ಅಮೆರಿಕ ನ್ಯೂಸ್ ನೆಟ್ವರ್ಕ್ ಸಮೀಕ್ಷೆಯ ಹೈಲೈಟ್ಸ್

ನಿನ್ನೆ ಮೊನ್ನೆ ಜನಿಸಿದ ನಾವಿಕ' ಸಂಸ್ಥೆಗೆ ಮೂವತ್ತೈದು ಲಕ್ಷ ರು. ಅನುದಾನ ಕೊಟ್ಟ ಅಳುಕನ್ನು ತೊಳೆದುಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅಕ್ಕ ಸಮ್ಮೇಳನಕ್ಕೆ 45 ಲಕ್ಷ ರುಪಾಯಿಗಳ ಅನುದಾನ ಬಿಡುಗಡೆ ಮಾಡಿದೆ. ಈ ಇಲಾಖೆಯಿಂದ ಎಂದೂ ಹಣ ಬಯಸದ ಅಕ್ಕ ಸಂಸ್ಥೆಗೆ ಈ ಹಣ ಸಹಾಯ ಮುಳುವಾಯಿತಷ್ಟೇ ಅಲ್ಲ ಅಮೆರಿಕನ್ನಡಿಗರ ಸ್ವಾಭಿಮಾನಕ್ಕೆ ವಿನಾಕಾರಣ ಧಕ್ಕೆ ಉಂಟುಮಾಡಿತು ಎಂದು ಅಟ್ಲಾಂಟಾದಲ್ಲಿರುವ ಕಣ್ಣಿನ ವೈದ್ಯರೊಬ್ಬರು ನಮ್ಮ ವಾರ್ತಾವಾಹಿನಿಗೆ ದೂರವಾಣಿ ಮೂಲಕ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಅಕ್ಕ ಸಂಸ್ಥೆಯ ಮುಂದಿನ ಹೆಜ್ಜೆಗಳು ಹೇಗಿರಬೇಕು ಎಂಬುದರ ಕುರಿತು ಬುಧವಾರ (ಸೆ.8) ಸಂಜೆ ವಾಷಿಂಗ್ಟನ್ನಲ್ಲಿ ಹಿರಿಯ ಅಮೆರಿಕನ್ನಡಿಗರ ಒಂದು ಅನೌಪಚಾರಿಕ ಸಭೆ ಏರ್ಪಾಟಾಗಿತ್ತು. ಇನ್ನು ಮುಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಮ್ಮೇಳನ ನಡೆಯುವವರು ಚಿಕ್ಕಾಸನ್ನೂ ಪಡೆಯಬಾರದೆಂದು ಸಭೆ ಒಕ್ಕೊರಲಿನ ಅಭಿಪ್ರಾಯಕ್ಕೆ ಬಂದಿತೆಂದು ಸಭೆಯಲ್ಲಿ ಪಾಲ್ಗೊಂಡಿದ್ದ ಗದ್ಯ ಲೇಖಕರೊಬ್ಬರು ಹೇಳಿದರು.
ಇದೇ ಸ್ವರೂಪದ ಇನ್ನೊಂದು ಸಭೆ ಸೆಪ್ಟೆಂಬರ್ 9ರ ಗುರುವಾರ ಸಂಜೆ ಡೆಲವೇರ್ನಲ್ಲಿಯೂ ನಡೆಯಿತು. ನಿಸ್ಸಂದೇಹವಾಗಿ ಸಮ್ಮೇಳನ ಯಶಸ್ವಿಯಾಯಿತು ಎಂಬ ಧನ್ಯತಾಭಾವ ನಮಗಿದೆ. ರಾಜ್ಯ ಸರಕಾರದ ಅಧಿಕಾರಿಯೊಬ್ಬರು ತಮ್ಮ ಪ್ರಕಟಿತ ಕಥಾಸಂಕಲನದ 2500 ಪ್ರತಿಗಳನ್ನು ಮುದ್ರಿಸಿ ಅಕ್ಕ ಸಂಸ್ಥೆ ಸಮ್ಮೇಳನ ಪ್ರತಿನಿಧಿಗಳಿಗೆ ಉಚಿತವಾಗಿ ಹಂಚಬೇಕೆಂಬ ಬೇಡಿಕೆಯಿಟ್ಟಿದ್ದರು. ಸಾಧ್ಯವೂ ಅಲ್ಲದ ಸಾಧುವೂ ಅಲ್ಲದ ಈ ಬೇಡಿಕೆಯನ್ನು ಅಕ್ಕ ಸಾರಾಸಗಟಾಗಿ ತಳ್ಳಿಹಾಕಿದ್ದರಿಂದಾಗಿ ಅಕ್ಕಳ ಗಾಜಿನಮನೆಯ ಮೇಲೆ ಕಲ್ಲುತೂರಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಸಭೆ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಮುಂದೆ ಓದಿ : ರಮ್ಯಾ ಐಂದ್ರಿತಾ ಪಂದ್ಯಕ್ಕೆ ಪುನೀತ್ ಅಂಪೈರ್ »
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications