ಕಳೆಯೇರುತ್ತಿರುವ ನಾವಿಕ ವಿಶ್ವ ಕನ್ನಡ ಸಮ್ಮೇಳನ

ಸಮ್ಮೇಳನದ ಪ್ರಮುಖ ಅಂಗವಾಗಿರುವ ವಾಣಿಜ್ಯ ಫೋರಂಗೆ ಅಮೆರಿಕಾ ಕಾಲಮಾನ ಪ್ರಕಾರ ಮಧ್ಯಾಹ್ನ 12.30ಕ್ಕೆ ಕರ್ನಾಟಕದ ಎನ್ಆರ್ಐ ಸೆಲ್ ಅಧ್ಯಕ್ಷ ಗಣೇಶ್ ಕಾರ್ನಿಕ್ ಅವರು ಚಾಲನೆ ನೀಡಲಿದ್ದಾರೆ. ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಈ ವೇದಿಕೆಯಲ್ಲಿ ಚರ್ಚೆಯಾಗಲಿದ್ದು ಸ್ಥಳೀಯರು ಮತ್ತು ಕರ್ನಾಟಕದಿಂದ ಆಗಮಿಸಿರುವ ಉದ್ಯಮಿಗಳು ಸೇರಿ 200 ಜನ ಭಾಗವಹಿಸಲಿದ್ದಾರೆ. ಇದು 12.30ರಿಂದ ಸಂಜೆ 5.30ರವರೆಗೆ ನಡೆಯಲಿದೆ.
ನಂತರ ಸಂಜೆ 6 ಗಂಟೆಗೆ ಸಮ್ಮೇಳನವನ್ನು ತಾಯಿ ಭುವನೇಶ್ವರಿಗೆ ತೆಂಗಿನಕಾಯಿ ಒಡೆದು, ಹೂವೇರಿಸಿ, ಮಂಗಳಾರತಿ ಬೆಳಗುವ ಮುಖಾಂತರ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಗುತ್ತದೆ. ಉದ್ಘಾಟನೆಯ ನಂತರ ಸಮ್ಮೇಳನಾಧ್ಯಕ್ಷರಾಗಿರುವ ಶ್ರೀ ಅಯ್ಯಂಗಾರ್ ಅವರು ಜಾಗತಿಕ ಕನ್ನಡಿಗರನ್ನುದ್ದೇಶಿಸಿ ಸ್ವಾಗತ ಭಾಷಣ ಮಾಡಲಿದ್ದಾರೆ. ಭಾಷಣದಲ್ಲಿ ಸಮ್ಮೇಳನದ ಉದ್ದೇಶ, ರೂಪರೇಶೆ, ಸಿದ್ಧತೆ, ವೈಶಿಷ್ಯತೆ ಕುರಿತು ಅಯ್ಯಂಗಾರ್ ಅವರು ವಿವರಣೆ ನೀಡಲಿದ್ದಾರೆ. ನಂತರ ಭೋಜನ ಶಾಲೆಯ ದ್ವಾರ ತೆರೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು
ಸಮೃದ್ಧ ಭೋಜನಾನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಸಂಗೀತ, ಹಾಸ್ಯ, ಸಾಹಿತ್ಯ ಲೋಕದಲ್ಲಿ ತೇಲಾಡಿಸಲಿವೆ. ಆರಂಭದಲ್ಲಿ ಚಿತ್ರದುರ್ಗದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಜನಾರ್ಧನಸ್ವಾಮಿ ಅವರು 'ನಾನು, ನನ್ನ ಬದುಕು' ಎಂಬ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ.
ಇತರ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರ
* ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ತಂಡದವರಿಂದ ದಿವಂಗತ ಸಿ. ಅಶ್ವತ್ಥ್ ಸ್ಮರಣಾಂಜಲಿ.
* ದಿವ್ಯಾ ರಘುರಾಮ್ ಮತ್ತು ಅಜಯ್ ವಾರಿಯರ್ ಅವರಿಂದ ಸಂಗೀತಸುಧೆ.
* ಸ್ಥಳೀಯ ಪ್ರತಿಭೆ ಬದರಿ ಪ್ರಸಾದ್ ಮತ್ತು ಸಂಗಡಿಗರಿಂದ ಸಿನೆಮಾ ಹಾಡುಗಳು.
* ಪ್ರೊ.ಕೃಷ್ಣೇಗೌಡ ಮತ್ತು ಪ್ರೊ.ಪುತ್ತೂರಾಯ ಅವರಿಂದ ಹಾಸ್ಯಲೋಕ.
ಕಾವ್ಯಧಾರೆ
ನಂತರ ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿರುವ 'ಕಾವ್ಯಧಾರೆ' ವಿಡಿಯೋ ಕಾನ್ಫರೆನ್ಸ್ ಕವಿತಾಪ್ರಿಯರಿಗೆ ರಸದೌತಣ ಬಡಿಸಲಿದೆ. 7 ಗಂಟೆಗೆ ಇನ್ನೊಂದು ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಡಾ. ಯುಆರ್ ಅನಂತಮೂರ್ತಿ, ಡಾ. ಚಂದ್ರಶೇಖರ ಕಂಬಾರ, ಎಸ್ ಜಿ ಸಿದ್ದರಾಮಯ್ಯ ಮತ್ತು ಡಾ. ಎಚ್ಎಸ್ ವೆಂಕಟೇಶಮೂರ್ತಿ, ಹಾಗು ಅಮೆರಿಕಾದಿಂದ ಸುಕುಮಾರ್ ರಘುರಾಮ್, ಜ್ಯೋತಿ ಮಹಾದೇವ್, ಕುಂಭಾಸಿ ಶ್ರೀನಿವಾಸ ಭಟ್, ಸವಿತಾ ರವಿಶಂಕರ್ ಅವರುಗಳು ಭಾಗವಹಿಸುತ್ತಿದ್ದಾರೆ. ಕಾವ್ಯಧಾರೆ ಕಾರ್ಯಕ್ರಮದ ಸಂಯೋಜನೆಯನ್ನು ದತ್ತಾತ್ರಿ ರಾಮಣ್ಣ ಮತ್ತು ಶ್ರೀಕಾಂತ್ ಬಾಬು ಅವರು ಮಾಡಲಿದ್ದಾರೆ.
ವಸ್ತು ಪ್ರದರ್ಶನ
ಅಮೆರಿಕಾದ ಟಿವಿ ವಾಹಿನಿ ಮತ್ತು ದಿನಪತ್ರಿಕೆಗಳಲ್ಲಿ ಭಾರೀ ಪ್ರಚಾರ ಪಡೆದಿರುವ ವಸ್ತು ಪ್ರದರ್ಶನ ಮಳಿಗೆಗಳನ್ನು ಬೆಂಗಳೂರಿನ ಯುನೈಟೆಡ್ ಲ್ಯಾಂಡ್ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಇದರಲ್ಲಿ ಸೀರೆ, ಆಭರಣ, ಕರಕುಶಲ ವಸ್ತು, ಪೀಠೋಪಕರಣ, ಕಾಫಿ ಸೇರಿದಂತೆ ಭಾರತೀಯ ಉತ್ಪನ್ನಗಳ ವಸ್ತುಗಳು ನೋಡುಗರನ್ನು ಸೆಳೆಯಲಿವೆ. ಈ ಪ್ರದರ್ಶನದ ವಿಶೇಷತೆಯೇನೆಂದರೆ, ಮೂರು ದಿನಗಳ ಕಾಲವೂ ಸಾರ್ವಜನಿಕರಿಗೆ ಮುಕ್ತ ಪ್ರವೇಶ ದೊರೆಯಲಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications