ಅಕ್ಕ ಸಮ್ಮೇಳನದಲ್ಲಿ ಅಡಿಗಾಸ್ ಅಡುಗೆ

ಬೆಂಗಳೂರಿನ ಏಟ್ರಿಯಾ ಹೋಟೆಲಿನಲ್ಲಿ ಗುರುವಾರ ಮುಸ್ಸಂಜೆ ಕರೆಯಲಾಗಿದ್ದ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಅಕ್ಕ ಸಂಸ್ಥೆಯ ಮುಖ್ಯಸ್ಥ ಅಮರನಾಥ್ ಗೌಡ ಈ ವಿಷಯ ಪ್ರಕಟಿಸಿದರು. ಆರನೇ ಅಕ್ಕ ಸಮ್ಮೇಳನ ಹಲವು ಪ್ರಥಮಗಳಿಗೆ ಮುನ್ನುಡಿ ಬರೆಯಲು ಉದ್ದೇಶಿಸಿದ್ದು ಅವುಗಳಲ್ಲಿ ಕರ್ನಾಟಕದಿಂದಲೇ ಪಾಕಪ್ರವೀಣರನ್ನು ಆಮಂತ್ರಿಸಿ ಆರೇಳು ಸಾವಿರ ಕನ್ನಡಿಗರಿಗೆ ಅಡುಗೆ ಮಾಡಿಸುವುದು ಒಂದು ಐತಿಹಾಸಿಕ ಪ್ರಯತ್ನವಾಗಲಿದೆ ಎಂದು ಅವರು ಹೇಳಿದರು.
ಈ ಮುಂಚೆ ನಡೆದ ಸಮ್ಮೇಳನಗಳಲ್ಲಿ ಅಮೆರಿಕಾದಲ್ಲಿ ಹೋಟೆಲ್ ಉದ್ಯಮ ಇಟ್ಟುಕೊಂಡಿರುವ ಭಾರತೀಯ ಕೆಟರಿಂಗ್ ಕಲಾವಿದರಿಂದ ಅಡುಗೆ ಮಾಡಿಸಲಾಗುತ್ತಿತ್ತು. ಈ ಹೊಟೇಲುಗಳ ಅಡುಗೆ ಭಟ್ಟರು ತಯಾರಿಸುವ ತಿಂಡಿ ತಿನಿಸುಗಳು ಕರ್ನಾಟಕ ಶೈಲಿಯದ್ದೇ ಆಗಿರುತ್ತದಾದರೂ, ಎಲ್ಲೋ ಒಂದು ಕಡೆ ಊಟದ ಗಮ್ಮತ್ತು ಮಿಸ್ ಆಗುತ್ತಿತ್ತು. ಅಲ್ಲಿನ ಅಡುಗೆ ಭಟ್ಟರಿಗೆ ಚಪಾತಿ ಹಿಟ್ಟು ಲಟ್ಟಿಸುವುದು ಮತ್ತು ಹದವಾಗಿ ಬೇಯಿಸುವ ಕಲೆ ಕರಗತವಾಗಿರುವುದಿಲ್ಲ. ಅಮೆರಿಕಾದ ಬಣ್ಣಗೆಟ್ಟ ಚಪಾತಿಗಳು ಬರಿಟೋಸ್ ಅಥವಾ ಸಬ್ ವೇಗಿಂತ ರುಚಿಹೀನವಾಗಿರುವುದು ಸಮ್ಮೇಳನಗಳಲ್ಲಿ ಊಟ ಮಾಡಿದವರಿಗೇ ಗೊತ್ತಿರುತ್ತದೆ.
ಅದು ಹೇಗೂ ಇರಲಿ, ಸಮ್ಮೇಳನದ ಪ್ರಮುಖ ಆಕರ್ಷಣೆಗಳಲ್ಲಿ ರುಚಿಯಾದ ಊಟ ತಿಂಡಿ ತಿನಿಸುಗಳಿಗೆ ಅಗ್ರಸ್ಥಾನ. ಎರಡು ತಿಂಡಿ, ಐದು ಊಟ, ಮೂರು ಲಘು ಉಪಾಹಾರ, ಮತ್ತು ಬೇಕೆನಿಸಿದಾಗ ಫಿಲ್ಟರ್ ಕಾಫಿ ಸಿಕ್ಕರೆ ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂದು ಕನ್ನಡ ನಾಲಗೆಗಳು ಹೇಳುತ್ತವೆ. ಬೇಡಿಕೆ ಇಂತಿರುವಾಗ ಸಮ್ಮೇಳನ ಸಮಿತಿಯವರು ಕರ್ನಾಟಕ ನಳಪಾಕ ನಿರ್ಮಿತಿಗೆ ಕಾಳಜಿವಹಿಸುವುದು ಅತ್ಯಗತ್ಯ. ಈ ದಿಸೆಯಲ್ಲಿ ಅಕ್ಕ ಇಟ್ಟಿರುವ ದಿಟ್ಟ ಹೆಜ್ಜೆ 'ಸಮ್ಮೇಳನಾರ್ಥಿಗಳಿಗೆ ಅಡಿಗರ ಅಡುಗೆ'.
ಹೆಮ್ಮೆಯ ಕನ್ನಡಿಗ ವಾಸುದೇವ ಅಡಿಗ ಬಗ್ಗೆ »
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications