ಭಯದ ಬೇರು ಯಾವುದು? ಇವರಿಗೇಕೆ ಅಷ್ಟೊಂದು ಭಯ?
ಭಯ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿರುವಂತಹ ಮನದ ಸ್ಥಿತಿ. ಎಲ್ಲರಿಗೂ ಈ ಮನದ ಸ್ಥಿತಿ ಹೇಗೋ ಏನೋ ಕಾಣಿಸಿಕೊಂಡಿರುತ್ತದೆ. ಹಸುಗೂಸಿನಿಂದ ಹಿಡಿದು ಮರಣದ ಹಾಸಿಗೆಯಲ್ಲಿರುವ ವೃದ್ಧನಿಗೂ ಇದು ಕಾಡಿಸುವಂತಹ ಒಂದು ಮನೋಸ್ಥಿತಿ.
ಹೀಗಾಗಿ ಇದು ಎಲ್ಲರಿಗೂ ಅನುಭವದ ಮೂಲಕವೇ ತಿಳಿದಿರುವುದರಿಂದ ಭಯ ಎಂದು ಹೇಳುವ ವ್ಯಕ್ತಿಯ ಮನದಲ್ಲಿ ಆಗುತ್ತಿರುವ ಸಂಕಟವೋ, ಗೊಂದಲವೋ ಕೇಳಿಸಿಕೊಳ್ಳುವ ವ್ಯಕ್ತಿಗೆ ತಿಳಿದು ಬಿಡುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಭಯ. ಕೆಲವರಿಗಂತೂ ವಿಧವಿಧವಾದ ಭಯಗಳು: ಪರೀಕ್ಷೆಯ ಸಮಯದಲ್ಲಿ ಪಾಸು/ಫೇಲಿನ ಭಯ; ನೂತನ ವಧುವರರಿಗೆ ದಾಂಪತ್ಯದ ಭಯ. ಪೋಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಭಯ. ಹಾಗೆಯೇ ಪೋಲಿಸರ ಭಯ, ಕಳ್ಳರ ಭಯ, ದೇವರ ಭಯ. ದೆವ್ವಗಳ ಭಯ, ಎಲ್ಲವೂ ಭಯಮಯವಾಗಿರುವಂತಹವರೂ ನಮ್ಮೊಡನೆ ಇರುತ್ತಾರೆ. ಅದೆಷ್ಟು ಮನೋರೋಗಗಳ ಲಕ್ಷಣಗಳಲ್ಲಿ ಭಯವೂ ಸೇರಿರುತ್ತದೆ. ಇದೆಲ್ಲದರ ಜೊತೆ ಪ್ರಾಣಿಗಳಲ್ಲಿಯೂ ಭಯವೆನ್ನುವ ಸ್ಥಿತಿ ಸಾಮಾನ್ಯ. ಹಾಗೇ ಹೇಳುವುದಾದರೇ ಆನೆಗೂ ಭಯ, ಆಮೆಗೂ ಭಯ ಬಿಟ್ಟಿದ್ದಿಲ್ಲ. ಮುಂದೆ ಓದಿ...

ಭಯದ ಬಗ್ಗೆ ಮನೋವಿಜ್ಞಾನಿಗಳ ವಿಶ್ಲೇಷಣೆ
ಇಷ್ಟೆಲ್ಲಾ ಹೇಳಿದ ಭಯವನ್ನು ಭಯದಿಂದಲೇ ನೋಡುವುದೂ ಇರಬಹುದು. ನಾನು ಹೇಳುತ್ತಿರುವುದು ತಪ್ಪಾಗಿ ಬಿಟ್ಟರೆ ಎನ್ನುವ ಭಯವೂ ಇರಬಲ್ಲದು. ಹೀಗಾಗಿ ಭಯಕ್ಕೆ ಮೂಲ ಯಾವುದು, ಕೊನೆ ಯಾವುದು ಎನ್ನುವುದನ್ನು ತಿಳಿಯಲು ಮನೋವಿಜ್ಞಾನಿಗಳು ನಡೆಸಿದ ಪ್ರಯೋಗ, ಪ್ರಯತ್ನಗಳು ಒಳ್ಳೆಯ ಫಲಿತಾಂಶವನ್ನೇ ನೀಡಿದೆ. ಇದರಿಂದ ಭಯವನ್ನು ನಿವಾರಿಸುವುದು, ಸುಧಾರಿಸುವುದು ಅಥವಾ ನಿರ್ಭಯದಿಂದ ಇರುವುದು ಹೇಗೆನ್ನುವುದನ್ನು ತಿಳಿಸುವುದು ಮನೋವಿಜ್ಞಾನಿಗಳಿಗೆ ಗೊತ್ತಿದೆ.

ಹುಟ್ಟಿನೊಂದಿಗೇ ಹುಟ್ಟುತ್ತದೆ ಭಯ
ಭಯ ಹುಟ್ಟುವುದು ಹುಟ್ಟಿನೊಂದಿಗೆ ಎನ್ನುವ ಮಾತಂತೂ ನಿಜವೇ. ಭಯದ ಮೂಲಕ ಯಾವುದೋ ಒಂದು ವಿಷಯ, ಸನ್ನಿವೇಶದ ಬಗ್ಗೆ ಅಸ್ಪಷ್ಟತೆ ಇದೆ ಎನ್ನುವುದು ತಿಳಿದುಬರುತ್ತದೆ. ಮುಖ್ಯವಾಗಿ ಭಯ ಎನ್ನುವ ಮನದ ಸ್ಥಿತಿಗೆ ಭಯವಿರದ ಇನ್ನೊಂದು ಮನದ ಸ್ಥಿತಿಯೂ ಕಾರಣ. ಭಯದ ನಿವಾರಣೆಗೆ ಎಚ್ಚರಿಗೆ, ತಿಳಿವಳಿಕೆ ಬೇಕು. ಇದು ಪಕ್ಷಿಯೊಂದರ ರೆಕ್ಕೆಪುಕ್ಕ ಇದ್ದಹಾಗೆ. ಭಯ ಹಾರಿಹೋಗುವುದಕ್ಕೆ ಇದು ಬೇಕೇಬೇಕು.

ಭಯ ನಿವಾರಣೆಗೆ ಬೃಹನ್ಮತಿ ಮನೋತಂತ್ರಗಳ ಅಭ್ಯಾಸ
ಭಯವನ್ನು ನಿವಾರಿಸುವ ಸುಲಭ ವಿಧಾನವೆಂದರೆ ಬೃಹನ್ಮತಿ ಮನೋತಂತ್ರಗಳನ್ನು ಅಭ್ಯಾಸ ಮಾಡಿಕೊಳ್ಳುವುದು. ಇದನ್ನೀಗ ಉದಾಹರಣೆಯೊಂದಿಗೆ ವಿವರಿಸುವೆ: ಮದುವೆಯಾಗಿ ಹತ್ತಾರು ವರ್ಷ ಕಳೆದಿದ್ದೂ ದಾಂಪತ್ಯದ ಹಿತವಿದ್ದರೂ ಮಗುವಾಗಲಿಲ್ಲವೆನ್ನುವ ಚಿಂತೆ ದಂಪತಿಗಳಿಬ್ಬರ ಸುಖ ಜೀವನದಲ್ಲಿ ಇಲ್ಲಸಲ್ಲದ ಆಲೋಚನೆಗಳನ್ನು ಹುಟ್ಟಿಸಿತು. ಇನ್ನು ಆಲೋಚನೆಗಳೆಂದರೆ ಸುಮ್ಮನೆಯೇ? ಒಂದು ಒಳ್ಳೆಯ ಆಲೋಚನೆ ಹುಟ್ಟಿದರೆ ಸಾಕು ಅದನ್ನು ಕೆಡಿಸುವ ಹತ್ತಾರು ಆಲೋಚನೆಗಳು ತಾ ಮುಂದೆ ನಾ ಮುಂದೆ ನುಗ್ಗಿ ಬರುತ್ತವೆ. ಈ ದಂಪತಿಗಳಿಗೆ ಆಗಿದ್ದೂ ಇದೇ. ಮೊದಲು ಅವರು ಮಾಡಿದ್ದೇನೆಂದರೆ ವೈದ್ಯರ ಸಲಹೆ, ತಪಾಸಣೆ, ಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದು. ಇವರ ಇಷ್ಟದಂತೆ ಅವುಗಳೇನು ತಕ್ಷಣದಲ್ಲಿ ಫಲ ನೀಡಲಿಲ್ಲ. ಈಗ ಶುರುವಾಯಿತು, ಒಬ್ಬರನ್ನೊಬ್ಬರು ನಿಂದಿಸುವುದು, ಅದರ ಜೊತೆ ವಾತ್ಯಲ್ಯದ ಕೊರತೆಯೂ ಜೊತೆಗೆ ತಗುಲಿಕೊಂಡಿತು. ಇಂದರಿಂದ ಹುಟ್ಟಿಕೊಂಡಿದ್ದು ಅರಸಿಕತೆ ಮತ್ತು ಸಂದೇಹದ ಮನದ ಸ್ಥಿತಿ. ಇವೆಲ್ಲಾ ಒಟ್ಟಾಗಿ ಸೇರಿಕೊಂಡು ಒಬ್ಬರನ್ನೊಬ್ಬರು ದೂಷಿಸಿಕೊಳ್ಳುವ ಭಯ ಹೆಚ್ಚಾಯಿತು.

ಭಯವಿದೆ ಎನ್ನುವುದು ಬಯಲಾಗಲಿಲ್ಲ
ಭಯವಿದೆ ಎನ್ನುವುದನ್ನಂತೂ ಇಬ್ಬರು ಬಯಲು ಮಾಡಕೊಳ್ಳಲಿಲ್ಲ. ಒಂದೇ ಮಂಚದಲ್ಲಿರಬೇಕಾದವರು ಒಬ್ಬರಿಂದೊಬ್ಬರು ದೂರ ಸರಿದರು. ಮುಂದೇನು ಎನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಆದರೆ ಅವರಿಬ್ಬರಲ್ಲಿದ್ದ ಭಯವೇ ಈ ಬೇರೆ ಬೇರೆ ಮನೋಸ್ಥಿತಿಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ ಮಾಡಿದ್ದು ಎನ್ನುವುದು ಅವರಿಗೂ ಸೇರಿದಂತೆ ಹಿತೈಷಿಗಳಿಗೂ ತಿಳಿಯದಂತಾದದ್ದು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications