ರಮ್ಯಾ ಐಂದ್ರಿತಾ ಪಂದ್ಯಕ್ಕೆ ಪುನೀತ್ ಅಂಪೈರ್

ಕರ್ನಾಟಕದ ಮುಖ್ಯಮಂತ್ರಿಯವರ ಸಂದರ್ಶನವನ್ನೂ ಹದಿನೈದು ನಿಮಿಷಗಳಲ್ಲೇ ಪಡೆಯಬಲ್ಲಂಥ ವರ್ಚಸ್ಸುಳ್ಳ ಅಕ್ಕ ಧುರೀಣ ಅಮರನಾಥ ಗೌಡರಿಗೂ ಇದರ ಬಿಸಿ ತಟ್ಟದೇ ಬಿಡಲಿಲ್ಲ. ರಮ್ಯಾ ಅವರನ್ನು ಭೇಟಿ ಮಾಡಿ ಮಾತನಾಡಿಸುವುದಕ್ಕೆ ಅಮರನಾಥ ಗೌಡರು ರೆನೈಸಾನ್ಸ್ ಹೋಟೆಲ್ನ ಲಾಬಿಯಲ್ಲಿ ಕನಿಷ್ಠ ನಲವತ್ತೈದು ನಿಮಿಷ ಕಾಯಬೇಕಾಯಿತು. ಸಮ್ಮೇಳನದ ಸಾಂಸ್ಕೃತಿಕ ಸಮಿತಿಯವರು ರಮ್ಯಾ ಮನವೊಲಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿ ಅಂತಿಮವಾಗಿ ರಮ್ಯಾ ನ್ಯೂಯಾರ್ಕ್ಗೆ ಹಾರಿದರೆ ಇತ್ತ ಐಂದ್ರಿತಾ ರೇ ಹಳೇಕಬ್ಬಿಣ ಹಳೇಪೇಪರ್... ಹಾಡಿಗೆ ಮುಖ್ಯವೇದಿಕೆಯಲ್ಲಿ ಸೊಂಟ ಬಳುಕಿಸುತ್ತಿದ್ದರು.
ಈ ರಂಪಾಟವನ್ನು ಖುದ್ದಾಗಿ ಕಂಡ ಪುನೀತ್ ರಾಜಕುಮಾರ್ ಅವರಿಗೆ ಬಲುಬೇಸರವಾಯಿತಂತೆ. "ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಬೆಂಗಳೂರಿನಲ್ಲಿ ಬಗೆಹರಿಸಿಕೊಳ್ಳಬೇಕು. ಅಮೆರಿಕದ ಕನ್ನಡ ಸಮ್ಮೇಳನದಲ್ಲಿ ಅಲ್ಲ" ಎಂದು ಅವರು ಕಡ್ಡಿ ಮುರಿದಂತೆ ಹೇಳಿದರು. ಪುನೀತ್ ಅವರ ಸಮಯಪ್ರಜ್ಞೆ ಮತ್ತು ಸಂತುಲನಭರಿತ ನಿಲುವನ್ನು ಕಂಡ ಅಕ್ಕ ಅಧಿಕಾರಿಗಳು ಬೆರಗಾದರು ಎಂದು ಅಲ್ಲಿ ಉಪಸ್ಥಿತರಿದ್ದ ನಮ್ಮ ಸ್ವಂತ ಸುದ್ದಿಗಾರರು ದೂರವಾಣಿ ಮುಖೇನ ತಿಳಿಸಿದರು.
ಸಮ್ಮೇಳನದ ಕೊನೆಯ ದಿನ ರಾತ್ರಿ ಜರುಗಿದ ರಸಮಂಜರಿ ಕಾರ್ಯಕ್ರಮದಲ್ಲಿ ವಿಜಯ ರಾಘವೇಂದ್ರ ಮತ್ತು ಶ್ರೀಮುರಳಿಯವರ ನೃತ್ಯಕ್ಕೆ ಇಡೀ ಸಭೆ ಆಗಾಗ ಎದ್ದು ಕುಣಿಯಿತು. ನವರಸನಾಯಕ ಜಗ್ಗೇಶ್ ಮಾತನಾಡಲು ವೇದಿಕೆಗೆ ಬಂದಾಗ ಸಭೆ ಅವರನ್ನು ಶಿಳ್ಳೆಚಪ್ಪಾಳೆಗಳಿಂದ ಸ್ವಾಗತಿಸಿತು. ಕನ್ನಡಿಗರು ಕನ್ನಡ ಸಿನೆಮಾ ನೋಡುವ ಸಂಕಲ್ಪ ತೊಡಬೇಕೆಂದು ತಮ್ಮ ಎಂದಿನ ನಗೆಚಟಾಕಿಗಳಿಂದ ಜಗ್ಗೇಶ್ ಅನಿವಾಸಿ ಕನ್ನಡಿಗರಿಗೆ ಕರೆಕೊಟ್ಟರೆ ಅವರ ಶಿಷ್ಯ ಸಾಧುಕೋಕಿಲ ಸಿಡಿಸಿದ ಚಿಲ್ಲರೆ ಜೋಕು ನಾಲ್ಕುಸಾವಿರ ಮಂದಿ ತುಂಬಿದ ಸಭೆಯನ್ನು ಅಣಕಿಸಿತು.
ಸಮ್ಮೇಳನದ ಫಲಶ್ರುತಿಯನ್ನು ಅರಿಯಲು ನಮ್ಮ ವಾರ್ತಾವಾಹಿನಿ ಕೈಗೊಂಡ ಸಮೀಕ್ಷೆಯ ಇನ್ನಿತರ ಫಲಿತಾಂಶಗಳು ಇಂತಿವೆ.
ಮುಂದೆ ಓದಿ : ವಾರ್ತಾವಾಹಿನಿ ಸಮೀಕ್ಷೆಯ ಇನ್ನಿತರ ಫಲಿತಾಂಶ »
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications