ಅಕ್ಕ ನೆನಪಿಗಾಗಿ ಲಹರಿ ಸಂಗೀತ ಸುಧೆ

ಅಕ್ಕ ನೆನಪಿಗಾಗಿ ಲಹರಿ ರೆಕಾರ್ಡಿಂಗ್ ಕಂಪನಿ ಕನ್ನಡ ಸುಮಧುರ ಗೀತೆಗಳ ಗುಚ್ಛವನ್ನು ಹೊರತರುತ್ತಿದೆ. ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಮೊದಲ ದಿನವೇ ಅಂದರೆ ಸೆಪ್ಟೆಂಬರ್ 3ರಂದು ನ್ಯೂಜೆರ್ಸಿಯಲ್ಲಿ ಈ ಗೀತಗುಚ್ಛ ಬಿಡುಗಡೆಯಾಗಲಿದೆ. ಪ್ರಖ್ಯಾತ ಗಾಯಕ-ಗಾಯಕಿಯರು ಹಾಡಿರುವ 300 ಹಾಡುಗಳನ್ನು ಒಟ್ಟು ಮಾಡಿ ಹೊರತರುತ್ತಿರುವುದು ಈ ಗೀತಗುಚ್ಛದ ವಿಶೇಷ.
ಈ ಗೀತಗುಚ್ಛದಲ್ಲಿ ಒಟ್ಟು ಐದು ಸಿಡಿಗಳಿದ್ದು ಒಂದೊಂದು ಸಿಡಿಗೂ ಒಂದೊಂದು ಹೆಸರನ್ನು ನೀಡಲಾಗಿದೆ. ನನ್ನ ಹೃದಯವ ನಿನಗೆ ನೀಡಿದೆ, ಬೃಂದಾವನಕೆ ಹಾಲನು ಮಾರಲು, ಕರುಣಾಳು ಬಾ ಬೆಳಕೆ, ಆಡು ಬಾ ನವಿಲೆ ಎಂದು ಬಿಡಿಬಿಡಿಯಾಗಿ ಹೆಸರುಗಳನ್ನು ನೀಡಲಾಗಿದೆ. ಗೀತಗುಚ್ಛದ ಬೆಲೆ 15 ಡಾಲರ್ ಗಳು.
ಪಿ ಕಾಳಿಂಗರಾಯ, ಮೈಸೂರು ಅನಂತಸ್ವಾಮಿ, ರತ್ನಮಾಲ ಪ್ರಕಾಶ್, ಸಿ ಅಶ್ವತ್ಥ್ ಹೀಗೆ ಪ್ರಖ್ಯಾತ ಗಾಯಕರು ಹಾಡಿರುವ ಹಾಡುಗಳು ಕೇಳುಗರ ಮನಸೂರೆಗೊಳ್ಳುತ್ತವೆ. ಹೂವು ಹೊರಳುವವು, ಯಾವ ಮೋಹನ ಮುರಳಿ, ಒಂದೇ ಒಂದೇ ನಾವೆಲ್ಲರು ಒಂದೆ, ನೀನು ಮುಗಿಲು ನಾನು ನೆಲ....ಹೀಗೆ ವೈವಿಧ್ಯಮಯ ಸಂಗೀತ, ಸಾಹಿತ್ಯವನ್ನು ಉಣಬಡಿಸುತ್ತದೆ. ಸಿಡಿಯನ್ನು ಸೆಪ್ಟೆಂಬರ್ 3ರಂದೇ ರಾಜ್ಯದಲ್ಲೂ ಬಿಡುಗಡೆ ಮಾಡುವುದಾಗಿ ಲಹರಿ ವೇಲು ದಟ್ಸ್ ಕನ್ನಡಕ್ಕೆ ತಿಳಿಸಿದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications