ನಾವಿಕ ಸಮ್ಮೇಳನದಲ್ಲಿ ನಿರುಪಮಾ, ರಾಜೇಂದ್ರ ನರ್ತನ
ಬೋಸ್ಟನ್ನ ಮಂದಾರ ನ್ಯೂ ಇಂಗ್ಲೆಂಡ್ ಕನ್ನಡ ಕೂಟ ಮತ್ತು ಕನೆಕ್ಟಿಕಟ್ನ ಹೊಯ್ಸಳ ಕನ್ನಡ ಕೂಟದ ಸಹಯೋಗದಲ್ಲಿ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ಬೋಸ್ಟನ್ನಲ್ಲಿ ನಡೆಯಲಿರುವ 2ನೇ ನಾವಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ಬಾರಿಗಿಂದ ಇನ್ನೂ ಉತ್ತಮವಾಗಿ ಮಾಡಬೇಕೆಂಬ ಹುಮ್ಮಸ್ಸಿನಿಂದ ಸಮರೋಪಾದಿಯಲ್ಲಿ ಸಿದ್ಧತೆಗಳು ನಡೆದಿವೆ.
ಇದರ ಜೊತೆಗೆ ಸಮ್ಮೇಳನಕ್ಕೆ ಬರಲಿರುವ ಗಣ್ಯರ ಪಟ್ಟಿಯೂ ಸಿದ್ಧವಾಗುತ್ತಿದೆ. ಹಲವಾರು ಸಾಹಿತಿಗಳು ಸಮ್ಮೇಳನಕ್ಕೆ ಮೆರುಗು ತರಲಿದ್ದರೆ, ನಟರು, ಕಲಾವಿದರು ಅಮೆರಿಕನ್ನಡಿಗರನ್ನು ರಂಜಿಸಲು ಕರ್ನಾಟಕದಿಂದ ಪಯಣ ಬೆಳಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ನಾಟಕಕಾರ ಗಿರೀಶ್ ಕಾರ್ನಾಡ್ ಅವರು ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಲಿರುವುದು ಖಚಿತವಾಗಿದೆ.
ಕರ್ನಾಟಕದಿಂದ ಅಮೆರಿಕದ ಬೋಸ್ಟನ್ನಿಗೆ ಹಾರಲಿರುವ ಕಲಾವಿದರ ಪಟ್ಟಿ ದೊಡ್ಡದಾಗಿಯೇ ಇದೆ. ಇವರಲ್ಲಿ ನಟರಿದ್ದಾರೆ, ಸಂಗೀತಗಾರರಿದ್ದಾರೆ, ನೃತ್ಯಪಟುಗಳಿದ್ದಾರೆ, ಹಾಸ್ಯ ಕಲಾವಿದರಿದ್ದಾರೆ, ಅತಿಥಿ ಕಲಾವಿದರೂ ಹಲವರಿದ್ದಾರೆ. ಇವರಲ್ಲಿ ಅಮೆರಿಕನ್ನಡಿಗರು ಅತ್ಯುತ್ಸಾಹದಿಂದ ಕಾಯುತ್ತಿರುವ ಕಲಾವಿದರೆಂದರೆ ಬೆಂಗಳೂರಿನಲ್ಲಿ ಅಭಿನವ ಡಾನ್ಸ್ ಕಂಪನಿ ನಡೆಸುತ್ತಿರುವ ನಿರುಪಮಾ ಮತ್ತು ರಾಜೇಂದ್ರ ನೃತ್ಯಕಲಾವಿದರ ಜೋಡಿ.

ಇವರು ಅಭಿನವ ಡಾನ್ಸ್ ಕಂಪನಿಯನ್ನು ಸ್ಥಾಪಿಸಿದ್ದು 1994ರಲ್ಲಿ. ಕಂಪನಿಯ ಕಲಾ ನಿರ್ದೇಶಕರಾಗಿರುವ ಇವರು ನೃತ್ಯಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ, ಸಾವಿರಾರು ನೃತ್ಯ ಸಂಯೋಜನೆಯನ್ನೂ ಮಾಡಿ ವಿಶ್ವದಾದ್ಯಂತ ಹಲವಾರು ನೃತ್ಯ ಪ್ರದರ್ಶನಗಳನ್ನು ನೀಡಿ ಭೇಷ್ ಅನ್ನಿಸಿಕೊಂಡಿದ್ದಾರೆ. 5 ಉಪಖಂಡಗಳಲ್ಲಿ ಪ್ರದರ್ಶನ ನೀಡಿರುವ ಇವರಿಬ್ಬರ ನೃತ್ಯ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ನೃತ್ಯ ಪ್ರವೀಣ ರಾಜೇಂದ್ರ ಮತ್ತು ನೃತ್ಯ ಮಯೂರಿ ನಿರುಪಮಾ ಎಂಬ ಬಿರುದನ್ನು, ಆರ್ಯಭಟ ಅತ್ಯುತ್ತಮ ನೃತ್ಯಪಟು ಎಂಬ ಪ್ರಶಸ್ತಿ, ರಾಜ್ಯ ಸರಕಾರದಿಂದ ಕರ್ನಾಟಕ ಕಲಾಶ್ರೀ 2011 ಪ್ರಶಸ್ತಿ, ವಿದೇಶಗಳಲ್ಲಿಯೂ ಹಲವಾರು ಪ್ರಶಸ್ತಿ, ಬಿರುದು ಬಾವಲಿಗಳನ್ನು ಈ ನೃತ್ಯಜೋಡಿ ಪಡೆದುಕೊಂಡಿದೆ. ಇಂಥ ಪ್ರತಿಭಾವಂತರ ನೃತ್ಯ ನೋಡಲು ಅಮೆರಿಕನ್ನರು ಕಾತುರದಿಂದ ಕಾಯುತ್ತಿರುವುದು ಸುಳ್ಳಲ್ಲ.
ಈ ಕನ್ನಡ ಹಬ್ಬಕ್ಕೆ ನೋಂದಣಿ ಕೂಡ ಭರದಿಂದ ಸಾಗಿದೆ. ಸಮ್ಮೇಳನದಲ್ಲಿ ಗಿರೀಶ್ ಕಾರ್ನಾಡ್, ಡಾ. ಚಂದ್ರಶೇಖರ ಕಂಬಾರ ಅವರಂಥ ಘಟಾನುಘಟಿಗಳು ಭಾಗವಹಿಸುತ್ತಿರುವುದರಿಂದ ನೋಂದಾವಣಿಗೂ ಭಾರೀ ಬೇಡಿಕೆ ಬಂದಿದೆ ಎನ್ನುತ್ತಾರೆ ಆಯೋಜಕರು. ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಭಾಗವಹಿಸುವ ನಿರೀಕ್ಷೆಯಿದೆ. ಕೂಡಲೆ ನೋಂದಣಿ ಮಾಡಿಕೊಂಡವರಿಗೆ ರಿಯಾಯಿತಿ ಕೂಡ ದೊರೆಯುತ್ತದೆ.
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications