ಸಿಇಟಿ ಗೊಂದಲನಿವಾರಿಸಿ; ರದ್ದಾಗುವುದು ಬೇಡ
ಈ ವರ್ಷ ಸಿಇಟಿ ಇರುವುದಿಲ್ಲವೆಂದು ವೈದ್ಯಕೀಯ ಸಚಿವರು ಹೇಳಿದರೆ, ಉನ್ನತ ಶಿಕ್ಷಣ ಸಚಿವರು ಮಾತ್ರ ಸಿಇಟಿ ಇದ್ದೇ ಇರುತ್ತದೆ. ಅದನ್ನು ಹುಬ್ಬಳ್ಳಿ, ಗುಲ್ಬರ್ಗಕ್ಕೂ ವಿಸ್ತರಿಸಲಾಗುವುದೆಂದು ಹೇಳಿದರು. ಎಲ್ಲರಿಗಿಂತ ಮೊದಲು ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕದಲ್ಲಿ ಸಿಇಟಿಯನ್ನು ಏಕೆ ಪ್ರಾರಂಭಿಸಲಾಯಿತು ಮತ್ತು ಅದರ ಪ್ರಯೋಜನಗಳೇನೆಂಬುದನ್ನು ಅರಿಯಬೇಕಾದ್ದು ಅತ್ಯಗತ್ಯ.
ಸಿಇಟಿಯಿಂದ ಯೋಗ್ಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗಿದೆ, ಆಗುತ್ತಿದೆ. ಪಿಯುಸಿ ಮತ್ತು ಸಿಇಟಿಯಲ್ಲಿ ಉತ್ತಮ ಅಂಕ ಪಡೆದವರು ಸಿಇಟಿ ಮೂಲಕವಷ್ಟೇ ವೃತ್ತಿಶಿಕ್ಷಣಕ್ಕೆ ಆಯ್ಕೆ ಆಗುತ್ತಾರೆ. ಸಿಇಟಿ ಇಲ್ಲದಿದ್ದರೆ, ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಪಡೆಯಲು ಹಣ ಬಲ, ಅಧಿಕಾರ ಬಲ ಮತ್ತು ಭುಜ ಬಲವುಳ್ಳವರು ಅಕ್ರಮದಲ್ಲಿ ತೊಡಗಬಹುದು. ಸದ್ಯದ ವ್ಯವಸ್ಥೆಯಲ್ಲಿ ಅನ್ಯಾಯದ ಮೂಲಕ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದರೂ ಸಿಇಟಿಯಲ್ಲಿ ಅಂಥವರು ಗೋತಾ ಹೊಡೆಯುವುದು ಖಚಿತ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ವೃತ್ತಿಶಿಕ್ಷಣಕ್ಕೆ ಪ್ರವೇಶ ಸಿಗುತ್ತದೆ. ಹಣವಂತರು ಡೊನೇಶನ್ ಕೊಟ್ಟು ಪ್ರವೇಶ ಪಡೆಯುತ್ತಾರೆ.
ಸಿಇಟಿ ರದ್ದು ಮಾಡಿ, ಪಿಯುಸಿ ಅಂಕಗಳ ಮೆರಿಟ್ ಮೇಲೇ ಸೀಟು ಹಂಚಿದರೆ ಆಗಬಹುದಾದ ಕೆಲವು ಅನಾಹುತಗಳು ಈ ರೀತಿ ಇರುತ್ತವೆ.
1. ಪಿಯುಸಿ ಕಾಲೇಜುಗಳ ಹಿರಿಯ ಸಿಬ್ಬಂದಿಗಳ ಮಕ್ಕಳು ಅಥವಾ ಸಂಬಂಧಿಕರು ಖಾಸಗಿ ಕಾಲೇಜುಗಳಾಗಿದ್ದರೆ ಇವರನ್ನೊಳಗೊಂಡ ಧಣಿಗಳ ಮಕ್ಕಳು ಮತ್ತು ಸಂಬಂಧಿಕ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಪ್ರತ್ಯೇಕ ಕೋಣೆಯಲ್ಲಿ ಕೂಡಿಸಿ ಕಾಪಿ ಮಾಡಿಸುವುದು ಅಥವಾ ಉಪನ್ಯಾಸಕರೇ ಉತ್ತರ ಬರೆಯುವುದು
2. ಪ್ರತಿಭಾವಂತ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ತಮಗೆ ಬೇಕಾದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗೆ ಬದಲಾಯಿಸುವುದು.
3. ಪರೀಕ್ಷೆ ಬೋರ್ಡಿಗೆ ಹೋಗಿ ಭ್ರಷ್ಟ ಸಿಬ್ಬಂದಿಯನ್ನು ಒಳಹಾಕಿಕೊಂಡು ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿ ಕದಿಯುವುದು. ಇದನ್ನು ಕಾಲೇಜುಗಳಲ್ಲೂ ಮಾಡಬಹುದು.
4. ಅಂಕಪಟ್ಟಿಯಲ್ಲಿ ಹೆಚ್ಚು ಅಂಕಗಳನ್ನು ಅಕ್ರಮವಾಗಿ ಪಡೆಯಲು ಸಫಲವಾಗುವುದು.
5.ಉಪನ್ಯಾಸಕರು ತಮ್ಮ ಕಾಲೇಜುಗಳನ್ನು ಕಡೆಗಣಿಸಿ ಖಾಸಗಿ ಟ್ಯೂಷನ್ ಮೂಲಕ ಲಕ್ಷಾಂತರ ರುಪಾಯಿ ಗಳಿಸುವುದು, ಒತ್ತಡ ಬಂದರೆ ನೌಕರಿಯನ್ನೇ ಬಿಡುವುದು.
ಆದ್ದರಿಂದ ಸರ್ಕಾರ ಯಾವುದೇ ಕಾರಣಕ್ಕೂ ಸಿಇಟಿ ರದ್ದು ಪಡಿಸಬಾರದು. ಬದಲಿಗೆ ಸಿಇಟಿ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವತ್ತ ಗಮನ ಹರಿಸಬೇಕು.
-ಎಸ್. ಅಜ್ಮತುಲ್ಲಾ ಸಾಹೇಬ್, ದಾವಣಗೆರೆ
ಪೂರಕ ಓದಿಗೆ:
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications