ಅಮೆರಿಕಾ ಸಮ್ಮೇಳನದಲ್ಲಿ ಭಾಗವಹಿಸುವವರ ದೃಷ್ಟಿಕೋನ
'ಅಮೆರಿಕದ ಸಮ್ಮೇಳನಗಳು ಕನ್ನಡ ಸಮ್ಮೇಳನಕ್ಕಿಂತಲೂ ಹೆಚ್ಚಾಗಿ ಕನ್ನಡಿಗರ ಸಮ್ಮಿಲನ' ಎಂದು ದಟ್ಸ್ಕನ್ನಡ ಡಾಟ್ ಕಾಮ್ನ ಸಂಪಾದಕರಾದ ಶಾಮಸುಂದರ್ ಒಂದು ಆತ್ಮೀಯ ಸಂದರ್ಭದಲ್ಲಿ ನುಡಿದಿದ್ದರು. ಬರುವವರಲ್ಲಿ ಬಹಳಷ್ಟು ಮಂದಿ ತಮ್ಮ ಸ್ನೇಹಿತರು ಮತ್ತು ನೆಂಟರಿಷ್ಟರನ್ನು ಭೇಟಿ ಮಾಡಲೆಂದು ಬರುವವರು.
ಸಿಯಾಟಲ್ ನಗರದಲ್ಲಿರುವ ತಂಗಿ ಮತ್ತು ಸ್ಯಾನ್ಫ್ರಾನ್ಸಿಸ್ಕೋನಲ್ಲಿರುವ ಅಣ್ಣ ಸಂಸಾರ ಸಮೇತ ಮೂರು ದಿನ ಬೆರೆತು ಕಳೆಯಲು ಲಾಸ್ ಏಂಜಲಿಸ್ನಲ್ಲಿ ನಡೆಯುವ ಸಮ್ಮೇಳನ ಒಂದು ಒಳ್ಳೆಯ ಅವಕಾಶವಲ್ಲದೆ ಮತ್ತಿನ್ನೇನು?
ಈ ಬಂಧು ಮಿತ್ರರ ಮಿಲನದಿಂದ ಸಮ್ಮೇಳನಕ್ಕೆ ಒಂದು ರೀತಿಯಲ್ಲಿ ಮದುವೆಮನೆಯ ಕಳೆ ಕಟ್ಟುವುದಿಲ್ಲವೇನು. ರೇಷ್ಮೇಸೀರೆಯುಟ್ಟು ನಲಿಯುವ, ಜೊತೆಯಾಗಿ ಕುಳಿತು ಹಾಸ್ಯದ ಮಾತುಗಳ ನಡುವೆ ಊಟ ತಿಂಡಿ ಮಾಡುವ ಮತ್ತು ಕುರ್ಚಿಗಳನ್ನು ದುಂಡಗೆ ಜೋಡಿಸಿಕೊಂಡು ಕುಳಿತು ರಸವತ್ತಾಗಿ ಹರಟೆಕೊಚ್ಚುವ ಮದುವೆಮನೆಯ ಸಂಭ್ರಮ. ಈ ನಲಿವು ಅಮೆರಿಕನ್ನಡಿಗರಿಗೆ ಈ ತರಹದ ಸಮಾರಂಭಗಳಲ್ಲದೆ ಮತ್ತೆಲ್ಲಿ ಸಿಗಬೇಕು?
ಯಕ್ಷಗಾನದ ಭಾಗವತರು ಪೂತನೀಸಂಹಾರದ ರಸವತ್ತಾದ ಘಟ್ಟದಲ್ಲಿರುವಾಗ ಮುಂದಿನ ಸಾಲಿನಲ್ಲಿ ಇಬ್ಬರು ಹೆಂಗಸರು ಸಂಧಿಸಿ ಮುಖ ಅರಳಿಸಿಕೊಂಡು ಯಾವಾಗ್ ಬಂದ್ಯೇ ವಾಸಂತೀ? ನೀನು ಎಲ್ಎ ಬಿಟ್ಟ್ಮೇಲೆ ಮತ್ತೆ ನೋಡ್ಲೇಇಲ್ವಲೇ?' ಎಂದು ಆತ್ಮೀಯವಾಗಿ ತಬ್ಬಿಕೊಂಡರೆ ಆಗ ನೀವು ಸ್ನೇಹಿತೆಯರು ಒಂದಾದ ಆ ಅಮೃತ ಘಳಿಗೆಗಾಗಿ ಸಂತೋಷಿಸುತ್ತೀರೋ ಅಥವಾ ಭಾಗವತರ ಪ್ರಸಂಗಕ್ಕಾದ 'ಅಧಿಕಪ್ರಸಂಗ' ಎಂದು ದುಃಖಿಸುತ್ತೀರೋ? ಮದುವೆ ಮನೆಯ ಸಂಗೀತಗೋಷ್ಠಿಯನ್ನು ಕೂತು ಕೇಳಲು ವರನ ಅಕ್ಕನಿಗೆಲ್ಲಿ ಸಂಯಮವಿರುತ್ತದೆ?
ಬಂಧು ಮಿತ್ರರನ್ನು ಭೇಟಿ ಮಾಡುವುದರಿಂದ ಹಿಡಿದು ಮದುವೆಯ ವಯಸ್ಸಿಗೆ ಬಂದ ಮಕ್ಕಳಿಗೆ ಸಂಬಂಧಗಳನ್ನು ಹುಡುಕುವ ಲೆಕ್ಕಾಚಾರದ ತನಕ ನಾನಾ ಕಾರಣಗಳಿಗೆ ಮತ್ತು ಸಂಭ್ರಮಗಳಿಗೆ ಅಮೆರಿಕದ ಕನ್ನಡಿಗರು ಒಂದು ಕಡೆ ಸೇರುತ್ತಾರೆ. ಅವರ ದೃಷ್ಟಿಯಲ್ಲಿ ಸಮ್ಮೇಳನ ಯಶಸ್ವಿಯಾಗುವುದು ಅವರ ಈ ಮಿಲನವು ಯಶಸ್ವಿಯಾದಾಗಲೇ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications