವುದು ಖಚಿತ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ವೃತ್ತಿಶಿಕ್ಷಣಕ್ಕೆ ಪ್ರವೇಶ ಸಿಗುತ್ತದೆ. ಹಣವಂತರು ಡೊನೇಶನ್ ಕೊಟ್ಟು ಪ್ರವೇಶ ಪಡೆಯುತ್ತಾರೆ.
ಸಿಇಟಿ ರದ್ದು ಮಾಡಿ, ಪಿಯುಸಿ ಅಂಕಗಳ ಮೆರಿಟ್ ಮೇಲೇ ಸೀಟು ಹಂಚಿದರೆ ಆಗಬಹುದಾದ ಕೆಲವು ಅನಾಹುತಗಳು ಈ ರೀತಿ ಇರುತ್ತವೆ.
1. ಪಿಯುಸಿ ಕಾಲೇಜುಗಳ ಹಿರಿಯ ಸಿಬ್ಬಂದಿಗಳ ಮಕ್ಕಳು ಅಥವಾ ಸಂಬಂಧಿಕರು ಖಾಸಗಿ ಕಾಲೇಜುಗಳಾಗಿದ್ದರೆ ಇವರನ್ನೊಳಗೊಂಡ ಧಣಿಗಳ ಮಕ್ಕಳು ಮತ್ತು ಸಂಬಂಧಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಪ್ರತ್ಯೇಕ ಕೋಣೆಯಲ್ಲಿ ಕೂಡಿಸಿ ಕಾಪಿ ಮಾಡಿಸುವುದು ಅಥವಾ ಉಪನ್ಯಾಸಕರೇ ಉತ್ತರ ಬರೆಯುವುದು
2. ಪ್ರತಿಭಾವಂತ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ತಮಗೆ ಬೇಕಾದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗೆ ಬದಲಾಯಿಸುವುದು.
3. ಪರೀಕ್ಷೆ ಬೋರ್ಡಿಗೆ ಹೋಗಿ ಭ್ರಷ್ಟ ಸಿಬ್ಬಂದಿಯನ್ನು ಒಳಹಾಕಿಕೊಂಡು ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿ ಕದಿಯುವುದು. ಇದನ್ನು ಕಾಲೇಜುಗಳಲ್ಲೂ ಮಾಡಬಹುದು.
4. ಅಂಕಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಅಕ್ರಮವಾಗಿ ಪಡೆಯಲು ಸಫಲವಾಗುವುದು.
5.ಉಪನ್ಯಾಸಕರು ತಮ್ಮ ಕಾಲೇಜುಗಳನ್ನು ಕಡೆಗಣಿಸಿ ಖಾಸಗಿ ಟ್ಯೂಷನ್ ಮೂಲಕ ಲಕ್ಷಾಂತರ ರುಪಾಯಿ ಗಳಿಸುವುದು, ಒತ್ತಡ ಬಂದರೆ ನೌಕರಿಯನ್ನೇ ಬಿಡುವುದು.
ಆದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ಸಿಇಟಿ ರದ್ದು ಪಡಿಸಬಾರದು. ಬದಲಿಗೆ ಸಿಇಟಿ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವತ್ತ ಗಮನ ಹರಿಸಬೇಕು.
-ಎಸ್. ಅಜ್ಮತುಲ್ಲಾ ಸಾಹೇಬ್, ದಾವಣಗೆರೆ
ಪೂರಕ ಓದಿಗೆ:
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications