ಅಂಥವನು ಸಿಕ್ಕರೆ ನನ್ನ ಕೈಬಿಟ್ಟಿಯಾ ಮತ್ತೆ?

ಹೀಗೆ ದಿನಗಳು ವರುಷಗಳಂತೆ ಉರುಳುತ್ತಿದ್ದವು. ಅವಳಿಂದ ಯಾಕೋ ಪತ್ರ / ಫೋನ್ ಬರೋದು ನಿಂತಿತ್ತು. ನಾನೇ ಮಾಡಿ ಕೇಳೋಣ ಅಂದರೆ ಅವರ ಮನೆಯಲ್ಲಿ ಫೋನ್ ಬಂದ್ ಆಗಿತ್ತು. ಕೊನೆಗೆ ನನ್ನ ರೂಂಮೇಟ್ ಗೆಳೆಯನಿಗೆ ಹೇಳಿ ಒಂದು ಬಾರಿ ನೋಡಿ ಮಾತಾಡಿ ಬಾ ಅಂದೆ. ಅವನಿಂದ "ಗುರು ..ಯಾಕೋ ಅವಳು ಒಂಥರಾ ಚೇಂಜ್ ಆಗಿದಾಳೆ ಗುರು.. ಸರಿಯಾಗಿ ಮಾತಾಡಲಿಲ್ಲ" ಬಂದ ಉತ್ತರ ಕೇಳಿ ಏನೋ ಎಡವಟ್ಟು ಹಾಗಿರೋ ಹಾಗಿದೆ ಅನ್ನಿಸಿತ್ತು. ಹೇಗೋ ಅವಳ ಕಾಲೇಜ್ನ ಫೋನ್ ನಂಬರ್ ಹುಡುಕಿ, ಕಾಲ್ ಮಾಡಿದರೆ "ಹೇಗಿದಿಯಾ?" ಅಂತ ಒಂತರಾ ಒರಟು ದ್ವನಿಯಲ್ಲಿ ಮಾತಾಡಿ ಟಕ್ ಅಂತ ಇಟ್ಟುಬಿಟ್ಟಿದ್ದಳು.
ವಾಪಸು ಹೋಗಿ ಏನಾಗಿದೆ ಅಂತ ವಿಚಾರಿಸೋಣ ಅಂತ ರಜಾ ಕೇಳಿದರೆ ಬಾಸ್.. ಇನ್ನು ಒಂದೇ ತಿಂಗಳಿದೆ.. ಬೇಗ ಪ್ರಾಜೆಕ್ಟ್ ಕೆಲಸ ಮುಗಿಸಿ ಬೆಂಗಳೂರು ಆಫೀಸಿಗೆ ಹೋಗುವೆಯಂತೆ ಅಂದಾಗ ದಿಕ್ಕೇ ತೋಚದಂತಾಗಿ ಅವಳದೇ ಚಿಂತೆಯಲ್ಲಿದ್ದೆ. ಒಂದು ದಿನ ಬೆಳಿಗ್ಗೆನೆ ಫೋನ್ ರಿಂಗಾದಾಗ, ಖುಷಿಯಾಗಿ ಚಿತ್ರಳೇ ಇರಬೇಕೆಂದು "ಹಲೋ ಹನಿ" ಅಂದಿದ್ದೆ ...ಲೇ ..ನಾನು ಕಣೋ ನಿನ್ನ ರೂಂಮೇಟ್ ರಘು ಮಾತಾಡ್ತಿರೋದು" ಅಂದಾಗ... ಯಾಕೋ ಎಡಗಣ್ಣು ಪಟ ಪಟ ಅಂತ ಬಡಿದುಕೊಂಡಿತ್ತು.. "ಗುರು ...ಅರ್ಜೆಂಟ್ ಆಗಿ ನೀ ಬೆಂಗಳೂರಿಗೆ ಬರಬೇಕು ...ಚಿತ್ರಳ ಮದುವೆ ಕಣೋ ಈದಿನ" ಅಂತ ಅವ ಅಂದಾಗ ಆಕಾಶವೇ ತಲೆಮೇಲೆ ಬಿದ್ದಂತಾಗಿ ಅಲ್ಲೇ ಕುಸಿದು ಕುಳಿತಿದ್ದೆ ..ಫೋನ್ ನಲ್ಲಿ ಅವನ ವಾಯ್ಸ್ ಇನ್ನು ಕೇಳಿಸಿ ಬರುತ್ತಿತ್ತು.
ಅಂದೇ ಹೊರಟು ಮರುದಿನವೇ ಬೆಂಗಳೂರಿಗೆ ಬಂದಿಳಿದಿದ್ದೆ. ಹೋಗಿ ನೋಡಿದರೆ ಅವಳ ಮನೆ ಮದುವೆ ಮನೆ ಅಲಂಕಾರದಿಂದ ಇನ್ನು ಕಂಗೊಳಿಸುತ್ತಿತ್ತು. ಒಳಗಡೆ ಕಿಲ ಕಿಲ ಅಂತ ಗೆಳತಿಯರೊಂದಿಗೆ ನಗಾಡುತ್ತ ನಿಂತಿದ್ದಳು ನನ್ನ ಚಿತ್ರ. ಕೈಯಲ್ಲಿ ಇನ್ನು ಹಸಿ ಹಸಿಯಾಗಿ ಕಾಣುತ್ತಿದ್ದ ಮೆಹಂದಿ, ಕಾಲಲ್ಲಿ ಅರಿಶಿಣದ ಕಲೆ... ಹೇಗೋ ಅವಳನ್ನು ಒಂಟಿಯಾಗಿ ಭೇಟಿ ಮಾಡಿ .. ಏನಿದೆಲ್ಲ ವಿಚಿತ್ರ ಅಂತಾ ಕೇಳಿದ್ದಕ್ಕೆ ತೋರಿದ್ದಳು ಅವಳ ಕತ್ತಿನಲ್ಲಿದ್ದ ಕರಿಮಣಿ ಸರವ!
"ನಂಗೆ ಜಾಸ್ತಿ ಹೊತ್ತು ಮಾತಾಡಲು ಸಮಯವಿಲ್ಲ... ನಾ ಇವರನ್ನು ಮೆಚ್ಚಿ ಮದುವೆಯಾಗಿದ್ದೇನೆ. ಒಳ್ಳೆ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಲಕ್ಷಾಂತರ ದುಡ್ಡು ಬಾರೋ ಕೆಲಸ ಇವರಿಗೆ. ಅಲ್ಲದೆ ಮುಂದಿನ ತಿಂಗಳು ಅಮೆರಿಕಾಕ್ಕೆ ಹೋಗುವ ಚಾನ್ಸ್ ಇದೆ. ನೀ ಹಿಂದಿನದೆಲ್ಲ ಮರೆತು ಬೇರೆ ಯಾರನ್ನಾದರು ಮದುವೆ ಆಗು" ಅಂತಾ ಹೇಳಿ ಬರ್ರಂತ ಹೋದಳು.
ಆಕಾಶವೆ ತಲೆಮೇಲೆ ಬಿದ್ದ ಹಾಗೆ ಆಗಿ ಇನ್ನೇನು ಭೂಮಿ ಬಿರಿಯುವುದೊಂದೇ ಬಾಕಿ ಇತ್ತು ನಂಗೆ. ಅಳುವುದೋ , ನಗುವುದೋ ಒಂದು ಗೊತ್ತಾಗದೆ ಅಲ್ಲಿಂದ ಹೊರಬಂದು ಸೀದಾ ಮತ್ತೆ ಪರ್ಮನೆಂಟಾಗಿ ಡೆಲ್ಲಿಗೆ ಟ್ರಾನ್ಸ್ ಫರ್ ಮಾಡಿಸಿಕೊಂಡು ಬಂದಿದ್ದೆ.
ಅಂದು ತೋರಿಸಿದೆ ನಿನಗೆ
ಸಿನಿಮಾ "ಕಹೋ ನಾ ಪ್ಯಾರ್ ಹೈ"
ಇಂದು ಕೇಳುತ್ತಿರುವೆ ನಿನಗೆ
ಹೇಳು "ಐಸ್ ಕ್ಯೋ ಕಿಯಾ ಹೈ?"
ವರುಷಗಳೇ ಕಳೆದವು... ಆದರೆ ನನ್ನ ಹೃದಯದಿಂದ ಕಿತ್ತಾಕಲಾಗಲಿಲ್ಲ ಅವಳ ಚಿತ್ರ ... ಮತ್ತೆ ಬರುತಿರುವ ಈ "ಪ್ರೇಮಿಗಳ ದಿನ" ತರುತಿದೆ ಅವಳ ನೆನಪು ಪುನಃ ..
ಮನ ಬೇಡವೆಂದರೂ, ಕೈಗಳು
ಬರೆಯುತ್ತಿರುವುದು ನಿನ್ನ ಈ ಚಿತ್ರ ..
ಮನ ಬಯಸುತ್ತಿದೆ ಆಗು ನೀ
ಮುಂದಿನ ಜನ್ಮದಲ್ಲಾದರೂ ನನ್ನ "ಚಿತ್ರ"!
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications